Saturday, December 6, 2025
Saturday, December 6, 2025

Nagasubrahmanya Temple ಭಜನೆಯಿಂದ ಮನಸ್ಸಿಗೆ ಶಾಂತಿ, ಭಕ್ತಿಭಾವ ಸ್ಮರಣೆ- ಸಂದೇಶ ಉಪಾದ್ಯ

Date:

Nagasubrahmanya Temple ಭಜನೆ ಭಕ್ತಿ ಗೀತೆಗಳು ದೇವರ ಆರಾಧನೆಯ ಹಾಡುಗಳು ನಮಗೆ ಮನಸ್ಸಿಗೆ ಶಾಂತಿ ಹಾಗೂ ಭಕ್ತಿ ಭಾವವನ್ನು ಮೂಡಿಸುತ್ತದೆ ಎಂದು ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂದೇಶ್ ಉಪಾಧ್ಯ ನುಡಿದರು. ಅವರು ನಾಗಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ. ಶ್ರೀ ಸ್ವಾಮಿ ವಿವೇಕಾನಂದ ಅಡ್ವೆಂಚರಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಹಾಗೂ ಅರ್ಚಕ ವೃಂದ ಮತ್ತು ಬಜನಾ ಪರಿಷತ್ ಇವರ ಸಹಯೋಗದೊಂದಿಗೆ ಆಷಾಢ ಮಾಸದಲ್ಲಿ ಸತತ ಎಂಟನೇ ವರ್ಷದ ಆಶಾಡ ಭಜನಾೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿಯನ್ನು ಕುರಿತು ಮಾತನಾಡಿದರು. ಶುದ್ಧ ಮನಸ್ಸಿನಿಂದ ಶ್ರದ್ಧೆಯ ಭಕ್ತಿ ಭಾವದಿಂದ ಭಜನೆಯನ್ನು ಮಾಡಿದರೆ ಆ ಜಾಗದಲ್ಲಿ ಸಕಾರಾತ್ಮಕ ಭಾವನೆಗಳು ಮೂಡುತ್ತವೆ ಹಾಗೂ ಖಿನ್ನತೆ ದೂರವಾಗುತ್ತದೆ ದೇವರಲ್ಲಿ ಭಕ್ತಿ ಹೆಚ್ಚುತ್ತದೆ ಎಂದು
ನುಡಿದ ಅವರು ಈಗಾಗಲೇ ಶಿವಮೊಗ್ಗ ನಗರದ ಸಾಕಷ್ಟು ಭಜನಾ ಮಂಡಳಿ ಸದಸ್ಯರು ಈ ಪವಿತ್ರ ಕಾರ್ಯದಲ್ಲಿ ವಿಶೇಷವಾದ ಭಜನೆಗಳನ್ನು ಮಾಡುವುದರ ಮುಖಾಂತರ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಅತಿಥಿಗಳಾಗಿ ಆಗಮಿಸಿ ನಾಳೆ ಸುಬ್ರಮಣ್ಯ ದೇವಸ್ಥಾನ ಒಂದು ಶಕ್ತಿ ಕೇಂದ್ರವಾಗಿದೆ ಇಲ್ಲಿ ಎಲ್ಲಾ ಹಬ್ಬ ಹರಿದಿನಗಳು ಹಾಗೂ ವಿಶೇಷ ಕಾರ್ಯಕ್ರಮಗಳಿಂದ ದೇವಸ್ಥಾನ ಎಲ್ಲಾ ಭಕ್ತರ ಮನಃಶಾಂತಿಯ ತಾಣವಾಗಿದೆ ಒಳ್ಳೆ ಒಳ್ಳೆಯ ಭಜನೆಗಳಿಂದ ನಮ್ಮ ಬದುಕು ಬದಲಾಗುತ್ತದೆ ಪರಸ್ಪರರಲ್ಲಿ ಒಡನಾಟ ಹೆಚ್ಚುತ್ತದೆ ಹಾಗೆ ನಮ್ಮ ಧ್ವನಿ ಕೂಡ ಸಂಸ್ಕರಣವಾಗುತ್ತದೆ ಅಭಿನಂದಿಸಿದರು. Nagasubrahmanya Temple ಇದೇ ಸಂದರ್ಭದಲ್ಲಿ ಜೆಸಿ ನಗರ ಶಿವಮೊಗ್ಗದ ಶ್ರೀ ದುರ್ಗಾ ವಾಹಿನಿ ಭಜನಾ ಮಂಡಳಿ ಕೊಲ್ಲಾಪುರದಮ್ಮ ದೇವಸ್ಥಾನದ ಬದಲಾವಣೆಯ ಸದಸ್ಯರಾದ ಶ್ರೀಮತಿ ಪ್ರಮೀಳಾ ಉಮೇಶ್. ಮಮತಾ. ಮಾಲತಿ. ತೇಜಸ್ವಿನಿ. ರಜನಿ. ಸವಿತಾ. ರೇಖಾ. ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಆಕಾಶವಾಣಿಯ ಕಲಾವಿದರು ಹಾಗೂ ಸದಸ್ಯರು ಉಪಸ್ಥಿಧರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...