Monday, February 2, 2026
Monday, February 2, 2026

Rotary Club Shimoga ಸ್ವಚ್ಛತೆ ,ಕೇವಲ ಶೌಚಾಲಯ,ರಸ್ತೆಗೆ ಸೀಮಿತವಿಲ್ಲ. ನೈತಿಕತೆಯೂ ಬೇಕು-ವಿಶ್ವನಾಥ ನಾಯಕ್

Date:

Rotary Club Shimoga 2025–26ನೇ ಸಾಲಿನ ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸ್ ಸೈಡ್‌ನ ಅಧ್ಯಕ್ಷರಾಗಿ ಶ್ರೀಯುತ ವಿಶ್ವನಾಥ್ ನಾಯಕ್ ಅಧಿಕಾರ ಸ್ವೀಕರಿಸುತ್ತಿರುವ ಈ ಸಂದರ್ಭದಲ್ಲಿ, ಕ್ಲಬ್ ಆವರಣದ ಮುಂಭಾಗದಲ್ಲಿ ಒಂದು ಮಾದರಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯದಲ್ಲಿ ಅಧ್ಯಕ್ಷರೊಂದಿಗೆ ಪದಾಧಿಕಾರಿಗಳು, ಸದಸ್ಯರು, ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರೀಯರಾಗಿರುವ ಜನತೆ ಸಹ ಭಾಗವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ, ಶಿವಮೊಗ್ಗ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಮತ್ತು ಸಮಾಜ ಸೇವಕ ಶ್ರೀ ವಿಶ್ವಾಸ್ ರವರು ತಮ್ಮ ಶ್ರೇಷ್ಠ ಮಾರ್ಗದರ್ಶನದಲ್ಲಿ ಪೌರಕಾರ್ಮಿಕರನ್ನು ಪ್ರೇರೇಪಿಸಿ, ಈ ಸ್ವಚ್ಛತಾ ಕಾರ್ಯಕ್ಕೆ ಸಮರ್ಥ ನಾಯಕತ್ವವನ್ನು ನೀಡಿದರು.

ಪೌರಕಾರ್ಮಿಕರು ತಮ್ಮ ಶ್ರಮ ಹಾಗೂ ನಿಷ್ಠೆಯಿಂದ ಆವರಣವನ್ನು ಸ್ವಚ್ಛಗೊಳಿಸಿದ್ದು, ಒಂದು ನಿಜವಾದ ನ್ಯಾಯಕ ಮಾದರಿಯನ್ನು ಸಮುದಾಯಕ್ಕೆ ತೋರಿಸಿತು. ಅವರ ಪರಿಶ್ರಮ ಮತ್ತು ಸೇವೆಯನ್ನು ಗುರುತಿಸಿ, ರೋಟರಿ ಕ್ಲಬ್ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಅವರನ್ನೊಬ್ಬರೊಬ್ಬರಾಗಿ ಗೌರವಿಸಿ ಸನ್ಮಾನಿಸಿದರು.

ಶ್ರೀ ವಿಶ್ವಾಸ್ ರವರು ಕೇವಲ ರಾಜಕೀಯ ನಾಯಕನಾಗಿ ಮಾತ್ರವಲ್ಲದೆ, ರೋಟರಿ ಚಟುವಟಿಕೆಗಳಲ್ಲೂ ಸದಾ ಮುಂಚೂಣಿಯಲ್ಲಿರುವ ಸೇವಾಭಾವಿ ವ್ಯಕ್ತಿತ್ವದ ಮಾದರಿಯಾಗಿದ್ದಾರೆ. ಪೌರಭದ್ರತೆ, ಪರಿಸರದ ಸ್ವಚ್ಛತೆ ಮತ್ತು ಸಮಾಜದ ಸಜ್ಜನ ಬದ್ಧತೆಯ ಕುರಿತು ಅವರು ಹೊರಹೊಮ್ಮಿಸುತ್ತಿರುವ ತಾತ್ವಿಕ ದೃಷ್ಟಿಕೋಣ ಈ ಕಾರ್ಯಕ್ರಮದ ಮೂಲಕ ಮತ್ತಷ್ಟು ಸ್ಪಷ್ಟವಾಯಿತು.

“ಸ್ವಚ್ಛತೆ ಎನ್ನುವುದು ಕೇವಲ ಶೌಚಾಲಯ ಅಥವಾ ರಸ್ತೆ ಸ್ವಚ್ಛಗೊಳಿಸುವ ಕಾರ್ಯವಲ್ಲ; ಅದು ನಮ್ಮ ನೈತಿಕತೆಯ ಪ್ರತಿಫಲವೂ ಹೌದು. ಈ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರೂ ಸಮಾಜದ ಅರಿವುಳ್ಳ ನಾಗರಿಕರಾಗಿ ಬೆಳೆಯಬೇಕೆಂಬ ಸಂದೇಶ ನೀಡಲಾಗಿದೆ,” ಎಂಬ ಮಾತುಗಳ ಮೂಲಕ ಅಧ್ಯಕ್ಷ ವಿಶ್ವನಾಥ್ ನಾಯಕ್ ತಮ್ಮ ಭಾವನೆಗಳನ್ನು ಹಂಚಿಕೊಂಡರು.

Rotary Club Shimoga ಇದೇ ರೀತಿಯ ಸಮೂಹ ಸೇವಾ ಚಟುವಟಿಕೆಗಳ ಮೂಲಕ ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸ್ ಸೈಡ್ ಮುಂದಿನ ದಿನಗಳಲ್ಲಿ ನಗರ ಸ್ವಚ್ಛತೆ, ಶಿಕ್ಷಣ, ಆರೋಗ್ಯ ಮತ್ತು ಪರಿಸರ ರಕ್ಷಣೆಗಾಗಿ ಹೆಚ್ಚಿನ ಕೊಡುಗೆ ನೀಡಲಿರುವ ಬಗ್ಗೆ ವಿಶ್ವಾಸ ವ್ಯಕ್ತವಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...