Monday, February 2, 2026
Monday, February 2, 2026

Human Rights and Society ಜನಸಾಮಾನ್ಯರಲ್ಲಿ ಮಾನವೀಯ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು- ಐಡಿಯಲ್ ಗೋಪಿ

Date:

Human Rights and Society ಮಾನವ ಹಕ್ಕುಗಳು ಕುರಿತಾಗಿ ಜನಸಾಮಾನ್ಯರಲ್ಲಿ ಜಾಗೃತಿಯ ಅರಿವು ಮೂಡಿಸಬೇಕಿದೆ ಇದರಿಂದ ಸಾಂವಿಧಾನಿಕವಾಗಿ ಮೂಲಭೂತ ಸೌಲಭ್ಯಗಳ ಬಗ್ಗೆ ಆಡಳಿತ ವ್ಯವಸ್ಥೆಯೊಂದಿಗೆ ಪ್ರಶ್ನಿಸಬಹುದಾಗಿದೆ ಎಂದು ಮಾಜೀ ಪಾಲಿಕೆ ಸದಸ್ಯರಾದ ಐಡಿಯಲ್ ಗೋಪಿಯವರು ತಿಳಿಸಿದರು.

ಫೋರಂ ವಿನೋಬಾನಗರದ ವಿಧಾತ್ರಿ ಭವನದಲ್ಲಿ ಆಯೋಜಿಸಲಾಗಿದ್ದ ಮಾನವ ಹಕ್ಕುಗಳು ಮತ್ತು ಸಮಾಜ ಎನ್ನುವ ವಿಷಯ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾನೂನು ಸಲಹೆಗಾರರಾದ ಗೀತಾ ಮಾನೆ ಅವರು ಮಾತನಾಡಿ ರಾಷ್ಟ್ರ ಸಂವಿಧಾನವು ಇ ನೆಲದ ವಾಸಿಗಳಿಗೆ ಸ್ವತಂತ್ರವಾಗಿ, ಸಾಮಾಜಿವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬದುಕುವ ಹಕ್ಕುಗಳನ್ನು ನೀಡಿದೆ, ಇದೊಂದು ಡೆಮಾಕ್ರಸಿ ಎಂದು ಹೇಳಿದರಲ್ಲದೆ, ಎಲ್ಲಿ ಆಡಳಿತರೂಢರಿಂದ ತಾತ್ವಿಕವಾಗಿ ನ್ಯಾಯ ಎನ್ನುವುದು ಮರಿಚಿಕೆ ಆಗುವುದೋ ಅಲ್ಲಿ ನ್ಯಾಯಕ್ಕಾಗಿ ಸರಳೀಕರಣವಾಗಿ ಮಾನವ ಹಕ್ಕುಗಳ ಕಾನೂನು ಸಹಾಯವನ್ನು ಮಾಡುತ್ತದೆ ಈ ಕಾರಣಕ್ಕಾಗಿಯೇ ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಆಯೋಗಗಳು ರಚನೆ ಆಗಿದೆ, ಇದಕ್ಕೆ ಹೊಂದಿಕೊಂಡಂತೆ ಸಾಮಾಜಿಕವಾಗಿ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಅಂತಹ ಸಂಸ್ಥೆಗಳು ನಾಗರೀಕ ನ್ಯಾಯಕ್ಕಾಗಿ ದನಿಯಾಗುತ್ತಿರುವುದು ನಾವು ನೋಡಬಹುದಾಗಿದೆ ಎಂದು ತಿಳಿಸಿದರು.

ಈ ಸಂಸ್ಥೆಯಲ್ಲಿ ಕಾನೂನು ಸಲಹೆಗಾರರಾಗಿ ಕೆಲಸ ಮಾಡುವುದಕ್ಕೆ ಸಂತಸ ತಂದಿದೆ ಎಂದು ವಿವರಿಸಿದರು,

Human Rights and Society ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಯಾನಂದ್ ಎಸ್.ವಿ ಅವರು ಮಾತನಾಡಿ ಎಷ್ಟೋ ಪ್ರಕರಣಗಳಲ್ಲಿ ಸರ್ಕಾರದ ಭೂಮಿ ಸರ್ಕಾರಕ್ಕೆ ಉಳಿಸುವುದಕ್ಕೆ ಹೋರಾಟಗಳು ನಡೆಸಬೇಕಾದ ದನಿಯಾಗಬೇಕಾದ ಸಂದರ್ಭಗಳಿವೆ, ಅಧಿಕಾರಿಗಳೇ ಇದಕ್ಕೆ ತಾತ್ಸಾರತೆ ಹೊಂದಿದರೆ ಜನ ನ್ಯಾಯಗಳು ಸಿಗುವುದು ವಿಳಂಬವಾಗುತ್ತದೆ, ಈ ನಿಟ್ಟಿನಲ್ಲಿ ಪಶು ಸಂಗೋಪನಾ ಇಲಾಖೆಗೆ ಭೂ ಪ್ರದೇಶವನ್ನು ಉಳಿಸುವುದಕ್ಕೆ ರೈತರೊಂದಿಗೆ ನಾವುಗಳು ಹೋರಾಟ ನಡೆಸಿ ಸರ್ಕಾರಕ್ಕೆ ಉಳಿಸಿದ ಉದಾಹರಣೆಗಳಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನೂತನ ಕಾರ್ಯಕಾರಿ ಮಂಡಳಿಗೆ ಗುರುತಿನ ಚೀಟಿ, ಜವಾಬ್ದಾರಿ ಪತ್ರ ಸೇರಿದಂತೆ, ಪುಸ್ತಕಗಳನ್ನು ವಿತರಿಸಲಾಯಿತು ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ ನಿರೂಪಿಸಿದರು ವೇದಿಕೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಎಲ್.ಕೆ ಪರಮೇಶ್ವರ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಫೋರಂ ನ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...