Monday, December 15, 2025
Monday, December 15, 2025

ಸಮಾಜಮುಖಿ ಚಿಂತನಾ ಸಭೆಗೆ ದಯವಿಟ್ಟು ಬನ್ನಿ- ಕೆ.ಸಿ.ಬಸವರಾಜ್

Date:

ಸಮಾಜದಲ್ಲಿ ಇಂದು ಎಲ್ಲೆಡೆ ಜಾತಿ, ಉಪಜಾತಿ, ರಾಜಕಾರಣ, ಹಣವೇ ಪ್ರದಾನವಾಗಿ ಮಾನವೀಯತೆ ಮರೆತು ಮೃಗೀಯ ವರ್ತನೆ ತೋರುತ್ತಿರುವ ಪ್ರಸಂಗಗಳು, ಮನೆ – ಮನಸ್ಸು ಗಳನ್ನು ಒಡೆಯುತ್ತಿರುವ ಧಾರವಾಹಿಗಳು, ಹಿರಿಯರ ಹಿತನುಡಿಗಳನ್ನು ಕೇಳದೇ ನಿರ್ಲಕ್ಷಿಸಿ ಸಹವಾಸ ದೋಷಕ್ಕೆ ಒಳಗಾಗಿ ತಮ್ಮ ಆರೋಗ್ಯವನ್ನು ಲಕ್ಷಿಸದೆ ಅನಾರೋಗ್ಯಕ್ಕೆ ಒಳಗಾಗುತ್ತಿರುವ ಯುವ ಜನಾಂಗ, ಮನೆಯ ಇತರ ಸದಸ್ಯರು ಟಿವಿ, ಮೊಬೈಲ್ ನಲ್ಲೇ ಬ್ಯುಸಿ ಆಗಿ ಅದೇ ಮನೆಯ ಹಿರಿಯರನ್ನು ಮಾತನಾಡಿಸದೆ ಹಿರಿಯ ಜೀವಗಳು ಕೊರಗುತ್ತಿರುವ ಸನ್ನಿವೇಶ , ಹಣವೇ ಪ್ರಾಮುಖ್ಯವಾಗಿ ಮೌಲ್ಯಗಳು ಮರೆಯಾಗುತ್ತಿರುವ ಸನ್ನಿವೇಶದಲ್ಲಿ ಸಮಾಜದ ಒಳಿತಿಗಾಗಿ ಕೆಲವು ನಿಮಿಷ ಚರ್ಚಿಸಿ ನಮ್ಮ ನಮ್ಮ ಇತಿ ಮಿತಿಯೊಳಗೆ ಕನಿಷ್ಟ ಕಾರ್ಯ ಪ್ರವೃತ್ತರಾಗಲು ಮನಸ್ಸು ಹೊಂದಿರುವ ಮನುಕುಲದ ಹಾಗೂ ಸಕಲ ಜೀವಿಗಳ ಒಳಿತನ್ನು ಬಯಸುವ ವಿಶಾಲ ಹೃದಯದ ವ್ಯಕ್ತಿಗಳಿಗೆ ಒಂದು ಆಹ್ವಾನ :- ಸಮಾಜಮುಖಿ ಚಿಂತನೆ ಹೊಂದಿರುವ ಎಲ್ಲರ ಜತೆ ಚರ್ಚಿಸಲು ಚಿಂತಕರ ಚಾವಡಿ ಶಿವಮೊಗ್ಗ ದ ವತಿಯಿಂದ ದಿನಾಂಕ – 11-08-2025 ರಂದು ಸೋಮವಾರ ಸಂಜೆ 5 ಗಂಟೆಗೆ ಗಾಂದಿನಗರದ ಪಾರ್ಕ್ ನ ಮದ್ಯದಲ್ಲಿ ಇರುವ ಕುಟೀರದಲ್ಲಿ ( ಉಷಾ ನರ್ಸಿಂಗ್ ಹೊಂ ನಿಂದ ಜಿಲ್ಲಾ ಪಂಚಾಯತ್ ಗೆ ಹೋಗುವ ಮಾರ್ಗ ದಲ್ಲಿರುವ ಗಾಂದಿನಗರ ಬಡಾವಣೆಯ ಪಾರ್ಕ್) ಸಮಾಲೋಚನಾ ಸಬೆಯನ್ನು ಕರೆಯಲಾಗಿದೆ, ಸೋಮವಾರ ಸಂಜೆ, 5 ಗಂಟೆಗೆ ಆಯೋಜಿಸಿರುವ ಅಂದಿನ ಸಬೆಗೆ ತಾವು ಬನ್ನಿ ಜತೆಗೆ ಸಮಾಜಮುಖಿ ಚಿಂತನೆ ಹೊಂದಿರುವ ಇತರರಿಗೂ ವಿಷಯ ತಿಳಿಸಿ ಕರೆತನ್ನಿ. – ಕೆ. ಸಿ. ಬಸವರಾಜ್, ಸಂಚಾಲಕರು, ಚಿಂತಕರ ಚಾವಡಿ, ಮತ್ತು ವಕೀಲರು, ಶಿವಮೊಗ್ಗ. ಸಂಪರ್ಕ ದೂರವಾಣಿ – 9483003823.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...