Thursday, March 19, 2026
Thursday, March 19, 2026

Shamanur Shivashankarappa ದಾವಣಗೆರೆಯ ದೀಪದಂತಿದ್ದ ಶಾಮನೂರು ಶಿವಶಂಕರಪ್ಪ

Date:

Shamanur Shivashankarappa ದಾವಣಗೆರೆಯ ಹಿರಿಯ ಸಮಾಜ ಸೇವಾಧುರಂಧರ ರಾಜಕಾರಣಿ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ. ವಯೋಸಹಜ ಅಸ್ವಸ್ಥತೆಯಿಂದ ಅವರು ಬಳಲುತ್ತಿದ್ದರು
ಎಂದು ಕುಟುಂಬ ವಲಯದವರು ಹೇಳಿದ್ದಾರೆ.
ತೊಂಭತ್ತೈದು ವರ್ಷದ ಹಿರಿಯ ಚೇತನ ,ದಾವಣಗೆರೆಯ ದೀನರ ದೀಪವಾಗಿದ್ದ
ಶಿವಶಂಕರಪ್ಪ ಅಗಲಿಕೆ ನಾಡಿಗೆ ಅಪಾರ ನಷ್ಟವುಂಟುಮಾಡಿದೆ.
ದಾವಣಗೆರೆಯ ನಗರಸಭೆಯ ಸದಸ್ಯರಾಗಿ ,ಜನಾನುರಾಗಿ ಬೆಳೆದವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಸ್ಥಳೀಯ ಮತ್ತು ನಾಡಿನ ರಾಜಕೀಯ ಕ್ಷೇತ್ರ ಅವರನ್ನ ಬರಮಾಡಿಕೊಂಡಿತು.
ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಸಮುದಾಯದ ಗಟ್ಟಿ ದನಿಯಾಗಿದ್ದರು.
ಉದ್ಯಮಿಯಾಗಿ ಅಪಾರ ಜ್ಞಾನ,ಅನುಭವ ಶ್ರೀಮಂತರಾಗಿದ್ದರು.
ಸಮಾಜ ಸೇವೆಯಲ್ಲಂತೂ ಶಾಮನೂರು ಎಂಬ ಹೆಸರೇ ಸಾಕು ಅಸಂಖ್ಯ ವ್ಯಕ್ತಿಗಳು,ಕುಟುಂಬಗಳು, ಸಂಘ ಸಂಸ್ಥೆಗಳಿಗೆ ಉದಾರ ದೇಣಿಗೆ ನೀಡಿದ ದಾನಶೂರ ಕರ್ಣನಂತೆ ಮಿಂಚಿದ್ದರು.
Shamanur Shivashankarappa ಶಿಕ್ಷಣ ಕ್ಷೇತ್ರದಲ್ಲಿ ಅವರು ಮುನ್ನಡೆಸಿದ ಬಾಪೂಜಿ ಶಿಕ್ಷಣ ಸಂಸ್ಥೆ ದೇಶದಲ್ಲೇ ಖ್ಯಾತಿ ಹೊಂದಿದೆ.
ವೈದ್ಯಕೀಯ ,ಕಾನೂನು ,ಪದವಿ, ತಾಂತ್ರಿಕ ಕಾಲೇಜುಗಳ ಸ್ಥಾಪನೆಯಿಂದ ವಿದ್ಯಾಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ್ದರು. ಪ್ರಸ್ತುತ
ವಿಧಾನಸಭೆಯ ಹಿರಿಯ ಸದಸ್ಯರಾಗಿದ್ದರು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಶಾಮನೂರರ ಸೇವೆ ದಾಖಲೆಯಾಗಿದೆ.
ಶಾಮನೂರು ಶಿವಶಂಕರಪ್ಪನವರ ನಿಧನಕ್ಕೆ ನಾಡಿನ ಗಣ್ಯಾತಿಗಣ್ಯರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟದ ಸದಸ್ಯರು, ಶಾಸಕ ವೃಂದ, ಸಂಸದರು ಶಾಮನೂರರ ನಿಧನಕ್ಕೆ ಕಂಬಿನಿ ಮಿಡಿದಿದ್ದಾರೆ.
ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶಿವಶಂಕರಪ್ಪನವರ ಜನಪರ ಕಾಳಜಿ ಮತ್ತು ಸಾಧನೆಗಳನ್ನ ಕೊಂಡಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...