Saturday, December 6, 2025
Saturday, December 6, 2025

Mallikarjuna Murugarajendra Swamiji ಆಸ್ಪತ್ರೆಗಳು ಕಡಿಮೆಯಾಗಬೇಕು. ಯೋಗ ಕೇಂದ್ರಗಳು ಹೆಚ್ಚಾಗಬೇಕು-ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರಶ್ರೀ

Date:

Mallikarjuna Murugarajendra Swamiji ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದು ಅತ್ಯಂತ ಅಗತ್ಯ ಎಂದು ಶಿವಗಂಗಾ ಯೋಗಕೇಂದ್ರದ ಮಹಾಪೋಷಕ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಕಲ್ಲಹಳ್ಳಿ ವಿನೋಬನಗರದ ಶಿವಗಂಗಾ ಕಟ್ಟಡದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ ನೂತನ ವಿಶ್ವಸ್ಥ ಸಮಿತಿ, ಸಂಸ್ಥೆಯ ಪೋಷಕರು, ಯೋಗ ಶಿಕ್ಷಕರ ಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಅವರು ಶಿವಮೊಗ್ಗ ನಗರದಲ್ಲಿ ಆರಂಭಿಸಿದ ಯೋಗ ದಾಸೋಹ ಒಂದು ರೀತಿಯಲ್ಲಿ ಯೋಗದ ವಸಂತ ಕಾಲ, ಅವರದ್ದು ಭಗೀರಥ ಪ್ರಯತ್ನ. ಸಂಸ್ಥೆಯ ಬೆಳವಣಿಗೆ ಕೇವಲ ಹಣದಿಂದ ಸಾಧ್ಯವಿಲ್ಲ, ಸೇವಾ ಮನೋಭಾವ ಇದ್ದರೆ ಅದು ಬೆಳೆಯುತ್ತದೆ. ಆಸ್ಪತ್ರೆಗಳು ಕಡಿಮೆಯಾಗಬೇಕು ಯೋಗ ಕೇಂದ್ರಗಳು ಹೆಚ್ಚಾಗಬೇಕು. ಆಸೆಗಳು ಮಿತಿಯಲ್ಲಿದ್ದು, ತ್ಯಾಗ ಸೇವೆಯಲ್ಲಿ ಸುಖವಿದೆ. ಪ್ರಪಂಚವೇ ಭಾರತದ ಯೋಗವನ್ನು ಗಮನಿಸುತ್ತಿದೆ. ಮನೆಮನೆಗೂ ಯೋಗವನ್ನು ತಲುಪಿಸಬೇಕು ಎಂದು ತಿಳಿಸಿದರು.
ಯೋಗಾಚಾರ್ಯ ಸಿ. ವಿ. ರುದ್ರಾರಾಧ್ಯ ಮಾತನಾಡಿ, ಶ್ರೀ ಶಿವಗಂಗಾ ಯೋಗ ಕೇಂದ್ರದ ಬೆಳವಣಿಗೆಯಲ್ಲಿ ಸ್ವಾಮೀಜಿ ಅವರ ಮಾರ್ಗದರ್ಶನ ವಿಶ್ವಸ್ತ ಮಂಡಳಿ ಮತ್ತು ನಗರದ ಎಲ್ಲಾ ಜನತೆ ಸಹಕಾವಿದೆ ಎಂದರು.
ಶಿವಗಂಗಾ ಯೋಗಕೇಂದ್ರದ ನೂತನ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ ಮಾತನಾಡಿ, ಯೋಗ ಶಿಕ್ಷಣವನ್ನು ನೀಡುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚು. ಅವರಿಗೆ ಇರಬೇಕಾದ ಆಳವಾದ ಜ್ಞಾನ ಶಿಸ್ತು, ಶಾಖೆಗಳಲ್ಲಿ ಶುಚಿತ್ವ, ಪಾಲಿಸಬೇಕಾದ ನೀತಿ ನಿಯಮಗಳನ್ನು ತಿಳಿಸಿದರು.
Mallikarjuna Murugarajendra Swamiji ಲೆಕ್ಕ ಪರಿಶೋದಕ ಕೆ.ವಿ.ವಸಂತಕುಮಾರ್ ಮಾತನಾಡಿ, ಶಿಕ್ಷಕರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿದರೆ ಉತ್ತಮ ಪ್ರಜೆಗಳು ದೇಶವನ್ನಾಳುತ್ತಾರೆ ಎಂದರು. ಕಾರ್ಯದರ್ಶಿ ಹೆಚ್.ಎಂ. ಚಂದ್ರಶೇಖರಯ್ಯ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಹೊಸತೋಟ ಸೂರ್ಯನಾರಾಯಣ ವಂದಿಸಿದರು.
ಕೈಗಾರಿಕೋದ್ಯಮಿ ಹಾಲಪ್ಪ, ಕಲಗೋಡು ರತ್ನಾಕರ್, ಎಸ್.ಎಸ್.ಜ್ಯೋತಿ ಪ್ರಕಾಶ್, ಕೆ.ಇ.ಕಾಂತೇಶ್, ಡಿ.ಎಂ.ಚಂದ್ರಶೇಖರ್, ಷಡಕ್ಷರಿ, ಜಿ.ವಿಜಯಕುಮಾರ್. ಜಿಎಸ್.ಓಂಕಾರ್, ಕಾಟನ್ ಜಗದೀಶ್, ಡಿಎಸ್.ಚಂದ್ರಶೇಖರ್ ಹಾಗೂ ಯೋಗ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...