Saturday, December 6, 2025
Saturday, December 6, 2025

Shimoga News ನೀರು,ಗಾಳಿ ಬೆಂಕಿಯೊಂದಿಗೆ ಸರಸ ಬೇಡ. ತರಬೇತಿದಾರರ ಮಾರ್ಗದರ್ಶನದಲ್ಲಿಚಾರಣ ಮಾಡಿ- ಎಸ್.ಎಸ್.ವಾಗೇಶ್

Date:

Shimoga News ನೀರನ್ನು ಗೌರವಿಸಿ, ಭಯ ಬೇಡ ಪ್ರಕೃತಿದತ್ತ ಕೊಡುಗೆಗಳನ್ನು ನಾವೆಲ್ಲರೂ ಪೂಜಿಸಬೇಕು ಎಂದು ಶರಾವತಿ ಹಿನ್ನಿರ ಸಮೀಪ ಇರುವ ಹಕ್ಲು ಹೆರಿಟೇಜ್ ಹೋಂಗೆ ಪ್ರವಾಸ ಹೊರಟ ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕ ಆಯೋಜಿಸಿದ ನೀರಿನಲ್ಲಿ ಕ್ರೀಡೆಗೆ ಹೊರಟ ಸದಸ್ಯರಿಗೆ ಬೀಳ್ಕೋಡುತ್ತ ಛೇರ್ಮನ್ ಎಸ್.ಎಸ್.ವಾಗೇಶ್ ಮಾತನಾಡುತ್ತಿದ್ದರು.
ನೀರು, ಗಾಳಿ, ಬೆಂಕಿ ಯೊಂದಿಗೆ ಸರಸ ಬೇಡ, ಪ್ರಕೃತಿ ವಿರುದ್ಧ ಯಾರು ಹೋಗಬಾರದು, ಅಲ್ಲಿ ಅನುಭವ ಪಡೆದ ತರಬೇತುದಾರರು ಇದ್ದಾರೆ ಅವರು ಹೇಳಿದಂತೆ ಎಲ್ಲರೂ ಚಾಚುತ್ತಪ್ಪದೆ ನಡೆದು ಕೊಳ್ಳಬೇಕು ಎಂದರು.
Shimoga News ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡುತ್ತ ತರುಣೋದಯ ಘಟಕ ಸದಸ್ಯರ ಭಾವನೆಗೆ ತಕ್ಕಂತೆ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿ ಕೊಡಲಾಗುತ್ತದೆ. ಮಳೆಗಾಲ ಪ್ರಾರಂಭ ವಾಗುತ್ತಿದೆ. ಎಲ್ಲರೂ ತಮ್ಮ ಶಕ್ತಾನುಸಾರ ಸೂಕ್ತ ಸ್ಥಳಗಳಲ್ಲಿ ಸಸಿ ನೆಟ್ಟು ಅದರ ಪೋಷಣೆಯನ್ನು ಮಾಡುವ ದೃಡಸಂಕಲ್ಪ ಮಾಡಿ, ಪ್ರಕೃತಿಗೆ ಅಲ್ಪಕೊಡುಗೆ ನೀಡಬೇಕಾಗಿ ಕೋರಿದರು.
ಕಾರ್ಯದರ್ಶಿ ಸುರೇಶ್ ಕುಮಾರ್ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು, ಮಲ್ಲಿಕಾರ್ಜುನ ಕಾನೂರ್ ವಂದಿಸಿದರು. ಡಾ.ಶ್ರೀಧರ್, ಭದ್ರಾವತಿ ಸುರೇಶ್, ಬಸವಪ್ಪ, ಶಾಂತರಾಜ್ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...