ಶಿವಮೊಗ್ಗ ನಗರದ ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಏಪ್ರಿಲ್ 27ರ ಭಾನುವಾರ ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಹೃದಯಂಗಮವಾದ ವಸ್ತುವನ್ನು ಹೊಂದಿರುವ ‘ತಳಿ’ ಎಂಬ ನೂತನ ನಾಟಕವನ್ನು ಏರ್ಪಡಿಸಲಾಗಿದೆ.
ಖ್ಯಾತ ನಟ ಮತ್ತು ನಿರ್ದೇಶಕ ಎಸ್.ಎನ್. ಸೇತುರಾಮ್ ಅವರ ರಚನೆ ಮತ್ತು ನಿರ್ದೇಶನದ ಈ ನಾಟಕದ ಪ್ರದರ್ಶನಕ್ಕೆ 100 ರೂಗಳ ಟಿಕೆಟ್ ದರ ಇರಿಸಲಾಗಿದೆ.
ಈಗಾಗಲೇ ಕೆಲವು ಪ್ರದರ್ಶನ ಕಂಡು, ಭಾರೀ ಜನ ಮೆಚ್ಚುಗೆ ಪಡೆದಿರುವ ಈ ನಾಟಕವನ್ನು ಆಸಕ್ತ ನಾಟಕಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸಬೇಕೆಂದು ಅಜೇಯ ಸಂಸ್ಕೃತಿ ಬಳಗ ವಿನಂತಿಸಿದೆ.
ಮುಂಚಿತವಾಗಿ ಟಿಕೆಟ್ ಬೇಕಾದವರು ನೆಹರು ರಸ್ತೆಯ ರಾಯಲ್ ಕಾಫಿ ವರ್ಕ್ಸ್ ನಲ್ಲಿ ಪಡೆಯಬಹುದು. ಟಿಕೆಟ್ ಗಾಗಿ ಅಥವಾ ಹೆಚ್ಚಿನ ಮಾಹಿತಿಗಾಗಿ 94484 58457, 83108 76277, 98441 53534 ಇಲ್ಲಿಗೆ ಸಂಪರ್ಕಿಸಿ.