Monday, December 15, 2025
Monday, December 15, 2025

ಹಳೇ ಬೊಮ್ಮನಕಟ್ಟೆಯ ಸ್ಮಶಾನ ಅಭಿವೃದ್ಧಿಗೆ ಚಾಲನೆ

Date:

ಸುಮಾರು ಎರಡು ದಶಕಗಳ ಹಿಂದೆ ಹೆಚ್.ಎಂ. ಚಂದ್ರಶೇಖರಪ್ಪನವರ ಶಿವಮೊಗ್ಗ ಕ್ಷೇತ್ರ ಶಾಸಕರಾಗಿದ್ದ ಅವಧಿಯಲ್ಲಿ ನಗರದ ಹಳೇ ಬೊಮ್ಮನಕಟ್ಟೆಯಲ್ಲಿ ಸುಮಾರು 3 ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಾಗಿಟ್ಟಿದ್ದರು. ಆಗ ಸ್ಥಳೀಯ ನಿವಾಸಿಗಳು ಇದರ ಸದುಪಯೋಗ ಪಡೆಯುತ್ತಿದ್ದರು.
ನಂತರ ದಿನಗಳಲ್ಲಿ ಈ ಭಾಗದಲ್ಲಿ ಲೇಔಟ್‌ಗಳಾದವು. ಜೊತೆಗೆ ಮುಖ್ಯವಾಗಿ ಆಶ್ರಯ ಬಡಾವಣೆ ಆದ ಸಂದರ್ಭದಲ್ಲಿ ಬೊಮ್ಮನಕಟ್ಟೆಗೆ ಸಾಕಷ್ಟು ಹೆಸರು ಬಂತು. ಆದರೆ ಚಂದ್ರಶೇಖರಪ್ಪ ಅವರು ಸ್ಮಶಾನಕ್ಕೆ ಒದಗಿಸಿದ್ದ ಜಾಗವು ಅಭಿವೃದ್ಧಿ ಕಾಣಲಿಲ್ಲ. ಇದರಿಂದ ಸ್ಮಶಾನಕ್ಕೆ ಮೂಲ ಭೂತ ಸೌಲಭ್ಯವಿಲ್ಲದೆ ಪಾಳು ಬಿದ್ದಂತಾಗಿತ್ತು.
ಸ್ಮಶಾನ ಅಭಿವೃದ್ಧಿಗೊಳಿಸಲು ಹಳೇ ಬೊಮ್ಮನಕಟ್ಟೆಯ ನಿವಾಸಿಗಳು ಇತ್ತೀಚೆಗೆ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದ್ದರು. ಇದಕ್ಕೆ ಸ್ಪಂಧಿಸಿದ ಆಯುಕ್ತರು ಸ್ಮಶಾನದ ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ ಎಂಎಲ್‌ಸಿ ಬಲ್ಕಿಶ್ ಭಾನು, ಆಯುಕ್ತರಾದ ಕವಿತಾ ಯೋಗಪ್ಪ ನವರ್ ಅವರು ಸ್ಥಳ ಪರಿಶೀಲನೆ ನಡೆಸಿ ಮೂಲಭೂತ ಸೌಕರ್ಯ ನೀಡಲು ಮುಂದಾಗಿದ್ದಾರೆ.
ಸ್ಮಶಾನಕ್ಕೆ ಮೂಲಭೂತ ಸೌಕರ್ಯ ನೀಡಲು ಸ್ಪಂಧಿಸಿದ ಎಂಎಲ್‌ಸಿ ಅವರಿಗೆ ಮತ್ತು ಆಯುಕ್ತರಿಗೆ ಸಮಾಜ ಸೇವಕ ಎಸ್. ಸಿದ್ಧೇಶ್, ವಾರ್ಡಿನ ಪ್ರಮುಖರಾದ ಮಾಲತೇಶ್, ಮಹೇಶ್, ಮೋಹನ್, ಪರಮೇಶ್ವರಪ್ಪ, ಶ್ರೀಕಾಂತ್, ಸಿದ್ದೇಶ್, ಅನಂತ, ಪ್ರಕಾಶ್, ಶೃತಿ, ಜ್ಯೋತಿ ಹಾಗೂ ಇನ್ನಿತರರು ಕೃತಜ್ಞತೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...