National Safety Day ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಆಚರಿಸಲಾಗುತ್ತದೆ. ಈ ದಿನಾಚರಣೆ ಬಳಿಕ ಬಳ್ಳಾರಿ-ವಿಜಯನಗರ-ಕೊಪ್ಪಳ ವಲಯ ಸುರಕ್ಷತಾ ಸಮಿತಿಯ ವತಿಯಿಂದ 2002ರಿಂದ ವಲಯ ಮಟ್ಟದ ಸುರಕ್ಷತಾ ದಿನಾಚರಣೆಯ ಆಚರಣೆ ನಡೆಯುತ್ತಿದೆ.
ಅದರಂತೆ, ಈ ವರ್ಷದ ಕಾರ್ಯಕ್ರಮವನ್ನು 04-04-2025 ರಂದು ಬಳ್ಳಾರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜು ಆವರಣದಲ್ಲಿ ಆಯೋಜಿಸಲಾಯಿತು.
ಬಿ.ಕೆ.ರೈಸ್ ಹಿನ್ನೆಲೆ
2000ರಿಂದ 2002ರ ನಡುವೆ ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ಗುಲ್ಬರ್ಗಾ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳ ಅಡಿಯಲ್ಲಿ ವಿದ್ಯುತ್, ಉಕ್ಕು, ಕಬ್ಬಿಣ, ಸಕ್ಕರೆ, ಸಿಮೆಂಟ್ ಮೊದಲಾದ ವಲಯಗಳಲ್ಲಿ ಸಣ್ಣ-ಮಧ್ಯಮ ಕೈಗಾರಿಕೆಗಳು ಪ್ರಾರಂಭಗೊಂಡವು. ಈ ಉದ್ಯಮಗಳಲ್ಲಿ:
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್
ಜಿಂದಾಲ್ ಸ್ಟೀಲ್ ಲಿಮಿಟೆಡ್
ಆರ್.ಟಿ.ಪಿ.ಎಸ್
ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್
ಎಸಿ ಸಿಮೆಂಟ್
ಎಂಎಸ್ಪಿಎಲ್
ಬಿಎಮ್ಮ್ ಇಸ್ಪಾತ್
ಬಿಟಿಪಿಎಸ್
ಎಸ್ಎಲ್ಆರ್
National Safety Day ಹೀಗೆ ಅನೇಕ ಸಂಸ್ಥೆಗಳು ಸ್ಥಾಪನೆಯಾಗಿ ಉತ್ಪಾದನೆಯನ್ನು ಗುರಿಯಾಗಿಸಿಕೊಂಡು ಕಾರ್ಮಿಕರ ಸುರಕ್ಷತೆಯ ಕಡೆ ಹೆಚ್ಚಿನ ಗಮನವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿದ್ದವು.
ಅಂದು ಗುಲ್ಬರ್ಗಾ ಪ್ರದೇಶದ ಅಧಿಕಾರಿಗಳು ಬಂದು ಈ ಭಾಗಕ್ಕೆ ಭೇಟಿ ನೀಡುವುದು ಕಷ್ಟವಾಗುತ್ತಿತ್ತು. ಈ ಸಮಸ್ಯೆಗಳಿಗೆ ಪರಿಹಾರವಾಗಿ, 2002 ರಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಶ್ರೀ ಡಿಸಿ ಜಗದೀಶ್, ಶ್ರೀ ನವನೀತ್ ಮೋಹನ್, ಹಾಗೂ ಮೇಲ್ವಿಚಾರಕಿ ಶ್ರೀಮತಿ ಭಾರತಿ ಎಂ ಅವರ ನೇತೃತ್ವದಲ್ಲಿ ಗುಲ್ಬರ್ಗಾ ರೀಜನಲ್ ಸೇಫ್ಟಿ ಕಮಿಟಿ ಪ್ರಾರಂಭವಾಯಿತು. ಈ ಸಮಿತಿಯ ಮುಖ್ಯ ಉದ್ದೇಶಗಳು:
- ಅಪಘಾತಗಳ ಪ್ರಮಾಣ ಕಡಿಮೆ ಮಾಡುವ ಮಾಹಿತಿ ನೀಡುವುದು
- ಸುರಕ್ಷತಾ ಅಧಿಕಾರಿಗಳನ್ನು ನೇಮಕ ಮಾಡುವುದು
- ಸುರಕ್ಷತಾ ತರಬೇತಿಗಳನ್ನು ನೀಡುವುದು
- ಸುರಕ್ಷತಾ ಸಾಧನಗಳನ್ನು ಒದಗಿಸುವುದು
- ಸುರಕ್ಷತಾ ಆಡಿಟ್ ನಡೆಸುವುದು
- ಸ್ಪರ್ಧೆಗಳ ಮೂಲಕ ಜಾಗೃತಿ ಮೂಡಿಸುವುದು
ನಂತರ, ಕಾರ್ಯವ್ಯಾಪ್ತಿ ವಿಸ್ತರಿಸಿ ಸಮಿತಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು
- ಗುಲ್ಬರ್ಗಾ ರೀಜನಲ್ ಸೇಫ್ಟಿ ಕಮಿಟಿ (GRSC)
- ಬಳ್ಳಾರಿ-ಕೊಪ್ಪಳ ವಲಯ ಸುರಕ್ಷತಾ ಸಮಿತಿ (BKRAISE)
ವಿಜಯನಗರ ಜಿಲ್ಲೆಯ ಸೇರ್ಪಡೆ ಹಾಗೂ ಬದಲಾವಣೆಗಳನ್ನು ಪರಿಗಣಿಸಿ ಬಿಕೆರೈಸ್ ಸಮಿತಿಯನ್ನು ಪುನರ್ ಸಂಘಟಿಸಲಾಯಿತು.
ರಾಷ್ಟೀಯ ಸುರಕ್ಷತಾ ದಿನಾಚರಣೆ- 2024-25
ಈ ವರ್ಷ ಮೆ. ಮಿನರಾ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಆತಿಥ್ಯದಲ್ಲಿ 2024-25ನೇ ಸಾಲಿನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಸ್ಥಾಪನೆಯ ನಂತರದಿಂದ ಇಂದಿನವರೆಗೆ ಮಾರ್ಗದರ್ಶನ ನೀಡಿದ ಶ್ರೀ ಶ್ರೀನಿವಾಸ್, ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಇವರ ಸೇವೆಗಳಿಗೆ ಕೃತಜ್ಞತೆ ವ್ಯಕ್ತಪಡಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮ
2025 ಏಪ್ರಿಲ್ 4 ರಂದು ಬೆಳಿಗ್ಗೆ ಬಳ್ಳಾರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಆವರಣದಲ್ಲಿ 54ನೇ ಸುರಕ್ಷತಾ ದಿನಾಚರಣೆಯ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದ ಆರಂಭ ಸುರಕ್ಷತಾ ದ್ವಜಾರೋಹಣ, ಸುರಕ್ಷತಾ ಸಾಧನ ಸಾಮಗ್ರಿಗಳ ಪ್ರದರ್ಶನ ಸ್ಟಾಲ್ ಉದ್ಘಾಟನೆ, ಹಾಗೂ ಸುರಕ್ಷತಾ ಜ್ಯೋತಿ ಬೆಳಗಿಸುವುದರ ಮೂಲಕ ಪ್ರಾರಂಭವಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದರು
ಶ್ರೀ ಹನುಮಂತರೆಡ್ಡಿ, ಡೈರೆಕ್ಟರ್, ಮಿನರಾ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್
ಶ್ರೀ ಡಿ.ಸಿ. ಜಗದೀಶ್, ನಿವೃತ್ತ ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ
ಶ್ರೀ ಕೆ.ಜೆ. ನಂಜಪ್ಪ, ಅಡಿಷನಲ್ ಡೈರೆಕ್ಟರ್ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ
ಶ್ರೀ ರವೀಂದ್ರನಾಥ್ ರಾಥೋಡ್, ಜಂಟಿ ನಿರ್ದೇಶಕರು, ಹುಬ್ಬಳ್ಳಿ ವಲಯ (ಬಿಕೆರೈಸ್ ಅಧ್ಯಕ್ಷರು)
ಶ್ರೀ ವರುಣ್, ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್
ಶ್ರೀ ವಿಜಯಕುಮಾರ್, ಅಸಿಸ್ಟೆಂಟ್ ಡೈರೆಕ್ಟರ್
•ಸುರಕ್ಷತಾ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ*
ಶ್ರೀ ಡಿ.ಸಿ. ಜಗದೀಶ್, ನಿವೃತ್ತ ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ,
ಶ್ರೀ ನಾಗರಾಜ್ ಸಿ ಇ ಓ – ಐಎಲ್ ಸಿ ಐರನ್ ಅಂಡ್ ಸ್ಟೀಲ್ಸ್ ಕೊಪ್ಪಳ ಹಾಗೂ
ಶ್ರೀ ಕೆ.ಜೆ. ನಂಜಪ್ಪ, ಅಡಿಷನಲ್ ಡೈರೆಕ್ಟರ್ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಇವರುಗಳಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು.
ಶ್ರೀ ಸಾದಿಕ್ ಬಾಷ ಜೆ ಎಸ್ ಡಬ್ಲೂ ಕಾರ್ಖಾನೆಯ ಸುರಕ್ಷತಾ ವಿಭಾಗದ ಉದ್ಯೋಗಿಗಳಿಂದ ಸುರಕ್ಷತಾ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಸಮಾರೋಪ ಸಮಾರಂಭ
ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಿತು. ಆರಂಭದಲ್ಲಿ ಸುರಕ್ಷತಾ ನಾಟಕ ಪ್ರದರ್ಶನವಾಯಿತು. ನಂತರ ಸಮಾರೋಪ ಸಮಾರಂಭ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮ ಪ್ರಾರಂಭವಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಆರ್.ವಿ. ಗುಮಾಸ್ತೆ, ವ್ಯವಸ್ಥಾಪಕ ನಿರ್ದೇಶಕರು, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಶ್ರೀ ಹನುಮಂತರೆಡ್ಡಿ, ಡೈರೆಕ್ಟರ್, ಮಿನರಾ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್, ಶ್ರೀ ಡಿ.ಸಿ. ಜಗದೀಶ್, ನಿವೃತ್ತ ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಶ್ರೀ ಕೆ.ಜೆ. ನಂಜಪ್ಪ, ಅಡಿಷನಲ್ ಡೈರೆಕ್ಟರ್ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಮತ್ತು ಶ್ರೀ ರವೀಂದ್ರನಾಥ್ ರಾಥೋಡ್, ಜಂಟಿ ನಿರ್ದೇಶಕರು, ಹುಬ್ಬಳ್ಳಿ ವಲಯ (ಬಿಕೆರೈಸ್ ಅಧ್ಯಕ್ಷರು) ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ನೇರವೇರಿತು. ಸ್ವಾಗತ, ಪ್ರಾಸ್ತಾವಿಕ ಭಾಷಣ ಮತ್ತು ಅತಿಥಿಗಳು ಮತ್ತು ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ಮುಂದಿನ ಬಿಕೆರೈಸ್ ಯೋಜನೆಗಳು, ಸರ್ಕಾರದ ನವೀಕರಣಗಳು ಹಾಗೂ ಸುರಕ್ಷತಾ ಮಾರ್ಗದರ್ಶನಗಳ ಬಗ್ಗೆ ಪ್ರಸ್ತಾಪಿಸಿದರು.
ಈ ಸಂಧ
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಕೊಪ್ಪಳ ಇವರಿಂದ ಅಭಿನಂದನೆ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಕೊಪ್ಪಳ – ವಿಶೇಷ ಪ್ರಶಸ್ತಿಗಳು ಲಭಿಸಿದ್ದು ಕಾರ್ಖಾನೆಯ ಶ್ರೀ ಆರ್.ವಿ. ಗುಮಾಸ್ತೆ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯ ನಿರ್ವಾಹಕ ಉಪಾಧ್ಯಕ್ಷರಾದ ಡಾ.ಪಿ.ನಾರಾಯಣ್ ಇವರು ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಗೆ ಅಭಿನಂದಿಸಿ ಧನ್ಯವಾದಗಳನ್ನು ತಿಳಿಸಿದರು.
ಡಾ. ಪಿ. ನಾರಾಯಣ – ಮಾನವ ಸಂಪನ್ಮೂಲ ವಿಭಾಗದಲ್ಲಿ ಸಾಧನೆ
ಶ್ರೀ ಎಂ.ಎಂ. ನಾಡಿಗೇರ್ – ಸುರಕ್ಷತಾ ಸೇವಾ ಪ್ರಶಸ್ತಿ
ಡಾ. ಪ್ರವೀಣ್ ಕುಮಾರ್ – ಉತ್ತಮ ವೈದ್ಯಾಧಿಕಾರಿ ಪ್ರಶಸ್ತಿ
ಶ್ರೀ ಎಂ. ಉಮೇಶ್ – ಉತ್ತಮ ಕಾರ್ಮಿಕ ಕಲ್ಯಾಣ ಸೇವೆ.
ಕಾರ್ಯಕ್ರಮದ ಯಶಸ್ವಿ ಆಯೋಜನೆಯು ಎಲ್ಲಾ ಸಂಸ್ಥೆಗಳ ಸಹಕಾರದಿಂದ ಸಾಧ್ಯವಾಯಿತು.
ಮೆ. ಮಿನರಾ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಬಿಕೆರೈಸ್ ಸಮಿತಿಯ ಪರವಾಗಿ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಲಾಯಿತು.
ವರದಿ:
ಮುರುಳಿಧರ್ ನಾಡಿಗೇರ್
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್