S.N.Chennabasappa ವಿದ್ಯಾರ್ಥಿಗಳು ಮತ್ತು ಬಹುಸಂಖ್ಯಾತರು ನನ್ನನ್ನು ಭೇಟಿಮಾಡಿ ರಾಜ್ಯ ಸರಕಾರದ ಪರೀಕ್ಷಾ ಮಂಡಳಿಯ ಅಧಿಕಾರಿಯಿಂದ ತಮಗಾದ ಅನ್ಯಾಯವನ್ನು ತೋಡಿಕೊಂಡಿರುತ್ತಾರೆ. ದಿನಾಂಕ: 16/04/2025 ರಂದು ಶಿವಮೊಗ್ಗ ನಗರದ ಆದಿಚುಂಚನಗಿರಿ ಬಿಜಿಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬಹುಸಂಖ್ಯಾತ ವಿದ್ಯಾರ್ಥಿಗಳು ನಿತ್ಯ ಧರಿಸುವ ಜನಿವಾರ, ಶಿವದಾರ, ಕಾಶಿದಾರ ಹಾಗು ನಂಬಿದ ದೇವರುಗಳ ದಾರದ ಸಂಕೇತಗಳನ್ನೆಲ್ಲಾ ಬಿಚ್ಚಿಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳನ್ನು ಗೊಂದಲಗೊಳಿಸಿದ್ದಲ್ಲದೇ ಅಧೀರರನ್ನಾಗಿ ಮಾಡಿ ತೊಂದರೆ ಕೊಟ್ಟಿದ್ದಾರೆ. ಇದು ವಿದ್ಯಾರ್ಥಿಯ ಹುಟ್ಟು ನಂಬಿಕೆ ಮತ್ತು ಭವಿಷ್ಯ ಎರಡನ್ನೂ ನಿಶ್ಚಿತವಾಗಿ ತೊಡೆದು ಹಾಕುವ ಪ್ರಯತ್ನವಾಗಿದೆ. ಪರೀಕ್ಷಾ ಕೇಂದ್ರದ ಅಧಿಕಾರಿ ನಡೆದು ಕೊಂಡಿರುವ ರೀತಿ ಬಹುಸಂಖ್ಯಾತರ ಮೇಲಿನ ನೇರ ಅಕ್ರಮವಾಗಿರುತ್ತದೆ ಮತ್ತು ಅತೀರೇಕದ ವರ್ತನೆಯಾಗಿರುತ್ತದೆ.
S.N.Chennabasappa ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ಶಿವದಾರಗಳನ್ನು ಕತ್ತರಿಸಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆತರುವ ಕೆಲಸವಾಗಿರುತ್ತದೆ. ಮೇಲ್ನೋಟಕ್ಕೆ ಆಡಳಿತದಿಂದ ನಡೆದ ತಪ್ಪು ತೋರುತ್ತದೆ ಈ ಬಗ್ಗೆ ಕುರಿತು ತಕ್ಷಣವೇ ಈ ವಿಷಯ ಪರಿಶೀಲಿಸಿ ತಪ್ಪು ಎಸಗಿದ ಅಧಿಕಾರಿಯ ಮೇಲೆ ತಕ್ಷಣ ಸೂಕ್ತ ಕಠಿಣ ಕ್ರಮ ಜರುಗಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಸನ್ನಿವೇಶಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕಾಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಕೋರಲಾಗಿದೆ.