ಶಿವಮೊಗ್ಗ ಕನಕ ಭಜನಾ ಮಂಡಳಿಯವರು ದಶಮಾನೋತ್ಸವ ಕಾರ್ಯಕ್ರಮವನ್ನು ಜಯಂತಿ ಪರಮೇಶ್ವರ್ ರವರ ಮನೆಯಲ್ಲಿ ಆಚರಣೆ ಮಾಡಿದರು. ಸವಿನೆನಪಿಗಾಗಿ ಕನಕದಾಸರ ಕೀರ್ತನೆಗಳ ಗಾಯನ ಸ್ಪರ್ಧೆ ಯನ್ನು ಶಿವಮೊಗ್ಗದ ಆಯ್ದ ಭಜನಾ ಮಂಡಳಿಗಳಿಗೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ, ಉತ್ತರ ಕರ್ನಾಟಕದ ಭಜನಾ ಪರಿಷತ್ತಿನ ಸಂಚಾಲಕರಾದ
ಡಾ , ವಿಜೇಂದ್ರ ಚಾರ್ ಜೋಷಿಗಳು ಮಂತ್ರಾಲಯ,
ನೂತನ ಜಿಲ್ಲಾ ಭಜನಾ ಪರಿಷತ್ತಿನ ಅಧ್ಯಕ್ಷ ವೇ/ ಬ್ರ ಸಂದೇಶ್ ಉಪಾಧ್ಯಯ,
ಕಾರ್ಯದರ್ಶಿ ಶಬರೀಶ್ ಕಣ್ಣನ್, ಅಂಕಣಗಾರ್ತಿ ಶ್ರೀರಂಜನಿ ದತ್ತಾತ್ರಿ,
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಹುಲ್ ಪಿ ಬಿದರೆ, ಕನಕ ಭಜನಾ ಮಂಡಳಿ ಅಧ್ಯಕ್ಷರಾದ ಗೀತಾ ನಾಗರಾಜ್, ಕಾರ್ಯದರ್ಶಿ ರಾಣಿ ರಾಜು, ಉಪಾಧ್ಯಕ್ಷೆ ಸಪ್ನಾ ಸುರೇಶ್ ಹಾಗೂ ಆಡಳಿತ ಮಂಡಳಿಯ ಕಾರ್ಯಕಾರಿ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದ ಕನಕದಾಸರ ಕೀರ್ತನೆ ಗಾಯನ ಸ್ಪರ್ಧೆ
Date: