Inner Wheel Club Shimoga ನಿಜವಾದ ಮಾನಸಿಕ ಶಾಂತಿಯನ್ನು ಪಡೆಯಲು ಮತ್ತು ನೆಮ್ಮದಿಯಿಂದ ಕೂಡಿದ ಉಪಯುಕ್ತವಾದ ಜೀವನವನ್ನು ನಡೆಸಲು ವಿಪಶ್ಯನ ಧ್ಯಾನ ತುಂಬಾ ಉಪಯುಕ್ತವಾಗಿದೆ ಎಂದು ವಿಪಶ್ಯನ ಮಧುರ ಸಾಹುಕಾರ್ ಅಭಿಮತ ವ್ಯಕ್ತಪಡಿಸಿದರು ಅವರು ರೋಟರಿ ಕ್ಲಬ್ ಶಿವಮೊಗ್ಗ ಮಿಟ್ಟೌನ್ ಹಾಗೂ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವಾ ಸಂಸ್ಥೆ ವತಿಯಿಂದ ಮಹಿಳೆಯರಿಗೆ ಹಾಗೂ ರೋಟರಿ ಸದಸ್ಯರಿಗೆ ಸಾರ್ವಜನಿಕರಿಗೆ ಆಯೋಜಿಸಲಾದ ವಿಪಶ್ಯನ ಧ್ಯಾನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು.
ವಿಪಶ್ಯನ ಎಂದರೆ ವಸ್ತು ಸ್ಥಿತಿಯನ್ನು ಅದು ಇರುವಂತೆಯೇ ನೋಡುವುದು ಎಂದರ್ಥ ಇದು ತನ್ನ ಒಳಗನ್ನೇ ತಾನು ಗಮನಿಸುತ್ತಾ ಮನಸ್ಸನ್ನು ನಿರ್ಮಲ ಮಾಡುವ ವೈಜ್ಞಾನಿಕ ವಿಧಾನವಾಗಿದೆ ಎಂದು ನೋಡಿದ ಅವರು ನಾವೆಲ್ಲರೂ ಆಗಿಂದಾಗೆ ತಳಮಳ ನಿರಾಸೆ ಅಸಹಾಯಕತೆಗಳಿಗೆ ಒಳಗಾಗುತ್ತೇವೆ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳಲಾರದೆ ಹೋಗುತ್ತೇವೆ ಹೀಗೆ ನಾವು ವ್ಯಾಕುಲತೆಗೆ ಒಳಗಾದಾಗ ನಮ್ಮ ಈ ದುಃಖವನ್ನು ಇದನ್ನು ಇತರರಿಗೂ ಹಂಚಲಾರಂಬಿಸುತ್ತೇವೆ. ಖಂಡಿತವಾಗಿಯೂ ಇದು ಸರಿಯಾಗಿ ಬದುಕುವ ರೀತಿ ಅಲ್ಲ ನಾವೆಲ್ಲ ಶಾಂತಿಯಿಂದ ಇರಲು ಹಂಬಲಿಸುತ್ತೇವೆ ಮತ್ತು ನಮ್ಮ ಸುತ್ತಮುತ್ತಲಿ ನವರೊಂದಿಗೂ ಸಾಮರಸ್ಯದಿಂದ ಇರಲು ಬಯಸುತ್ತೇವೆ
ವಿಪಶ್ಯನವೂ ಭಾರತದ ಅತ್ಯಂತ ಪ್ರಾಚೀನವಾದ ಸಾಧನ ವಿಧಿಯಾಗಿದೆ ಇದನ್ನು ಗೌತಮ ಬುದ್ಧನು ಪುನಹ ಸಂಶೋಧಿಸಿ ತೆಗೆದ ತೆಗೆದ ಹಲವು ಕಾರಣಗಳಿಂದ ಇದು ಭಾರತದಲ್ಲಿ ಲುಪ್ತ ವಾಯಿತು ಧ್ಯಾನವು ಮನುಷ್ಯನ ಖಿನ್ನತೆ ಬೇಸರ ಹಾಗೂ ದುಗುಡ ದುಮ್ಮಾನಗಳನ್ನ ದೂರಮಾಡುತ್ತದೆ ನಮ್ಮ ಅಂತರಂಗವನ್ನ ಶುದ್ದಿ ಮಾಡುವುದರೊಂದಿಗೆ ನಮ್ಮ ದೇಹದಲ್ಲಿ ಚೈತನ್ಯ ಹಾಗೂ ಕಾಂತಿಯನ್ನು ಮೂಡಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ತಪ್ಪದೇ ಧ್ಯಾನವನ್ನು ಮಾಡುವುದರ ಮುಖಾಂತರ ತಮ್ಮ ಜೀವನವನ್ನು ಸುಂದರವಾಗಿ ಇರಿಸಿಕೊಳ್ಳಬೇಕೆಂದು ಕರೆ ನೀಡಿದರು.
ಶಿಬಿರದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ
ಸುರೇಶ್ ದುರ್ಗಪ್ಪ ವಹಿಸಿ ಇಂದಿನ ದಿನ ವಾಹನಗಳಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಯೋಗ ಪ್ರಾಣಾಯಾಮ ಧ್ಯಾನ. ಬಹಳ ಪ್ರಮುಖವಾಗಿವೆ. ಆನ
ಪಾನ.ಸತಿ.ಧ್ಯಾನ. ಇವುಗಳ ಮುಖಾಂತರ ನಾವು ನೆಮ್ಮದಿಯನ್ನ ಕಂಡುಕೊಳ್ಳಬೇಕಾಗಿದೆ ಎಂದು ನುಡಿದರು.
Inner Wheel Club Shimoga ಇದೇ ಸಂದರ್ಭದಲ್ಲಿ ಇನ್ನರ್ವಿಲ್ ಕ್ಲಬ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ಮಾತನಾಡುತ್ತಾ ಕರ್ನಾಟಕದಾದ್ಯಂತ ಹಲವಾರು ಜಿಲ್ಲಾ ಕೇಂದ್ರ ಹಾಗೂ ತಾಲೂಕುಗಳಲ್ಲಿ ವಿಪಶ್ಯನದ ಕೇಂದ್ರಗಳು ಉಚಿತವಾಗಿ ಕಾರ್ಯನಿರ್ವಹಿಸುತ್ತಿದ್ದು ಇದನ್ನು ಸದುಪಯೋಗಪಡಿಸಿ
ಕೊಳ್ಳಬೇಕೆಂದು ಕರೆ ನೀಡಿದರು ವೇದಿಕೆಯಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್. ರೋಟರಿ ಮಿಡ್ ಟೌನ್ ಮಾಜಿ ಅಧ್ಯಕ್ಷರಾದ ವೀಣಾ ಸುರೇಶ್. ಪಿಯೂಷ್. ರೋಟರಿ ಮಿಡ್ ಟೌನ್ ಕಾರ್ಯದರ್ಶಿ ಪಹೀಮ್ ಹುಸೇನ್
ಶರವಣ ಹಾಗೂ ಇನ್ನರ್ ವೀಲ್ ಪದಾಧಿಕಾರಿಗಳು ಉಪಸ್ಥಿತರಿದ್ದರು