Monday, February 2, 2026
Monday, February 2, 2026

Karnataka Law Commission ಮುಟ್ಟಿನ ರಜೆ ಕುರಿತು ಸಮಿತಿಯೊಂದಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಂದ ಮಹತ್ವದ ಸಭೆ

Date:

Karnataka Law Commission ರಾಜ್ಯದಲ್ಲಿನ ಎಲ್ಲಾ ವರ್ಗದ ಮಹಿಳಾ ಕಾರ್ಮಿಕರಿಗೆ ಮುಟ್ಟಿನ ರಜೆ ಬಗ್ಗೆ ಶಿಫರಸ್ಸು ಮಾಡುವುದಕ್ಕಾಗಿ
ಡಾ: ಸಪ್ನ ಎಸ್. ಅಸೋಸಿಯೋಟ್ ಡೀನ್, ಕ್ರೈಸ್ಟ್ ಯೂನಿವರ್ಸಿಟಿ ಇವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯ ಸದಸ್ಯರುಗಳೊಂದಿಗೆ ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ್ ಎಸ್. ಲಾಡ್ ತಮ್ಮ ಗೃಹ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದರು.

ಕರ್ನಾಟಕ ಕಾನೂನು ಆಯೋಗವು ಜನವರಿ 23, 2025 ರಂದು ತನ್ನ 62 ನೇ ವರದಿಯಲ್ಲಿ ಕರ್ನಾಟಕ ಮುಟ್ಟಿನ ರಜೆ ಮತ್ತು ನೈರ್ಮಲ್ಯ ಮಸೂದೆ, 2025 ರ ಕರಡು ಮಸೂದೆಯನ್ನು ರಚಿಸಿತು.ಅದರಂತೆ
ಮಸೂದೆಯು ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮಾಡಲು ಹುಡುಗಿಯರಿಗೆ 2 ದಿನಗಳ ಮುಟ್ಟಿನ ರಜೆ ಮತ್ತು ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆಯನ್ನು ಶಿಫಾರಸು ಮಾಡಿದ್ದು, ಇದಕ್ಕೆ ಸಚಿವ ಸಂಪುಟದಿಂದ ಅನುಮೋದನೆ ಕೇಳಲಾಗಿದೆ.
ವಿವಿಧ ಕಾರ್ಮಿಕ ಸಂಘಗಳು, ಉದ್ಯೋಗದಾತರು ಮುಂತಾದ ಪಾಲುದಾರರಿಂದ ಸಲಹೆಗಳು/ಅಭಿಪ್ರಾಯಗಳು ಮತ್ತು ಆಕ್ಷೇಪಣೆಗಳನ್ನು ಕರೆಯಲಾಯಿತು.
ಯಾವುದೇ ನೀತಿಗಳು ಅಥವಾ ನೀವು ಮಹಿಳೆಯರ ವಿರುದ್ಧ ತಾರತಮ್ಯ ಮಾಡಿದರೆ, ಬದಲಿಗೆ ಅವರಿಗೆ ಸಮಾನ ಅವಕಾಶಗಳು ಮತ್ತು ರಕ್ಷಣೆಯನ್ನು ಒದಗಿಸಿದರೆ ಮುಟ್ಟಿನ ಸಮಯವು ಪ್ರಸ್ತುತವಾಗುತ್ತದೆ.

ಭಾರತದ ಸಂವಿಧಾನದ 15ನೇ ವಿಧಿಯು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಮುಟ್ಟಿನ ರಜೆಯನ್ನು ಒದಗಿಸುವುದನ್ನು ಸಂವಿಧಾನದ ಆದೇಶವನ್ನು ಪೂರೈಸುವತ್ತ ಸಕಾರಾತ್ಮಕ ಹೆಜ್ಜೆಯಾಗಿ ಕಾಣಬಹುದು.
ವಿವಿಧ ಕಾರ್ಮಿಕ ಸಂಘಗಳು, ಉದ್ಯೋಗದಾತರು, ಉದ್ಯೋಗಿಗಳು, ಉದ್ಯೋಗದಾತ ಸಂಘಟನೆ, ಎನ್‌ಜಿಒಗಳು ಮತ್ತು ಇತರ ಪಾಲುದಾರರಿಂದ ಸಲಹೆಗಳು/ಅಭಿಪ್ರಾಯಗಳು ಮತ್ತು ಆಕ್ಷೇಪಣೆಗಳನ್ನು ಕರೆಯಲಾಯಿತು. 75 ಅಭಿಪ್ರಾಯಗಳಲ್ಲಿ 56 ಅಭಿಪ್ರಾಯಗಳು ಮುಟ್ಟಿನ ರಜೆಯನ್ನು ಬೆಂಬಲಿಸಿದವು ಮತ್ತು ಉಳಿದವುಗಳು 19 ಮಹಿಳೆಯರಿಗೆ ಮುಟ್ಟಿನ ರಜೆಯನ್ನು ವಿರೋಧಿಸಿದವು.ಮುಟ್ಟಿನ ರಜೆಯ ಬದಲಿಗೆ 12 ರಜೆಗಳನ್ನು ಮಂಜೂರು ಮಾಡಬಹುದು ಎಂಬುದು ಹೆಚ್ಚಿನ ಪಾಲುದಾರರ ಅಭಿಪ್ರಾಯವಾಗಿದೆ.

ನಮ್ಮ ರಾಜ್ಯದ ಮಹಿಳಾ ಕಾರ್ಮಿಕರ ಹಿತದೃ ಷ್ಟಿಯನ್ನು ಪರಿಗಣಿಸಿ ಮಹಿಳೆಯರಿಗೆ ಮುಟ್ಟಿನ ರಜೆ ನೀಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾನೂನು ಮತ್ತು ಸಂಸಾದೀಯ ಇಲಾಖೆ ಸಮ್ಮತಿಸಿದೆ. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಣಕಾಸು ಇಲಾಖೆ ಒಪ್ಪಲಿಲ್ಲವಾದ್ದರಿಂದ ಡಿಪಿ ಆರ್ ಕಾರ್ಮಿಕ ಇಲಾಖೆಗೆ ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸಲು ಸಲಹೆ ನೀಡಿದೆ.ಇನ್ನೂ ಶಿಕ್ಷಣ ಇಲಾಖೆಯು ಕಾರ್ಮಿಕರಿಗೆ ಸಂಬಂಧಿಸಿದೆಯಾದ್ದರಿಂದ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.
Karnataka Law Commission ಸಮಿತಿಯು ವರ್ಷಕ್ಕೆ 6 ದಿನಗಳ ಮುಟ್ಟಿನ ರಜೆಯನ್ನು ಶಿಫಾರಸು ಮಾಡಿತು.ಅವರು ಅಗತ್ಯವಿದ್ದಾಗ ಮತ್ತು ಯಾವಾಗ ಬೇಕಾದರೂ ಪಡೆಯಬಹುದು. ಭಾರತದ ಸಂವಿಧಾನದ 14ನೇ ವಿಧಿಯು ಕಾನೂನಿನ ಮುಂದೆ ಸಮಾನತೆಯನ್ನು ಖಾತರಿಪಡಿಸುತ್ತದೆ ಮತ್ತು ಧರ್ಮ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ. ಮುಟ್ಟಿನ ರಜೆಯನ್ನು ಪರಿಗಣಿಸುವಾಗ
ಯಾವುದೇ ನೀತಿಗಳು ಮಹಿಳೆಯರ ವಿರುದ್ಧ ತಾರತಮ್ಯ ಮಾಡದಂತೆ ನೋಡಿಕೊಳ್ಳುವ ಬದಲು ಅವರಿಗೆ ಸಮಾನ ಅವಕಾಶಗಳು ಮತ್ತು ರಕ್ಷಣೆಯನ್ನು ಒದಗಿಸುವಲ್ಲಿ ಪ್ರಸ್ತುತವಾಗುತ್ತದೆ. ಭಾರತದ ಸಂವಿಧಾನದ 15 ನೇ ವಿಧಿಯು ಲಿಂಗದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ.ಮುಟ್ಟಿನ ರಜೆಯನ್ನು ಸಕಾರಾತ್ಮಕ ಹೆಜ್ಜೆಯಾಗಿ ಕಂಡು ಸಂವಿಧಾನದ ಆದೇಶವನ್ನು ಪೂರೈಸುವ ಉದ್ದೇಶ ಇದರದ್ದಾಗಿದೆ.

ಕಾರ್ಖಾನೆಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಕಂಪನಿಗಳು ಮತ್ತು ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಕೆಲಸ ಮಾಡುತ್ತಿದ್ದು, ಮುಟ್ಟಿನ ರಜೆ ಪಡೆಯುವುದು ಮಹಿಳೆಯರ ಮೂಲಭೂತ ಹಕ್ಕಾಗಿದ್ದರೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ರಾಷ್ಟ್ರೀಯ ಶಾಸನವಿಲ್ಲ.ದೇಶದಲ್ಲಿ ಹಲವಾರು ರಾಜ್ಯಗಳು ಮತ್ತು ಸಂಸ್ಥೆಗಳು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ನೀಡುತ್ತಿವೆ.ವಿವಿಧ ರಾಜ್ಯಗಳಲ್ಲಿ ಈ ಮುಟ್ಟಿನ ರಜೆಗೆ ತಮ್ಮದೇ ಆದ ನೀತಿ ನಿಯಮಗಳನ್ನು ಮಾಡಿಕೊಂಡಿವೆ. ಆ ಬಗ್ಗೆ ನೋಡುವುದಾದರೆ 1992ರಲ್ಲಿ ಬಿಹಾರ ರಾಜ್ಯದಲ್ಲಿ ಮಹಿಳೆಯರಿಗೆ ತಿಂಗಳಿಗೆ 2ದಿನಗಳ ರಜೆ, 2023ರಲ್ಲಿ ಕೇರಳ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಯರಿಗೆ ಹಾಜರಾತಿ ಸಹಿತ 2ದಿನಗಳ ರಜೆ, ಇನ್ನೂ ಮಹಾರಾಷ್ಟ್ರದಲ್ಲಿ ನೀತಿಯಾಗಿದ್ದರೂ ಅದು ಅನುಷ್ಠಾನಗೊಂಡಿಲ್ಲ. ಜೋಮ್ಯಾಟೋ 2020ರಲ್ಲಿ ಜಾರಿಗೋಳಿಸಿರುವ ಪ್ರಕಾರ ಮಹಿಳಾ ಉದ್ಯೋಗಿಗಳು ಪ್ರತಿ ವರ್ಷ 10 ದಿನಗಳ ರಜೆಗೆ ಅರ್ಹರಾಗಿದ್ದಾರೆ. ಸ್ವಿಗ್ಗಿ ತಿಂಗಳಿಗೆ 2 ದಿನಗಳ ರಜೆ ನೀಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೋಡೋ ದಾದ್ರೆ, ಸ್ಪೇನ್ ದೇಶ ಸ್ತ್ರೀಯರಿಗೆ ತಿಂಗಳಿಗೆ 3 ದಿನಗಳ ರಜೆ ಇರುತ್ತದೆ.
ಜಪಾನ್ ಮುಟ್ಟಿನ ಸಮಯದಲ್ಲಿ ಕೆಲಸ ಮಾಡಲು ಒತ್ತಾಯಿಸಬೇಡಿ ಎಂದಿದೆ.ಇಂಡೋನೇಷ್ಯಾ ತಿಂಗಳಿಗೆ 2 ದಿನಗಳು.ದಕ್ಷಿಣ ಕೊರಿಯಾ ತಿಂಗಳಿಗೆ 2 ದಿನ ದೈಹಿಕ ರಜೆ.ವಿಯೆ ಟ್ನಾಮ್ ಮುಟ್ಟಿನ ಸಮಯದಲ್ಲಿ 30 ನಿಮಿಷಗಳ ವಿರಾಮ.ಜಾಮ್ಬಿಯರ್ 1 ದಿನ ರಜೆ ನೀಡಿದೆ.

ಸಮಿತಿಯ ಸದಸ್ಯರು ಈ ಕೆಳಗಿನಂತಿದ್ದಾರೆ:

(i) ಶ್ರೀಮತಿ ಪ್ರತಿಭಾ, ಗಾರ್ಮೆಂಟ್ ಯೂನಿಯನ್ ಪ್ರತಿನಿಧಿ.

(ii) ಶ್ರೀಮತಿ ಜಯಮ್ಮ, ಉಪಾಧ್ಯಕ್ಷೆ, ಎಐಟಿಯುಸಿ

(iii) ಶ್ರೀಮತಿ ಕಾತ್ಯಾಯಿನಿ ಚಮ್ರಂ, ಎಕ್ಸಿಕ್ಯೂಟಿವ್ ಟ್ರಸ್ಟಿ, ಸಿವಿಐಸಿ, ಬೆಂಗಳೂರು.

(iv) ಶ್ರೀಮತಿ ಶ್ಯಾಮಲಾ, ಸಮಾಜ ಕಲ್ಯಾಣ ಜನಸಂಖ್ಯಾ ಸಂಶೋಧನಾ ಕೇಂದ್ರ.

(v) ಶ್ರೀಮತಿ ಮೀನಾ ಪಾಟೀಲ್, ALC

(vi) ಶ್ರೀಮತಿ ರುತ್ ಮನೋರಮಾ, ಸಾಮಾಜಿಕ ಕಾರ್ಯಕರ್ತೆ.

(vii) ಡಾ. ಮಂಜುಳಾ, ಪ್ರೊಫೆಸರ್, ಕಿಮ್ಸ್

(viii) ಡಾ. ಸುನಿತಾ, ಉಪ ನಿರ್ದೇಶಕಿ,

(ix) ಶ್ರೀಮತಿ ಶ್ರುತಿ, ಎಒ, ಇನ್ಫೋಸಿಸ್.

(x) ಶ್ರೀ ರವಿಕುಮಾರ್, ಜಂಟಿ ಕಾರ್ಮಿಕ ಆಯುಕ್ತರು

(xi) ಶ್ರೀಮತಿ ಅನುರಾಧ, ಉಪ ಕಾರ್ಯದರ್ಶಿ, ಕಾರ್ಮಿಕ ಇಲಾಖೆ.

(xii) ಶ್ರೀ ಉಮೇಶ್, ಜಂಟಿ ಕಾರ್ಮಿಕ ಆಯುಕ್ತರು,

(xiii) ಕರ್ನಾಟಕ ನೌಕರರ ಸಂಘದ ಪ್ರತಿನಿಧಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...