shimoga district chamber of commerce and industry ಆದಾಯ ತೆರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಂತೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ನೇತೃತ್ವದಲ್ಲಿ ಪದಾಧಿಕಾರಿಗಳು ಆದಾಯ ತೆರಿಗೆ ಆಯುಕ್ತ ಶಾನವಾಜ್ ಉಲ್ಲ ರೆಹಮನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಆದಾಯ ತೆರಿಗೆ ಮೇಲ್ಮನವಿ ಸಲ್ಲಿಕೆಗೆ ಸಂಬಂಧಿಸಿ ಸಮಸ್ಯೆಗಳು, ಟಿಡಿಎಸ್ ಕಟಾವು, ಅಲ್ಪಾವಧಿ ಬಂಡವಾಳ ಲಾಭಕ್ಕೆ ಸಂಬಂಧಿಸಿ ಸೆಕ್ಷನ್ 87 ಎ ರಿಯಾಯಿತಿ ನೋಟಿಸ್, ಸಹಕಾರಿ ಸಂಘಗಳ 80 ಪಿ ವಿನಾಯಿತಿ, ಹಳೆಯ ಮೆಲ್ಮನವಿಗಳು ಇನ್ನೂ ಇತ್ಯರ್ಥವಾಗದಿರುವ ಬಗ್ಗೆ, ರೆಕ್ಟಿಫಿಕೇಶನ್ ಮನವಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡಿದರು. ಆದಾಯ ತೆರಿಗೆ ಇಲಾಖೆಯಿಂದ ನಡೆಸುತ್ತಿರುವ ಕರದಾತರ ಸಂಪರ್ಕ ಕಾರ್ಯಕ್ರಮವನ್ನು ಹೆಚ್ಚು ಮಾಡಬೇಕು ಎಂದರು.
ಅಡಿಕೆ ಮಂಡಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ ಮಾತನಾಡಿ ತೆರಿಗೆಯ ಸಮಸ್ಯೆಗಳ ಬಗ್ಗೆ ಆಯುಕ್ತರ ಗಮನ ಸೆಳೆದರು.
shimoga district chamber of commerce and industry ಆದಾಯ ತೆರಿಗೆ ಆಯುಕ್ತ ಶಾನವಾಜ್ ಉಲ್ ರೆಹಮನ್ ಮಾತನಾಡಿ, ಆದಾಯ ತೆರಿಗೆಗೆ ಸಂಬಂಧಿಸಿ ಕರದಾತರು ಅನುಸರಿಸಬೇಕಾದ ಶಾಸನಬದ್ಧ ವಿಧಿ ವಿಧಾನಗಳ ಬಗ್ಗೆ ವಿಸ್ಕೃತವಾಗಿ ವಿವರಣೆ ನೀಡಿದರು. ಎಲ್ಲಾ ಆದಾಯ ತೆರಿಗೆ ಕರದಾತರು, ಹೆಚ್ಚಿನ ಕೃಷಿ ಆದಾಯ ಹೊಂದಿರುವವರು ರಿಟರ್ನ್ಸ್ ಫೈಲ್ ಮಾಡುವುದರಿಂದ ಇಲಾಖೆಯಿಂದ ಆದಾಯ ಮೂಲದ ವಿವರಣೆ ಕೋರಿ ನೋಟಿಸ್ ಬರುವುದನ್ನು ತಪ್ಪಿಸಿಕೊಳ್ಳಬಹುದು. ಆದಾಯ ತೆರಿಗೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ ಎಂ ಸುರೇಶ್, ಖಜಾಂಚಿ ಆರ್ ಮನೋಹರ, ನಿರ್ದೇಶಕರಾದ ಪ್ರದೀಪ್ ವಿ ಎಲಿ, ಹಿರಿಯ ಆದಾಯ ತೆರಿಗೆ ಅಧಿಕಾರಿ ಎಚ್ ಸಿ ವಾಗೀಶ್, ಇತರೆ ಅಧಿಕಾರಿಗಳು ಸಿಬ್ಬಂದಿ, ಎಪಿಎಂಸಿ ಅಧ್ಯಕ್ಷ ಮಾದೇಶ್ ಹೆಗ್ಡೆ , ಸಹ ಕಾರ್ಯದರ್ಶಿ ಕುಡುವಲ್ಲಿ ಅನೂಪ್, ಸೂರ್ಯ ನಾರಾಯಣ್ ಹಾಗೂ ಅಡಿಕೆ ಮಂಡಿ ವರ್ತಕರು ಭಾಗವಹಿಸಿದ್ದರು.
shimoga district chamber of commerce and industry ಆದಾಯ ತೆರಿಗೆ ಸಂಬಂಧಿಸಿದ ಸಮಸ್ಯೆ ಪರಿಹಾಕ್ಕೆ ಪ್ರಯತ್ನ-ಶಾನವಾಜ್ ಉಲ್ ರಹಮಾನ್
Date: