Klive Special Article ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ
ಅರೋಗತಾಂ/
ಅಜಾಡ್ಯಂ ವಾಕ್ಪಟುತ್ವಂಚ ಹನುಮತ್ ಸ್ಮರಣಾತ್
ಭವೇತ್//
ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದು ಶ್ರೀರಾಮದೇವರು ಅವತಾರ ಮಾಡಿದ ದಿನವಾದರೆ,ಚೈತ್ರಮಾಸದ ಶುಕ್ಲಪಕ್ಷದ ಪೌರ್ಣಿಮೆಯಂದು ಶ್ರೀರಾಮದೇವರ ಅಂತರಂಗಭಕ್ತ ಶ್ರೀಹನುಮಂತದೇವರು ಅವತಾರಮಾಡಿದ ದಿನ.
ಶ್ರೀಹನುಮಂತದೇವರ ಭಕ್ತಿಯ ಸ್ಮರಣೆ ಮಾತ್ರದಿಂದಲೇ ಅವರ ಭಕುತರಿಗೆ ಶೌರ್ಯ,ಧೈರ್ಯ,ಬುದ್ಧಿ,ಬಲ,ವಾಕ್ಪಟುತ್ವ ಈ ಎಲ್ಲಾ ಗುಣಗಳೂ ಪ್ರಾಪ್ತಿಯಾಗುವುವು. ಹನುಮಂತ ದೇವರನ್ನುಜ್ಞಾನ,ಬುದ್ಧಿ,ಶಕ್ತಿಯ ಸಂಗಮಮೂರ್ತಿಎಂದುಹೇಳಬಹುದು.
ಹನುಮಂತ ದೇವರ ಭಕ್ತರ ಸಂಖ್ಯೆ
ಜಾತಿ,ಮತ ಭೇದವಿಲ್ಲದೇ ಅಪಾರವಾಗಿದೆ.
ಹನುಮಂತದೇವರ ಅವತಾರ ಪೂರ್ತಿ ಅವರ ಜೀವೋತ್ತಮತೆ ಪ್ರಸಿದ್ಧವಾಗುತ್ತದೆ.ಎಲ್ಲಾ ವಾನರ ಸೇನಾನಿಗಳೂ ಸೀತೆಯನ್ನು ಹುಡುಕುವುದಕ್ಕಾಗಿ ಸಮುದ್ರಲಂಘನ ಮಾಡಲಿಕ್ಕಾಗದೆ ಕೈಚೆಲ್ಲಿ ಕುಳಿತಾಗ ಹನುಮಂತದೇವರು ಬಹಳ ಲೀಲಾ
ಜಾಲವಾಗಿ ಶರಧಿಯನ್ನು ದಾಟಿ,ಸೀತೆಯನ್ನು ಕಂಡು ಶ್ರೀರಾಮಚಂದ್ರನು ಕೊಟ್ಟಿದ್ದ ಮುದ್ರೆಯುಂಗುರಕೊಟ್ಟು,ದೈತ್ಯರಸೆದೆಬಡಿದು,
ಲಂಕಾಪಟ್ಟಣವನ್ನು ಸುಟ್ಟು,ಲಂಕಾಧೀಶನಾಗಿದ್ದ ರಾವಣನಅಹಂಕಾರವನ್ನುಪುಡಿಪುಡಿಮಾಡಿದವರು ಹನುಮಂತದೇವರು.
ಲಂಕಾ ಯುದ್ಧದಲ್ಲಿ ಲಕ್ಷ್ಮಣನುಮೂರ್ಛೆಹೋದಾಗ ಸಂಜೀವಿನಿ ಸಸ್ಯವನ್ನು ಗುರುತಿಸಲಾಗದೇ ಇಡೀ ಸಂಜೀವಿನಿ ಪರ್ವತವನ್ನೇಕ್ಷಣ ಮಾತ್ರದಲ್ಲಿ ತಂದು ಸಂಜೀವಿನಿಯಿಂದ ಲಕ್ಷ್ಮಣನಿಗೆ ಎಚ್ಚರ ಬರುವಂತೆ ಮಾಡಿ ತನ್ನ ಸ್ವಾಮಿಶ್ರೀರಾಮನಿಗೆ ಸೇವೆ ಸಲ್ಲಿಸಿದ ಅಂತರಂಗ ಭಕ್ತಹನುಮ.ವಾಲಿಯಿಂದ ಅನ್ಯಾಯ
ವಾಗಿದ್ದ ಸುಗ್ರೀವನಿಗೆ ಶ್ರೀರಾಮನಿಂದ ನ್ಯಾಯ ಕೊಡಿಸಿದವನು ಹನುಮಂತ.ಹನುಮಂತನ ಸಹಾಯವಿಲ್ಲದಿದ್ದರೆಸುಗ್ರೀವನಿಗೆಅಣ್ಣವಾಲಿ
ಯಿಂದಪ್ರಾಣರಕ್ಷಿಸಿಕೊಳ್ಳುವುದೇಕಷ್ಟವಾಗಿತ್ತು.ವಾಲಿ ಸುಗ್ರೀವನನ್ನು ಕೊಲ್ಲಲು ಬೆನ್ನತ್ತಿ ಹೋದಾಗ ,ಸುಗ್ರೀವನಿಗೆ ಋಷ್ಯಮೂಕಪರ್ವತಕ್ಕೆ ಹೋಗುವಂತೆಸಲಹೆಮಾಡುತ್ತಾನೆ.ಏಕೆಂದರೆವಾಲಿಗೆ ಋಷಿಗಳ ಶಾಪವಿದ್ದುದರಿಂದ ಋಷ್ಯಮೂಕ ಪರ್ವತಕ್ಕೆ ಹೋಗುವಂತಿರಲಿಲ್ಲ.ಸಕಾಲದಲ್ಲಿ ಸಲಹೆ ಕೊಡುವುದರಲ್ಲಿ ಹನುಮಂತ ತುಂಬ ಜಾಣ.
ಅಂತಃಕರಣ ತುಂಬಿ ಪೋಷಿಸಿ ಉದ್ಧರಿಸುವ ತಾಯಿ-ಹನುಮಂತ,ಆಧ್ಯಾತ್ಮ ಸಂಸ್ಕಾರ ಕೊಟ್ಟು ಬೆಳೆಸುವ ತಂದೆ-ಹನುಮಂತ.ಅಮೃತ-ಮೋಕ್ಷಕ್ಕೆ ಕಾರಣವಾಗುವ ನಿಜ ವಿದ್ಯೆ ಕೊಟ್ಟು ಆತ್ಮೋದ್ಧಾರ ಮಾಡುವ ಸರಿಸಮಾನರಿನ್ನಿಲ್ಲದ ಪರಮ ಗುರು-ಪವಮಾನರಾಯ(ಹನುಮಂತದೇವರು).
ಭಕ್ತಿಯ ದ್ಯೋತಕ ಹನುಮಂತದದೇವರು.
Klive Special Article ತನ್ನ ಸ್ವಾಮಿಯಾದ ಶ್ರೀರಾಮಚಂದ್ರನಲ್ಲಿನ ಭಕುತಿಯ ಎದುರು,ಸಂಪತ್ತು ತುಂಬಿದ ಜಗತ್ತು
ಏನೂ ಅಲ್ಲ ಹನುಮಂತದೇವರಿಗೆ.ಅವರಿಗೆ ತಮ್ಮ
ಪ್ರಾಣಕ್ಕಿಂತಲೂ ಮಿಗಿಲಾದದ್ದು ಶ್ರೀರಾಮ ಸೇವೆ.
ಹನುಮಂತನ ಭಕ್ತಿಯ ,ಶಕ್ತಿಯನ್ನು ಸರ್ವಜ್ಞನಾದ ಶ್ರೀರಾಮನಿಗೆ ಗೊತ್ತಿದ್ದರಿಂದಲೇ ಶ್ರೀರಾಮ ಸೀತೆಗೆ ಉಂಗುರ ಕೊಡಲು ಕೊಟ್ಟಿದ್ದು ಹನುಮಂತ
ದೇವರಿಗೆ,ಸಮುದ್ರಲಂಘನ ಮಾಡಲು ಆಯ್ಕೆ ಮಾಡಿದ್ದು ಹನುಮಂತನನ್ನೆ,ಲಂಕೆಯನ್ನು ಸುಟ್ಟು ರಾವಣನ ಅಹಂಕಾರ ಅಡಗಿಸಲು ರಾಮನು ಆಯ್ಕೆ ಮಾಡಿದ್ದು ಹನುಮಂತದೇವರನ್ನೆ.
ನೆರೆದ ರಾಜಸಭೆಯಲ್ಲಿ ರಾವಣನು ಹನುಮಂತನನ್ನು ಉದ್ದೇಶಿಸಿ “ಕಪಿಯೇ ನೀನು ಯಾರು?ಎಂದು ಕೇಳಿದಾಗ ಹನುಮಂತನು
ನಾನುರಾಮಭಕ್ತಎಂದುಹೇಳುತ್ತಾನೆ.ಹನುಮಂತದೇವರಿಗೆ ಎಲ್ಲಕ್ಕಿಂತ ಪ್ರಿಯವಾದದ್ದು ಶ್ರೀರಾಮ
ದೇವರ ಪಾದಕಮಲಗಳಲ್ಲಿ ನಿಶ್ಚಲವಾದ ಭಕುತಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಸ್ವಾಮಿ ನಿಷ್ಠೆಗೆ ಹೆಸರಾದವರು ಶ್ರೀಹನುಮಂತದೇವರು.ಇಂತಹ ಶ್ರೀಹನುಮಂತದೇವರು ಅವತರಿಸಿದ ದಿನವಾದ ಇಂದು ನಾವೂ ಭಕ್ತಿಯಿಂದ ನಮಿಸಿ ಶ್ರೀಹನುಮಂತದೇವರ ಅನುಗ್ರಹ ಪಡೆಯೋಣ.
Klive Special Article ಎಲ್ಲಿ ರಾಮನೊ..ಅಲ್ಲಿ ಹನುಮನು..! ಲೇ: ಎನ್.ಜಯಭೀಮ ಜೊಯಿಸ್.ಶಿವಮೊಗ್ಗ
Date: