Shimoga Chamber of commerce ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಕೆ.ಟಿ. ಶಾಮಯ್ಯ ಗೌಡ ರಸ್ತೆ, ಸಿಟಿ ಕ್ಲಬ್ ಹಿಂಬಾಗ, ಶಿವಮೊಗ್ಗದಲ್ಲಿ ದಿನಾಂಕ: ೧೬.೧೦.೨೦೨೫ನೇ ಗುರುವಾರÀ ಸಂಜೆ ೪.೦೦ಕ್ಕೆ ಸರಿಯಾಗಿ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ, ಟಿ.ಡಿ.ಎಸ್ ಮತ್ತು ಟಿ.ಸಿ.ಎಸ್ ಕಾಯ್ದೆಗಳಲ್ಲಿ ಆದ ಇತ್ತೀಚಿನ ತಿದ್ದುಪಡಿ ಕುರಿತು ವಿಚಾರ ಸಂಕಿರಣ ಹಾಗೂ ಅರಿವು ಕಾರ್ಯಾಗಾರವನ್ನು ಏರ್ಪಡಿಸಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಶ್ರೀ ಬಿ. ಗೋಪಿನಾಥ್ರವರು ವಹಿಸಲಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಪಿ. ವಿಮಲ್ರಾಜ್, ಐ.ಆರ್.ಎಸ್, ಹೆಚ್ಚುವರಿ ಆಯುಕ್ತರು, ಆದಾಯ ತೆರಿಗೆ, ರೇಂಜ್-೬(೧) ಬೆಂಗಳೂರು ಇವರು ಉಪಸ್ಥಿತರಿರುತ್ತಾರೆ ಹಾಗೂ ವಿಶೇಷ ಕಾರ್ಯಾಗಾರದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಆದಾಯ ತೆರಿಗೆ ಹಿರಿಯ ಅಧಿಕಾರಿಗಳು ವಿಸೃತವಾಗಿ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲ್ಲಿ ಸನ್ನದು ಲೆಕ್ಕಪರಿಶೋಧಕರುಗಳ ಸಂಘ ಮತ್ತು ತೆರಿಗೆ ಸಲಹೆಗಾರರುಗಳÀ ಸಂಘದ ಅಧ್ಯಕ್ಷರುಗಳು ಉಪಸ್ಥಿತರಿರುತ್ತಾರೆ.
Shimoga Chamber of commerce ಈ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಸಂಘದ ಸದಸ್ಯ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ಸನ್ನದು ಲೆಕ್ಕಪರಿಶೋಧಕರು, ತೆರಿಗೆ ಸಲಹೆಗಾರರು, ವೃತ್ತಿಪರರು, ತೆರಿಗೆ ಪಾವತಿದಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡು ಯಶಸ್ವಿಗೊಳಿಸಲು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಶ್ರೀ ಎ.ಎಂ. ಸುರೇಶ್ರವರು ಸಂಘದ ಪ್ರಕಟಣೆಯಲ್ಲಿ ಕೋರಿದ್ದಾರೆ.
