Thursday, March 19, 2026
Thursday, March 19, 2026

Purandara Dasa ಆರಗ ಸ್ಥಳವನ್ನು ಪುರಂದರದಾಸರ ಹುಟ್ಟೂರು ಎಂದು ಪರಿಗಣಿಸಿ, ಅಭಿವೃದ್ಧಿಪಡಿಸಿ- ಶ್ರೀಪ್ರಸನ್ನನಾಥಶ್ರೀ

Date:

Purandara Dasa ತ್ಯಾಗಮಯ ಜೀವನದ ಮೂಲಕ ದಾಸರು ನಮಗೆ ಮುಕ್ತಿ ಮಾರ್ಗ ತೋರಿಸಿದ್ದಾರೆ. ಅವರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ. ಆರಗವನ್ನು ಪುರಂದರದಾಸರ ಹುಟ್ಟೂರು ಎಂದು ಗುರುತಿಸಿ ಅಭಿವೃದ್ಧಿಪಡಿಸಬೇಕು ಎಂದು ಶ್ರೀಗಳು ಹೇಳಿದರು.
ಆರಗದಲ್ಲಿ ನಡೆದ ಪುರಂದರದಾಸರ ಕೀರ್ತನೋತ್ಸವದಲ್ಲಿ ಆದಿಚುಂಚನಗಿರಿ ಶ್ರೀಗಳು ಮಾತನಾಡಿದರು.

ಆರಗದಲ್ಲಿ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀಪ್ರಸನ್ನನಾಥ ಸ್ವಾಮಿಗಳು, 35ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ದಾಸವರೇಣ್ಯ ಪುರಂದರ ದಾಸರ ಕೀರ್ತನೋತ್ಸವದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

Purandara Dasa ಸಾಮಾನ್ಯ ಸೂತ್ರದಡಿ ಜೀವನ ಕಂಡುಕೊಳ್ಳುವ ಪ್ರಯತ್ನ ನಮ್ಮದಾದರೆ ಭಕ್ತಿ ಮೂಲಕ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ಭಗವಂತ ಅನೇಕ ಅವತಾರಗಳಲ್ಲಿ ಜಗತ್ತಿನಲ್ಲಿಕಾಣಿಸಿಕೊಂಡಿದ್ದು, ಸರಳವಾದ ಬದುಕಿಗೆ ಶಕ್ತಿ ಇದೆ ಎಂಬುದನ್ನು ನಾವುಗಳು ಗೊತ್ತು ಮಾಡಿಕೊಳ್ಳಬೇಕು. ನವಕೋಟಿ ನಾರಾಯಣ ಹೆಸರಲ್ಲಿ ಶ್ರೀಮಂತಿಕೆ ಹೊಂದಿದ್ದ ಶ್ರೀನಿವಾಸ ನಾಯಕನಿಗೆ ಸತ್ಯ ದರ್ಶನವಾದಾಗ ಭಕ್ತಿಯ ಮಹತ್ವ ಅರಿತ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...