Monday, February 2, 2026
Monday, February 2, 2026

International Yoga Day ಯೋಗ ದಿನಾಚರಣೆ ಒಂದು ರಾಷ್ಟ್ರೀಯ ಹಬ್ಬವಿದ್ದಂತೆ : ಶ್ರೀ ರುದ್ರಾರಾಧ್ಯ ಸಿ ವಿ

Date:

International Yoga Day ಅಂತರಾಷ್ಟ್ರೀಯ ಯೋಗ ದಿನ ಒಂದು ರಾಷ್ಟ್ರೀಯ ಹಬ್ಬವಿದ್ದಂತೆ ನಾವೆಲ್ಲರೂ ಯುಗಾದಿ ಹಬ್ಬವನ್ನು ಹೇಗೆ ಆಚರಿಸುತ್ತೇವೋ ಅದೇ ರೀತಿಯಲ್ಲಿ ಇವತ್ತಿನ ದಿನ ನಮ್ಮೆಲ್ಲರಿಗೂ ಕೂಡ ಯೋಗದ ಯೋಗ ಆಚರಿಸುವ ವಿಶೇಷ ಹಬ್ಬದ ಸಂಭ್ರಮವಾಗಿದೆ ಅದಾಗಿಯೂ ಈ ಬಾರಿಯ ವಿಶೇಷ ಎಂದರೆ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಇವತ್ತು ಯೋಗ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಯೋಗ ಗುರುಗಳಾದ ಶ್ರೀ ರುದ್ರಾರಾಧ್ಯ ಸಿ.ವಿ ಅವರು ಬಣ್ಣಿಸಿದರು.
ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಶಿವಮೊಗ್ಗ ಹಾಗೂ ಶ್ರೀ ಶಿವಗಂಗಾ ಯೋಗ ಕೇಂದ್ರ (ರಿ.) ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಹಾಗೂ ಯೋಗದ ಅನುಭವವನ್ನು ಇಡೀ ಪ್ರಪಂಚಕ್ಕೆ ಮುಟ್ಟಿಸಿದಂತಹ ಹೆಗ್ಗಳಿಕೆ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಸಲ್ಲುತ್ತದೆ ಎಂದು ಹೇಳುತ್ತಾ ಯೋಗದ ಉಪಯೋಗಗಳ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಅವರು ಇವತ್ತಿನ 11ನೇ ಅಂತರಾಷ್ಟ್ರೀಯ ಯೋಗ ದಿನದ ವಿಶೇಷತೆಯನ್ನು ತಿಳಿಸುತ್ತಾ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
International Yoga Day ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಶ್ರೀ ಶಿವಗಂಗಾ ಯೋಗ ಕೇಂದ್ರ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ರುದ್ರೇಗೌಡರು ಮಾತನಾಡುತ್ತಾ ಈ ದಿನ 11ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದ್ದೇವೆ, ಇದಕ್ಕೆ ಮುಖ್ಯ ಕಾರಣ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರು ಹಾಕಿಕೊಟ್ಟ ಯೋಗ ದಿನಾಚರಣೆಯು ಇವತ್ತು ನಾವು 11ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ ಇದು ಬರಿ ಶಿವಮೊಗ್ಗದಲ್ಲೇ ಅಲ್ಲ ಇಡೀ ಪ್ರಪಂಚದಾದ್ಯಂತ ಈ ದಿನ ಯೋಗ ದಿನವನ್ನಾಗಿ ಆಚರಿಸುವಂತೆ ಎಲ್ಲರನ್ನ ಪ್ರೇರೇಪಿಸಿ ಈ ದಿನವನ್ನು ಹಬ್ಬದ ರೀತಿಯಲ್ಲಿ ನಾವೆಲ್ಲರೂ ಆಚರಣೆಯನ್ನ ಮಾಡುತ್ತಿದ್ದೇವೆ ಎಂದು ಹೇಳುತ್ತಾ ಯೋಗ ಗುರುಗಳಾದ ಶ್ರೀ ರುದ್ರಾರಾಧ್ಯ ಸಿ ವಿ ಅವರ ನಿಸ್ವಾರ್ಥ ಸೇವೆಯೊಂದಿಗೆ ಇವತ್ತು ಶಿವಮೊಗ್ಗದಲ್ಲಿ ನಮ್ಮ ಕೇಂದ್ರದ 36 ಉಪ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಈ ಒಂದು ಬೃಹತ್ ಮಟ್ಟದ ಸಂಖ್ಯೆಯಲ್ಲಿ ಯೋಗ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಯೋಗ ಗುರುಗಳ ಶ್ರಮ ನಿಷ್ಠೆ ಕಾರಣ ಎಂದು ಹೇಳಿದರೆ ತಪ್ಪಾಗಲಾರದು ಎಂದು ಅವರ ಕಾರ್ಯ ಕ್ಷಮತೆಯನ್ನು ಸ್ಮರಿಸುತ್ತಾ ಎಲ್ಲರಿಗೂ ಕೂಡ ಯೋಗ ದಿನದ ಶುಭಾಶಯಗಳನ್ನ ಕೋರಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಷಡಕ್ಷರಿ ಯವರು ಯೋಗ ಗುರುಗಳಾದ ಶ್ರೀ ರುದ್ರಾರಾಧ್ಯ ಸಿ ವಿ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಶ್ರೀ ಜಿ.ವಿಜಯಕುಮಾರ್, ಶ್ರೀ ಜ್ಯೋತಿಪ್ರಕಾಶ್, ಪರಿಸರ ನಾಗರಾಜು,
ಹೊಸ ತೋಟ ಸೂರ್ಯನಾರಾಯಣ, ಮೋಹನ್ ಬಾಳೇಕಾಯಿ, ಆನಂದ ಮೂರ್ತಿ. ದೇವೇಂದ್ರಪ್ಪ . ಮನು.
ಪರಮೇಶ್. ಕಾಟನ್ ಜಗದೀಶ್. ಪರೋಪಕಾರಂ ಆನಂದ್ ಕುಮಾರ್, ಡಿಎಸ್ ಚಂದ್ರಶೇಖರ್. ಪ್ರಾರ್ಥನಾ ಹಾಲಪ್ಪ,ಕೇಂದ್ರ ಸಂವಹನ ಇಲಾಖೆ ಭಾರತ ಮತ್ತು ಪ್ರಸಾರ ಸಚಿವಾಲಯದ ಶ್ರೀ ಲಕ್ಷ್ಮಿಕಾಂತ ಸಿವಿ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಯೋಗ ಶಿಕ್ಷಕರು ಯೋಗ ಬಂಧುಗಳು ನಗರದ 36 ಯೋಗ ಕೇಂದ್ರದ ಯೋಗ ಶಿಬಿರಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...