Friday, December 5, 2025
Friday, December 5, 2025

Sagara Police ಮೂವರು ನಾಪತ್ತೆಯಾಗಿದ್ದಾರೆ, ಸಿಕ್ಕರೆ ಸಾರ್ವಜನಿಕರು ಮಾಹಿತಿ ಕೊಡಿ. ಪೊಲೀಸ್ ಪ್ರಕಟಣೆ

Date:

Sagara Police ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಜನ ಕಾಣೆಯಾಗಿದ್ದು, ಮಾಹಿತಿ ನೀಡಲು ಪ್ರಕಟಣೆ ನೀಡಿದೆ.

ಸಾಗರ ತಾಲೂಕು ಪಡವಗೋಡು ಗ್ರಾಮದ ನವೀನ್ ಹೆಚ್.ಕೆ. ಬಿನ್ ಕೆರಿಯಪ್ಪ ಎಂಬ 29 ವರ್ಷದ ಯುವಕ ಸೆ.20 ರಂದು ಶಾಮಿಯಾನ ಹಾಕಲು ಹೋಗುವುದಾಗಿ ಹೇಳಿ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಈತನ ಚಹರೆ 5.5 ಅಡಿ ಎತ್ತರ ಕೋಲುಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ.
ಹೆಗ್ಗೋಡು ಗ್ರಾಮದ ರಮೇಶ್ ಶಿವಾನಂದ ಭಟ್ ಎಂಬುವವರ ಮಗ ಅಶ್ವಿನ್ ಭಟ್ ಎಂಬ 29 ವರ್ಷದ ಯುವಕ ಏ. 05 ರಂದು ಕುಟುಂಬ ವ್ಯಾಜ್ಯದ ಸಲುವಾಗಿ ಠಾಣೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಈತನ ಚಹರೆ 5.7 ಅಡಿ ಎತ್ತರ.ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾರೆ.
ಕಮಲಾಪುರ ಆವಿನಹಳ್ಳಿ ಗ್ರಾಮದ ದಾಮೋದರ ಎಂಬುವವರ ಮಗ ರವಿರಾಜ ಎಂಬ 26 ವರ್ಷದ ಯುವಕ ಮಾರ್ಚ್ 2024 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.

Sagara Police ಈತ ಚಹರೆ 5.3 ಅಡಿ ಎತ್ತರ. ಕೋಲುಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಬಲಗೈಯಲ್ಲಿ ಶಿವರಾಜ ಹಚ್ಚೆ ಗುರುತು ಇರುತ್ತದೆ.
ಈ ಮೂರು ಜನ ಕಾಣೆಯಾದವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ದೂ.ಸಂ.: 08182-261400/ 08183-226082/ 9480803361/ 9480803385 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...