Chamber of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದ ಸಹಯೋಗದಲ್ಲಿ ಡಿಸೆಂಬರ್ 16ರಂದು ಸಂಜೆ 5ಕ್ಕೆ ಸಂಘದ ಸಭಾಂಗಣದಲ್ಲಿ ಧ್ಯಾನ, ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ವಾಣಿಜ್ಯ ಮತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಅಧ್ಯಕ್ಷತೆ ವಹಿಸುವರು. ಕಾರ್ತಿಕ್ ಕೃಷ್ಣಜೀ ಅವರು ಉಪನ್ಯಾಸ ನೀಡುವರು.
Chamber of Commerce Shivamogga ಲಯಬದ್ಧ ಉಸಿರಾಟದ ಮಹತ್ವ ಕಾರ್ಯಗಾರವನ್ನು ನಡೆಸಿಕೊಡುವರು. ಲಯ ಬದ್ಧ ಉಸಿರಾಟದಿಂದ ಶ್ವಾಸಕೋಶದ ಮೂಲಕ ಒತ್ತಡವನ್ನು ಹೇಗೆ ನಿರ್ವಹಿಸಬಹುದು. ದೈಹಿಕ ಮತ್ತು ಮಾನಸಿಕ ಮಟ್ಟದಲ್ಲಿ ನಾವು ಪಡೆಯುವ ಲಾಭಗಳು, ವಿಶೇಷವಾಗಿ ವ್ಯಾಪಾರಸ್ಥರು, ಉದ್ಯೋಗಸ್ಥರು, ಕೈಗಾರಿಕೋದ್ಯಮಿಗಳು, ಮಹಿಳಾ ಉದ್ಯಮಿಗಳು, ವೃತ್ತಿಪರರು, ಕಾರ್ಮಿಕರು, ದಿನನಿತ್ಯದ ಒತ್ತಡ, ಜವಾಬ್ದಾರಿಗಳು ಮತ್ತು ಒದ್ದಾಟದ ಜೀವನದಲ್ಲಿ ತಂತ್ರಗಳು ಹೇಗೆ ಸಹಾಯಕವಾಗುತ್ತವೆ ಎಂಬುದನ್ನು ವಿವರಿಸುವರು ಎಂದು ಸಂಘದ ಕಾರ್ಯದರ್ಶಿ ಎ.ಎಂ.ಸುರೇಶ್ ತಿಳಿಸಿದ್ದಾರೆ
