Monday, December 15, 2025
Monday, December 15, 2025

Shivamogga ಶಿವಮೊಗ್ಗದಲ್ಲಿ ಸುಧಾರಿತ “ಕಾರ್ಡಿಯಾಕ್ ಇಮೇಜಿಂಗ್ ತಂತ್ರಗಳು” ಕುರಿತ ಉಪನ್ಯಾಸ ಕಾರ್ಯಕ್ರಮ

Date:

Shivamogga ಸಮೀಪದ ಮಲ್ನಾಡ್ ಶೈರ್‌ನಲ್ಲಿ ಐಆರ್‌ಐಎ ಶಿವಮೊಗ್ಗ ಉಪಶಾಖೆಯು ಐಆರ್‌ಐಎ ಶಕ್ತಿ ಬ್ಯಾನರ್‌ನಡಿ ಕಾರ್ಡಿಯಾಕ್ ಇಮೇಜಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಮಹಿಳಾ ರೇಡಿಯಾಲಜಿಸ್ಟ್ ಸ್ಪೀಕರ್ ಪ್ಯಾನೆಲ್ ಮೊದಲ ಬಾರಿ ಕರ್ನಾಟಕದಲ್ಲಿ ಆಯೋಜಿಸಿತ್ತು.
ಐಆರ್‌ಐಎ ಉಪವಿಭಾಗದ ಅಧ್ಯಕ್ಷೆ ಡಾ. ಉಮಾ ಪಾಂಡುರಂಗಿ ಮತ್ತು ಕಾರ್ಯದರ್ಶಿ ಡಾ. ಶ್ರೀಕಾಂತ್ ನೇತೃತ್ವದಲ್ಲಿ ಸಿಎಂಇ ನಡೆಯಿತು. ವಿಶೇಷ ವಿಕಿರಣಶಾಸ್ತ್ರಜ್ಞರು ಹಾಗೂ ಶಿವಮೊಗ್ಗದ ಹೃದ್ರೋಗ ಶಾಸ್ತ್ರಜ್ಞರ ದೊಡ್ಡ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಿಎಂಇ ಗೌರವ ಕೋಶಾಧಿಕಾರಿ ಡಾ. ಅಖಿಲಾ ಅವರು ಸ್ವಾಗತಿಸಿದರು. ಐಆರ್‌ಐಎ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಪ್ರವೀಣ್ ಮತ್ತು ಡಿಎಚ್‌ಒ ಡಾ. ನಟರಾಜ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಐಆರ್‌ಐಎ ಶಕ್ತಿ ನಾಯಕ ಡಾ. ಫ್ಲೋರಾ ನೆಲ್ಸನ್, ಡಾ. ವರ್ಷಾ ಕಾಳೆ ಮತ್ತು ಡಾ. ಜಾನ್ಹವಿ ಶುಭ ಹಾರೈಸಿದರು.
ಆಧುನಿಕ ಮತ್ತು ಹೆಚ್ಚು ಸುಧಾರಿತ ಕಾರ್ಡಿಯಾಕ್ ಇಮೇಜಿಂಗ್ ತಂತ್ರಗಳ ಮೇಲೆ ವಿಶೇಷ ಉಪನ್ಯಾಸಗಳು ನಡೆದವು. ಮಹಿಳಾ ಭಾಷಣಕಾರರಾದ ಡಾ. ಮೇರಿ ವಾರುಣ್ಯ, ಡಾ. ಪ್ರಿಯದರ್ಶಿನಿ ಮತ್ತು ಡಾ. ಉಮಾ ಪಾಂಡುರಂಗಿ ಅವರಿಂದ ಉತ್ತಮ ಗುಣಮಟ್ಟದ ಉಪನ್ಯಾಸ ನಡೆಯಿತು.
Shivamogga ಹೃದ್ರೋಗ ತಜ್ಞರಾದ ಡಾ. ಶಿವಶಂಕರ್, ಡಾ. ಮಹೇಶಮೂರ್ತಿ, ಡಾ. ಪರಮೇಶ್ವರ, ಡಾ. ವಿಜೇತ್, ಡಾ ಶ್ರೀನಿವಾಸ, ಡಾ. ಕಿರಣ್ ಭೀಮೇಶ್ವರ್, ಡಾ. ಮಂಜುನಾಥ್, ಡಾ. ಆದಿತ್ಯ ಉಡುಪ, ಡಾ. ಅಶ್ವಲ್ ಮತ್ತು ಡಾ. ಶರತ್ ಭಾಗವಹಿಸಿದ್ದರು. ಡಾ ಉಮಾ ಪಾಂಡುರಂಗಿ ವಂದನಾರ್ಪಣೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...