ಸಮಾಜದಲ್ಲಿ ಇಂದು ಎಲ್ಲೆಡೆ ಜಾತಿ, ಉಪಜಾತಿ, ರಾಜಕಾರಣ, ಹಣವೇ ಪ್ರದಾನವಾಗಿ ಮಾನವೀಯತೆ ಮರೆತು ಮೃಗೀಯ ವರ್ತನೆ ತೋರುತ್ತಿರುವ ಪ್ರಸಂಗಗಳು, ಮನೆ – ಮನಸ್ಸು ಗಳನ್ನು ಒಡೆಯುತ್ತಿರುವ ಧಾರವಾಹಿಗಳು, ಹಿರಿಯರ ಹಿತನುಡಿಗಳನ್ನು ಕೇಳದೇ ನಿರ್ಲಕ್ಷಿಸಿ ಸಹವಾಸ ದೋಷಕ್ಕೆ ಒಳಗಾಗಿ ತಮ್ಮ ಆರೋಗ್ಯವನ್ನು ಲಕ್ಷಿಸದೆ ಅನಾರೋಗ್ಯಕ್ಕೆ ಒಳಗಾಗುತ್ತಿರುವ ಯುವ ಜನಾಂಗ, ಮನೆಯ ಇತರ ಸದಸ್ಯರು ಟಿವಿ, ಮೊಬೈಲ್ ನಲ್ಲೇ ಬ್ಯುಸಿ ಆಗಿ ಅದೇ ಮನೆಯ ಹಿರಿಯರನ್ನು ಮಾತನಾಡಿಸದೆ ಹಿರಿಯ ಜೀವಗಳು ಕೊರಗುತ್ತಿರುವ ಸನ್ನಿವೇಶ , ಹಣವೇ ಪ್ರಾಮುಖ್ಯವಾಗಿ ಮೌಲ್ಯಗಳು ಮರೆಯಾಗುತ್ತಿರುವ ಸನ್ನಿವೇಶದಲ್ಲಿ ಸಮಾಜದ ಒಳಿತಿಗಾಗಿ ಕೆಲವು ನಿಮಿಷ ಚರ್ಚಿಸಿ ನಮ್ಮ ನಮ್ಮ ಇತಿ ಮಿತಿಯೊಳಗೆ ಕನಿಷ್ಟ ಕಾರ್ಯ ಪ್ರವೃತ್ತರಾಗಲು ಮನಸ್ಸು ಹೊಂದಿರುವ ಮನುಕುಲದ ಹಾಗೂ ಸಕಲ ಜೀವಿಗಳ ಒಳಿತನ್ನು ಬಯಸುವ ವಿಶಾಲ ಹೃದಯದ ವ್ಯಕ್ತಿಗಳಿಗೆ ಒಂದು ಆಹ್ವಾನ :- ಸಮಾಜಮುಖಿ ಚಿಂತನೆ ಹೊಂದಿರುವ ಎಲ್ಲರ ಜತೆ ಚರ್ಚಿಸಲು ಚಿಂತಕರ ಚಾವಡಿ ಶಿವಮೊಗ್ಗ ದ ವತಿಯಿಂದ ದಿನಾಂಕ – 11-08-2025 ರಂದು ಸೋಮವಾರ ಸಂಜೆ 5 ಗಂಟೆಗೆ ಗಾಂದಿನಗರದ ಪಾರ್ಕ್ ನ ಮದ್ಯದಲ್ಲಿ ಇರುವ ಕುಟೀರದಲ್ಲಿ ( ಉಷಾ ನರ್ಸಿಂಗ್ ಹೊಂ ನಿಂದ ಜಿಲ್ಲಾ ಪಂಚಾಯತ್ ಗೆ ಹೋಗುವ ಮಾರ್ಗ ದಲ್ಲಿರುವ ಗಾಂದಿನಗರ ಬಡಾವಣೆಯ ಪಾರ್ಕ್) ಸಮಾಲೋಚನಾ ಸಬೆಯನ್ನು ಕರೆಯಲಾಗಿದೆ, ಸೋಮವಾರ ಸಂಜೆ, 5 ಗಂಟೆಗೆ ಆಯೋಜಿಸಿರುವ ಅಂದಿನ ಸಬೆಗೆ ತಾವು ಬನ್ನಿ ಜತೆಗೆ ಸಮಾಜಮುಖಿ ಚಿಂತನೆ ಹೊಂದಿರುವ ಇತರರಿಗೂ ವಿಷಯ ತಿಳಿಸಿ ಕರೆತನ್ನಿ. – ಕೆ. ಸಿ. ಬಸವರಾಜ್, ಸಂಚಾಲಕರು, ಚಿಂತಕರ ಚಾವಡಿ, ಮತ್ತು ವಕೀಲರು, ಶಿವಮೊಗ್ಗ. ಸಂಪರ್ಕ ದೂರವಾಣಿ – 9483003823.
ಸಮಾಜಮುಖಿ ಚಿಂತನಾ ಸಭೆಗೆ ದಯವಿಟ್ಟು ಬನ್ನಿ- ಕೆ.ಸಿ.ಬಸವರಾಜ್
Date:
