Sunday, February 15, 2026
Sunday, February 15, 2026

IMA Shivamogga ಸಕಾಲದಲ್ಲಿ ಕಣ್ಣಗಳ ತಪಾಸಣೆ ಮಾಡಿಸಿಕೊಳ್ಳಿ

Date:

IMA Shivamogga ಕಣ್ಣುಗಳು ದೇಹದ ಪ್ರಮುಖ ಅಂಗವಾಗಿದ್ದು, ಸಕಾಲದಲ್ಲಿ ಕಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.
ವಿಶ್ವ ದೃಷ್ಟಿ ದಿನದ ಅಂಗವಾಗಿ ಐಎಂಎ ಶಿವಮೊಗ್ಗ ಶಾಖೆ, ಎಸ್‌ವಿಕೆ ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನ ಐಕ್ಯೂಎಸಿ, ಮಲ್ನಾಡ್ ನೇತ್ರ ತಜ್ಞರ ಸಂಘದ ವತಿಯಿಂದ ಆಯೋಜಿಸಿದ್ದ ಆರೋಗ್ಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಣ್ಣುಗಳು ನಮ್ಮ ಮರಣದ ನಂತರ ಮಣ್ಣಲ್ಲಿ ಮಣ್ಣಾಗಿ ಹೋಗುವ ಬದಲು ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕು. ನೇತ್ರದಾನ ಮಾಡಬೇಕು ಎಂದು ತಿಳಿಸಿದರು.
ಐಎಂಎ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಕೆ.ಆರ್.ರವೀಶ್ ಮಾತನಾಡಿ, ಆರೋಗ್ಯಕರ ಕಣ್ಣುಗಳು ಪ್ರಕಾಶಮಾನವಾದ, ಹೆಚ್ಚು ಉತ್ಪಾದಕ ಜೀವನವನ್ನು ಅರ್ಥೈಸುತ್ತವೆ. ಇಂದು ನಾವೆಲ್ಲರೂ ನಮ್ಮ ಕಣ್ಣುಗಳನ್ನು ನಿಜವಾಗಿಯೂ ಪ್ರೀತಿಸಲು ಪ್ರತಿಜ್ಞೆ ಮಾಡೋಣ ಎಂದು ತಿಳಿಸಿದರು.
ಡಾ. ಬಿ.ಎ.ಸುಭಾಷ್ ಮಾತನಾಡಿ, ಈ ವರ್ಷದ ಘೋಷವಾಕ್ಯ, ನಿಮ್ಮ ಕಣ್ಣುಗಳನ್ನು ಪ್ರೀತಿಸಿ, ನಿಯಮಿತ ಕಣ್ಣಿನ ತಪಾಸಣೆ, ಉತ್ತಮ ಬೆಳಕು, ಪರದೆಯ ವಿರಾಮಗಳು ಮತ್ತು ಸಮತೋಲಿತ ಪೋಷಣೆಯಂತಹ ಸರಳ ಹಂತಗಳು ಹೆಚ್ಚಿನ ದೃಷ್ಟಿ ಸಮಸ್ಯೆಗಳನ್ನು ತಡೆಯಬಹುದು ಎಂದು ಹೇಳಿದರು.
IMA Shivamogga ಪ್ರಾಂಶುಪಾಲ ಡಾ ಚಿದಾನಂದ ಎನ್ ಕೆ ಅವರು ಮಾತನಾಡಿ, ನ್ಯಾಷನಲ್ ಬಿಎಡ್ ಕಾಲೇಜಿನ ಸಹಕಾರ ಇಂತಹ ಅರಿವು ಕಾರ್ಯಕ್ರಮಗಳಿಗೆ ಸದಾ ಇರಲಿದೆ ಎಂದು ತಿಳಿಸಿದರು.
ಮಲ್ನಾಡ್ ನೇತ್ರ ತಜ್ಞರ ಸಂಘದ ಅಧ್ಯಕ್ಷ ಡಾ. ಅಶೋಕ್ ಅವರು ಸಭಿಕರೊಂದಿಗೆ ಸಂವಾದವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಐಎಂಎ ಶಿವಮೊಗ್ಗ ಶಾಖೆ ಕಾರ್ಯದರ್ಶಿ ಡಾ ಕೆ ಎಸ್ ಶುಭ್ರತಾ ಮತ್ತು ಡಾ ಮಂಜು ಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber Of Commerce Shivamogga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು- ಡಿ.ಎಸ್.ಅರುಣ್

Chamber Of Commerce Shivamogga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ...

Shakti scheme ಇನ್ನುಮುಂದೆ ಫ್ರೀ ಬಸ್ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್

Shakti scheme ʼಶಕ್ತಿʼ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುವ...

Krishna Bhairegowda ಸದ್ದಿಲ್ಲದೇ ನಡೆದ ಕ್ರಾಂತಿ: ರಾಜ್ಯ ಸರ್ಕಾರದ ಭೂ ಗ್ಯಾರಂಟಿ- ಸಚಿವ ಕೃಷ್ಣ ಭೈರೇಗೌಡ

Krishna Bhairegowda ದಾಖಲೆ ರಹಿತ ಜನವಸತಿಗಳಿಗೆ ಕಂದಾಯ ಗ್ರಾಮದ ಭಾಗ್ಯ ಇದು...