Shivamogga Tourism Development ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯಿಂದ 20.07.25 ರ ಭಾನುವಾರ ಶಿವಮೊಗ್ಗದಿಂದ ಸಕ್ರೇಬೈಲು ಆನೆ ಬಿಡಾರ, ಹುಲಿ ಮತ್ತು ಸಿಂಹ ಧಾಮ, ಮತ್ತೂರು ಗಣಪತಿ ದೇವಸ್ಥಾನ, ಗುಡೇಮರಡಿ ಮಲ್ಲೇಶ್ವರ ದೇವಸ್ಥಾನ, ಮತ್ತು ನಿಧಿಗೆಯಲ್ಲಿ ದೋಣಿವಿಹಾರ ಸ್ಥಳಗಳಿಗೆ ಒಂದು ದಿನದ ಪ್ರವಾಸವನ್ನು ಏರ್ಪಡಿಸಲಾಗಿದೆ
ಶಿವಮೊಗ್ಗದಿಂದ ಬೆಳಿಗ್ಗೆ 7:30 ಕ್ಕೆ ಹೊರಟು 06.30 ರ ಒಳಗಾಗಿ ಶಿವಮೊಗ್ಗಕ್ಕೆ ತಲುಪಲಾಗುವುದು ಶುಲ್ಕ ಒಬ್ಬರಿಗೆ ರೂ 725 ಮಾತ್ರ. (ಶುಲ್ಕದಲ್ಲಿ ಬಸ್ ಚಾರ್ಜ್, ಬೆಳಿಗ್ಗೆ ಉಪಹಾರ, ಮದ್ಯಾಹ್ನ ಊಟ, ಸಕ್ರೇಬೈಲು ಮತ್ತು ಹುಲಿ ಮತ್ತು ಸಿಂಹಧಾಮದ ಪ್ರವೇಶ (ಸಫಾರಿ ಹೊರತುಪಡಿಸಿ) ಶುಲ್ಕ ಹಾಗೂ ನಿದಿಗೆ ಕೆರೆ ದೋಣಿ ವಿಹಾರದ ಖರ್ಚು ಸೇರಿರುತ್ತದೆ.) 45 ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು. Shimoga Tourism Development ಆಸಕ್ತರು ತಮ್ಮ ಹೆಸರನ್ನು ದಿಲೀಪ್ ನಾಡಿಗ್ ದೂರವಾಣಿ 6361124316 ಇವರ ಬಳಿ ನೋಂದಾಯಿಸುವಂತೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಕಾರ್ಯದರ್ಶಿ ಎನ್.ಗೋಪಿನಾಥ್ ಅವರು ತಿಳಿಸಿದ್ದಾರೆ.
