Tuesday, December 9, 2025
Tuesday, December 9, 2025

Areca Garden Shimoga ಅತೀ ಕನಿಷ್ಠ ವಿಮೆ ಹಣ ಪರಿಹಾರ. ಸೂಕ್ತ ಪರಿಹಾರಕ್ಕೆ ಹಕ್ಕೋತ್ತಾಯ ಮಾಡಲು ಸಂಘಟನೆಯ ಕರೆ.

Date:

Areca Garden Shimoga ಅಡಿಕೆ ಬೆಳೆಗಾರ ಇವತ್ತು ಎಲೆ ಚುಕ್ಕೆ, ಕೊಳೆರೋಗ ,ಕಾಡುಪ್ರಾಣಿಗಳ ಹಾವಳಿ ಹೀಗೆ ಎಲ್ಲಾ ರೀತಿಯ ಸಂಕಷ್ಟಗಳಿಂದ ತತ್ತರಿಸಿ ಹೋಗಿದ್ದು ಗಾಯದ ಮೇಲೆ ಬರೆ ಎಳೆದಂತೆ ಅತಿವೃಷ್ಟಿಯಿಂದ ಇರುವ ಫಸಲೂ ಕೂಡ ನಷ್ಟ ಹೊಂದಿದೆ. ಆಪತ್ ಕಾಲಕ್ಕೆ ಆಗಲಿ ಎಂದು ಕಟ್ಟಿದ ಇನ್ಸೂರೆನ್ಸ್ ಹಣವು ಕೂಡ ಇನ್ಸೂರೆನ್ಸ್ ಕಂಪನಿ ಪಾಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅವೈಜ್ಞಾನಿಕ ,ರೈತ ವಿರೋಧಿ ವರದಿಯಿಂದ ಇವತ್ತು ಬೆಳೆಗಾರನಿಗೆ ಹೆಕ್ಟೇರಿಗೆ ಬರಬೇಕಾದ 128,000 /ಮೊತ್ತದ ಬದಲಾಗಿ ಆರು ನೂರು ರೂಗಳು ಕೆಲವೆಡೆ 975 ರೂಗಳು ಹೀಗೆ ಅತಿ ಕನಿಷ್ಠ ಮೊತ್ತದ ಹಣ ಬೆಳೆಗಾರನ ಖಾತೆಗೆ ಜಮೆಯಾಗಿದೆ. . ಹಾಗೂ ಬರುವ ವರ್ಷದ ವಿಮಾ ಪರಿಹಾರಕ್ಕೆ ಇದೇ ಮಾನದಂಡವೇ ಅನ್ವಯಿಸುವುದರಿಂದ ಬರುವ ಸಾಲಿನಲ್ಲಿಯೂ ಬೆಳೆಗಾರನಿಗೆ ಇದೇ ಪರಿಸ್ಥಿತಿ ಬರುವುದು ಖಂಡಿತ .ಕಟ್ಟಿದ ವಿಮೆಗೆ ಪರಿಹಾರದ ಮೊತ್ತವನ್ನ ಪಡೆಯುವುದು ಬೆಳೆಗಾರನ ಆದ್ಯ ಹಕ್ಕು .ಹಾಗಾಗಿ ಇದು ಯಾರ ವಿರುದ್ಧ ಪ್ರತಿಭಟನೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ನಮ್ಮ ಹಕ್ಕಿಗಾಗಿ ಆಗ್ರಹಿಸುವ ಹಕ್ಕೊತ್ತಾಯದ Areca Garden Shimoga ಸಭೆಯಾಗಿದೆ. ಸಂಕಷ್ಟ ಪರಿಸ್ಥಿತಿಯಲ್ಲೆಲ್ಲಾ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಅಡಿಕೆ ಬೆಳೆಗಾರರ ಪರವಾಗಿ ನಿಂತಿದ್ದು ಎಲ್ಲಾ ರೀತಿಯ ಹೋರಾಟಗಳನ್ನು ಮಾಡುತ್ತಾ ಬಂದಿದೆ . ನಾಳೆಯೂ ಕೂಡ ಬೆಳೆಗಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಕ್ಕೊತ್ತಾಯದ ಸಭೆಯನ್ನು ಕರೆಯಲಾಗಿದ್ದು ಪ್ರಾಂತ್ಯದ ಎಲ್ಲಾ ಅಡಿಕೆ ಬೆಳೆಗಾರರೂ ಇಂದು ಮಂಗಳವಾರ ಬೆಳಿಗ್ಗೆ 10:30 ಕ್ಕೆ ಸರಿಯಾಗಿ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಎದುರಿನಲ್ಲಿ ಆಗಮಿಸಿ ಸಭೆ ಸೇರಿ ನ್ಯಾಯಯುತ ಪರಿಹಾರ ಪಡೆಯುವ ಹಕ್ಕಿಗಾಗಿ ಸಂಘದ ಹೋರಾಟದಲ್ಲಿ ಕೈಜೋಡಿಸಬೇಕಾಗಿ ವಿನಂತಿಸುತ್ತಿದ್ದೇವೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

L.B. Colleges ಸಾಗರದ ಎಲ್ .ಬಿ‌.ಕಾಲೇಜಿನ ಮುಖ್ಯದ್ವಾರಕ್ಕೆ ಶಿಲಾನ್ಯಾಸ.

L.B. Colleges ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ನೆಡೆಸುತ್ತಿರುವ ಲಾಲ್ ಬಹದ್ದೂರ್ ಕಲಾ,...

Shimoga News ಮಕ್ಕಳು ಉತ್ಸಾಹದ ಚಿಲುಮೆಗಳು.ಉತ್ತಮ ಊಟ ಆಟ ಪಾಠದೊಂದಿಗೆ ಸಮಾಜದ ಅಭಿವೃದ್ಧಿ- ನ್ಯಾ.ಎಂ.ಎಸ್.ಸಂತೋಷ್

Shimoga News ಮಕ್ಕಳು ಉತ್ಸಾಹದ ಚಿಲುಮೆಗಳಾಗಿದ್ದು, ಉತ್ತಮ ಊಟ-ಆಟ-ಪಾಠದೊಂದಿಗೆ ಪ್ರಗತಿ ಹೊಂದಿ...

YADAV School Of Chess ಆನ್ ಲೈನ್ ಮೂಲಕಹಿಂದುಳಿದ & ಬಡಮಕ್ಕಳಿಗೆಒಂದು ತಿಂಗಳ ಚೆಸ್ ಕ್ರೀಡಾ ತರಬೇತಿ

YADAV School Of Chess ರಾಜೇಂದ್ರ ನಗರದಲ್ಲಿರುವ ಪ್ರತಿಷ್ಠಿತ ಯಾದವ ಸ್ಕೂಲ್...

Vallabhbhai Patel ಭ್ರಷ್ಟಾಚಾರವು ದೇಶದ ಆಂತರಿಕ ಶತ್ರು.- ಡಾ.ಹೆಚ್.ಬಿ.ಮಂಜುನಾಥ್

ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಸ್ಮರಣೆಯಲ್ಲಿ ಹಿರಿಯ ಪತ್ರಕರ್ತ ಡಾ ಎಚ್...