B.Y.Raghavendra ಶಿವಮೊಗ್ಗದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಗರದ ಪ್ರತಿಷ್ಠಿತ ಯೋಗ ಶಿಕ್ಷಣ ಸಮಿತಿ(ರಿ.) ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಧನ್ವಂತರಿ ಜಯಂತಿ” ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಭಾಗವಹಿಸಿದ್ದರು .
ಇಂದು ಆಯುರ್ವೇದದ ದೇವರಾದ ಶ್ರೀ ಧನ್ವಂತರಿ ಜನ್ಮದಿನವಾಗಿದೆ. ಈ ಜಯಂತಿಯು ಹಿಂದೂ ಧರ್ಮದ ಮಹತ್ವದ ಆಚರಣೆಯಾಗಿದೆ. ಶ್ರೀ ಧನ್ವಂತರಿಯು ಆಯುರ್ವೇದದ ಸ್ಥಾಪಕರಾಗಿದ್ದು ನಮ್ಮೆಲ್ಲರ ವೈದ್ಯಕೀಯ ವಿಜ್ಞಾನ ಮತ್ತು ಆರೋಗ್ಯದ ದೇವರಾಗಿದ್ದಾರೆ ಎಂಬುದು ನಮ್ಮೆಲ್ಲರ ನಂಬಿಕೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
B.Y.Raghavendra ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಚನ್ನಬಸಪ್ಪ ಅವರು, ಗಣ್ಯರಾದ ಶ್ರೀ ರಂಗನಾಥ್ ಅವರು, ಶ್ರೀ ಸಂಜಯ್ ಅವರು, ಡಾ.ಕೃಷ್ಣ ಎಸ್.ಭಟ್ ಅವರು, ಶ್ರೀಮತಿ ಅಂಬಿಕಾ ಅವರು, ಶ್ರೀಮತಿ ವಿಮಲಾ ಅವರು ಉಪಸ್ಥಿತರಿದ್ದರು.
