Friday, March 20, 2026
Friday, March 20, 2026

Ramesh Pandit ಚಿತ್ರ ನಿರ್ದೇಶಕ ರಮೇಶ್ ಬೇಗಾರ್, ಹೀಗಿರುತ್ತೆ ನೋಡಿ ನಟ ರಮೇಶ್ ಪಂಡಿತ್ ಲುಕ್

Date:

Ramesh Pandit ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರದ ದೈತ್ಯ ಪ್ರತಿಭೆ ರಮೇಶ್ ಪಂಡಿತ್. ಇಂದವರ ಜನ್ಮದಿನ. ಈ ಪ್ರಯುಕ್ತ ಶುಭಾಶಯಗಳೊಂದಿಗೆ ನಮ್ಮ ನೂತನ ಚಲನಚಿತ್ರ ದಲ್ಲಿ ಪಂಡಿತ್ ಅವರ ಪಾತ್ರದ ನೋಟವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಯಾವ ಪಾತ್ರಕ್ಕಾದರೂ ಜೀವತುಂಬಬಲ್ಲ Ramesh Pandit ಅವರ ಸ್ನೇಹ ನನಗೆ ದೊರಕಿದ್ದು 2008 ರಲ್ಲಿ ಜೀ ಕನ್ನಡ ವಾಹಿನಿಗೆ ನಾನು ನಿರ್ದೇಶಿಸಿದ್ದ ಏಕೆ ಹೀಗೆ ನಮ್ಮ ನಡುವೆ ಸೀರಿಯಲ್ ಮೂಲಕ. ಅದರಲ್ಲಿ ಜಬರ್ದಸ್ತ್ ನೆಗೆಟಿವ್ ಲೀಡ್ ರೋಲ್ ಮಾಡಿದ್ದ ಪಂಡಿತ್ ಜೀ ನನ್ನ ಮಲೆನಾಡ ಸೊಗಡಿನ ಸಂಭಾಷಣೆ ಸ್ವಾದವನ್ನು ಸಂಭ್ರಮಿಸುತ್ತಿದ್ದರು. ಟ್ರಾಕ್ ಬರವಣಿಗೆ ಹಂಚಿಕೊಳ್ಳಲು ಆರಂಭಿಸಿದ ಮೇಲೆ ನನ್ನ ಟ್ರಾಕ್ ನ ಸಂಭಾಷಣೆ ನೀವು ಬರೆಯುವುದಾದರೆ ಮಾತ್ರ ಶೃಂಗೇರಿ ಗೆ ಬರುತ್ತೇನೆ ಎಂದು ಪ್ರೀತಿಯ ತಾಕೀತು ಮಾಡುತ್ತಿದ್ದ ಸಿಂಪಲ್ ಸ್ಟಾರ್ ಇವರು.

ಬಿ ಜಯಶ್ರೀ ಅವರ ಚಿತ್ರಪಟ ರಾಮಾಯಣ ನಾಟಕ ದಲ್ಲಿ ಪಂಡಿತ್ ರ ರಾವಣ ನ ನೋಡಿ ದಿಗ್ಭ್ರಮೆಗೊಂಡವನು ನಾನು.

ಆಕಾಶದ ಎತ್ತರದ ನಗು, ಭೂಮಿ ತೂಕ ದ ಸ್ನೇಹಮಯಿ ವ್ಯಕ್ತಿತ್ವ, ಅಮೋಘ ಸಹಕಾರ, ಸೆಟ್ ನಲ್ಲಿ ಸದಾ ಹಾಸ್ಯ, ಚಿನಕುರಳಿ ಪನ್ ಮತ್ತು ಪಂಚ್ ರಮೇಶ್ ಅವರ ಹೆಚ್ಚುಗಾರಿಕೆ. ಕಳೆದ ವರ್ಷ ಇವರೊಂದಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದ್ದು ಕೂಡಾ ಕಾಕತಾಳಿಯವಾದರೂ ಖುಷಿ ಕೊಟ್ಟ ಸಂಗತಿ.

Ramesh Pandit ನಮ್ಮ ಹೊಸ ಸಿನಿಮಾ ದಲ್ಲಿ ಖಳನಾಯಕನಿಗೆ ಹೊರತಾಗಿ ಒಂದು ವಿಶೇಷ ಹಾಗೂ ಗಟ್ಟಿ ಪಾತ್ರದಲ್ಲಿ ನಟಿಸಿದ್ದಾರೆ.

ಹೀಗಿರತ್ತೆ ನೋಡಿ ರಮೇಶ್ ಪಂಡಿತ್ ಲುಕ್ ಎಂದು ನಿರ್ದೇಶಕ ರಮೇಶ್ ಬೇಗಾರ್ ಕೆ ಲೈವ್ ನ್ಯೂಸ್ ಗೆ ‌ತಮ್ಮ ಪೋಸ್ಟ್ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...