Shivaganga Yoga Center ಯೋಗ ಪ್ರಾಣಯಾಮ ಧ್ಯಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗ ಬೇಕು. ಯೋಗದಿಂದ ಸಂಸಾರ ಸಂಸ್ಕೃತಿಯ ಜೊತೆಗೆ ಮಾನಸಿಕ ನೆಮ್ಮದಿ ದೊರಕುತ್ತದೆ ಎಂದು ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಭಾರತೀಯ ದಂತ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾದ ಡಾ. ಭರತ್ ಅಭಿಮತ ಅರ್ಥಪಡಿಸಿದರು.
ಅವರು ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಪದಾಧಿಕಾರಿಗಳಿಗೆ ಯೋಗ ರತ್ನಾಕರ ಪ್ರಶಸ್ತಿ ಪುರಸ್ಕೃತರಾದ ಯೋಗ ಚಾರ್ಯ. ಸಿ ವಿ ರುದ್ರಾರಾಧ್ಯರಿಗೆ ಹಮ್ಮಿಕೊಳ್ಳಲಾದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು ನರೇಂದ್ರ ಮೋದಿಜಿ ಅವರು ಕಂಡ ಕನಸು ಮನೆ ಮನೆಗಳಿಗೆ ಯೋಗವನ್ನು ತಲುಪಿಸಿ ಅಕ್ರಮ ಮುಖಾಂತರ ಅವರ ಆರೋಗ್ಯವನ್ನು ಸದಾ ಉತ್ತಮವಾಗಿ ಮಾಡಿಕೊಳ್ಳಲು ಪಣ ತೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ ಆಗಲೇ ಶಿವಮೊಗ್ಗದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರ ಉಚಿತವಾಗಿ
ನುರಿತ ಶಿಕ್ಷಕರಿಂದ 38 ಶಾಖೆಗಳ ಮುಖಾಂತರ ಸಾವಿರಾರು ಜನರಿಗೆ ಯೋಗ ಪ್ರಾಣಾಯಾಮ ಧ್ಯಾನ ದ ತರಬೇತಿ ನೀಡುತ್ತಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಎಂದು ನುಡಿದರು.
ಇದೆ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಸಿವಿ ರುದ್ರಾಧ್ಯರು. ಇತ್ತೀಚೆಗೆ ಮೈಸೂರಿನಲ್ಲಿ ಪಡೆದ ಯೋಗ ರತ್ನಾಕರ ಪ್ರಜಾವಾಣಿಯ ಬಗ್ಗೆ ಮಾತನಾಡಿದರು.
ಯೋಗ ಎಂದರೆ ವ್ಯಾಯಾಮವಲ್ಲ ಮನಸ್ಸುಗಳನ್ನ ಒಂದುಗೂಡಿಸುವುದು ಆತ್ಮವಿಶ್ವಾಸ ವೃದ್ಧಿಸುವುದು ನಕಾರಾತ್ಮಕ ಭಾವನೆಗಳನ್ನು ಹೊಡೆದು ಓಡಿಸುವುದು ಮತ್ತು ಒಳ್ಳೆಯ ಮನಸ್ಸುಗಳನ್ನು ಕಟ್ಟುವುದು ಯೋಗವಾಗಿದೆ ಎಂದು ನುಡಿದರು.
ಅವರು ಯೋಗ ಶಾಖೆಗಳನ್ನು ನಡೆಸಲು ಉಚಿತವಾಗಿ ಸ್ಥಳಾವಕಾಶ ಮಾಡಿಕೊಟ್ಟ ಮಹನೀಯರಿಗೆ. ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ
ಎಸ್ ರುದ್ರೇಗೌಡರು ಮಾತನಾಡುತ್ತ ನಮ್ಮ ಕಂಡ ಅಧಿಕಾರ ವಹಿಸಿಕೊಂಡ ಬಳಿಕ ಯೋಗ ಕೇಂದ್ರದಲ್ಲಿ ನೈಸರ್ಗಿಕ ಚಿಕಿತ್ಸೆ ಫಿಜಿಯೋ ತೆರಪಿ. ಹಾಗೂ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಯೋಗ ಶಿಬಿರಾರ್ಥಿಗಳ ಸಹಕಾರ ಅತಿ ಮುಖ್ಯ ಎಂದು ಯೋಗ ಕೇಂದ್ರ ನಡೆದು ಬಂದ ದಾರಿಯನ್ನು ತಿಳಿಸಿದರು.
Shivaganga Yoga Center ಯೋಗ ಮಾಡುವುದರಿಂದ ಆಯಸ್ಸು ಪೂರ್ತಿಯಾಗುವುದರ ಜೊತೆಗೆ ನಾವು ಸದಾ ಕಾಲವಿಕೆನ ಇರುತ್ತೇವೆ ಹಾಗಾಗಿ ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಸದಾ ಆರೋಗ್ಯದಿಂದ ಇರೋಣ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯ ವತಿಯಿಂದ ಶ್ರೀ ರಾಮ ಆರ್ಯವೈಶ್ಯ ಸರ್ಕಾರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉಮಾಧ್ಯಕ್ಷರಾದ ಈಶ್ವರ್ ಬೂದಾಳ್
ರಂಗನಾಥ್. ಯೋಗ ಶಿಕ್ಷಕರಾದ ಜಿಎಸ್ ಓಂಕಾರ್
ವಿಜಯ ಕೃಷ್ಣ. ಎಚ್ ಕೆ ಹರೀಶ್.. ಜಿ ವಿಜಯಕುಮಾರ್. ಮಹೇಶ್. ನರಸೂಜಿ ರಾವ್. ಶ್ರೀನಿವಾಸ್. ಕಾಟನ್ ಜಗದೀಶ್. ಶಂಕರ್. ಸುಜಾತಾ. ಗಾಯತ್ರಿ. ಆನಂದ್. ಹಾಗೂ ಯೋಗ ಬಂಧು ಗಳು ಉಪಸ್ಥಿತರಿದ್ದರು.
