Akhila Karnataka Sports Karate Association ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ ಕರಾಟೆ ಇಂಡಿಯಾ ಆರ್ಗನೈಜೇಷನ್ ನ ಕರಾಟೆ ತೀರ್ಪುಗಾರರ ಪರೀಕ್ಷೆಯಲ್ಲಿ
ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ನ ತೀರ್ಪುಗಾರ ಹಾಗೂ ಶಿವಮೊಗ್ಗದ ಒಕ್ಕಲಿಗ ಸಮಾಜದ ಶ್ರೀಮತಿ ಜ್ಯೋತಿ ಮತ್ತು ಶಾಂತರಾಜು ದಂಪತಿಗಳ ಪುತ್ರ ಶ್ರೀ ಹರ್ಷ ಪರೀಕ್ಷೆಯಲ್ಲಿ ಭಾಗವಹಿಸಿ ಜೆ ಎ ತೀರ್ಪುಗಾರರಾಗಿ ಉತ್ತೀರ್ಣರಾಗಿದ್ದು
ಇವರು ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ತೀರ್ಪುಗಾರರ ಪರೀಕ್ಷೆಯಲ್ಲಿ ಭಾಗವಹಿಸಿ
ಜಿ ಬಿ ತೀರ್ಪುಗಾರರಾಗಿ ಅರ್ಹತೆಯನ್ನು ಪಡೆದುಕೊಂಡಿದ್ದರು.
Akhila Karnataka Sports Karate Association ಕರಾಟೆ ಇಂಡಿಯಾ ಆರ್ಗನೈಸೇಷನ್
ಭಾರತದ ರಾಷ್ಟ್ರೀಯ ಕರಾಟೆ ಫೆಡರೇಶನ್ ಆಗಿದ್ದು ವಿಶ್ವಕರಾಟೆ ಫೆಡರೇಷನ್ ಇಂದ ಮಾನ್ಯತೆ ಪಡೆದಿದ್ದು ಪ್ರಸ್ತುತ ಶ್ರೀ ಹರ್ಷ
ಮೇಲ್ಕಂಡ ಸಂಸ್ಥೆಯ ಅರ್ಹತೆ ಪಡೆದ ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ತೀರ್ಪುಗಾರನಾಗಿದ್ದು
ಪ್ರಸ್ತುತ ಇವರು ಕರಾಟೆ ಬ್ಲಾಕ್ ಬೆಲ್ಟ್ ಆಗಿದ್ದು ವಿನೋಬನಗರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ತೀರ್ಪುಗಾರನಾಗಿ
ಮುಂಬಡ್ತಿ ಪರೀಕ್ಷೆಯಲ್ಲಿ ಉತ್ತೀರ್ಣನಾದ ಶ್ರೀ ಹರ್ಷ ರವರಿಗೆ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಶುಭಕೋರಿದ್ದಾರೆ.