S.N. Chennabasappa ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಆಯ್ಕೆಯಾಗಿರುವ ಶ್ರೀ ಕೆ. ಮಾಯಣ್ಣಗೌಡ ಅವರು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ, ವಿವಿಧ ನಗರಾಭಿವೃದ್ಧಿ ವಿಚಾರಗಳಲ್ಲಿ ಫಲಪ್ರದ ಚರ್ಚೆ ನಡೆಸಿದರು.
S.N. Chennabasappa ಈ ಹಿಂದೆ ಕೂಡ ಪಾಲಿಕೆ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಅವರಿಗಿದ್ದು, ಅವರ ನವ ಚಿಂತನೆಗಳು ಮತ್ತು ಸ್ಪಷ್ಟ ಕಾರ್ಯಯೋಜನೆಗಳೊಂದಿಗೆ ಶಿವಮೊಗ್ಗ ನಗರದ ಮುಂದಿನ ಹಂತದ ಸಮಗ್ರ ಅಭಿವೃದ್ಧಿಗೆ ದಿಕ್ಕು ನೀಡಲಿ ಎಂದು ಶಾಸಕರು ಶುಭ ಕೋರಿದರು.
