Ugadi Festival “ ಯುಗಾದಿ “ಹಬ್ಬ ಬಂತೆಂದರೆ ಹೊಸಸಂವತ್ಸರ ಪ್ರಾರಂಭವಾದಂತೆ.ಹೊಸ ಸಂವತ್ಸರದ ಪ್ರಾರಂಭವನ್ನೇ “ಯುಗಾದಿ”ಹಬ್ಬವನ್ನಾಗಿ ಆಚರಿಸುವುದು ಪದ್ಧತಿಯಾಗಿದೆ.ವಸಂತ ಋತು,ಚೈತ್ರಮಾಸ,ಶುಕ್ಲಪಕ್ಷದ ಪಾಡ್ಯ….ಎಲ್ಲವೂ ಮೊದಲಾಗಿರುತ್ತೆ.ಋತುಗಳಲ್ಲಿ ವಸಂತ ಋತು ಮೊದಲನೇ ಋತು,ಮಾಸಗಳಲ್ಲಿ ಚೈತ್ರಮಾಸ ಮೊದಲನೇ ಮಾಸವಾಗಿರುತ್ತೆ.ಪಕ್ಷಗಳಲ್ಲಿ ಶುಕ್ಲಪಕ್ಷ ಮೊದಲನೆಯಪಕ್ಷವಾಗಿದೆ.ಪಾಡ್ಯ(ಪ್ರತಿಪದ)ತಿಥಿಗಳಲ್ಲಿ ಮೊದಲ ತಿಥಿಯಾಗಿದೆ.ಯುಗಾದಿಹಬ್ಬ ಸಂವತ್ಸರದ ಪ್ರಾರಂಭವೂ ಹೌದು ಮತ್ತು ಸಂವತ್ಸರದ ಮೊದಲನೆಯ ಹಬ್ಬವಾಗಿದೆ.
“ಚೈತ್ರ”ಎಂಬ ಪದ ಕೇಳಿದ ಕೂಡಲೇ ಸಮೃದ್ಧ ಹಸಿರು,ಚಿಗುರು,ಕೋಗಿಲೆಯ ಕುಹೂಕುಹೂ ಇಂಪಾದ ಗಾನ ,ಮಾವು, ಬೇವು ಮಲ್ಲಿಗೆಯ ಘಮ ಘಮ…ಅಬ್ಬಾ !ನಿಸರ್ಗ ಸೌಂದರ್ಯದ ಗುಟ್ಟೇನಮ್ಮೆದುರುಮೈದಳೆದುನಿಲ್ಲುತ್ತದೆ.ಮನದಂಗಳದಲ್ಲಿಹೊಸತರಂಗಗಳು ಪಲ್ಲವಿ-ಪಂಕ್ತಿಗಳಾಗಿ ಹಾದು ಹೋಗುತ್ತವೆ.ಯುಗಾದಿ ಹಿಂದೂಗಳಿಗೆ ಹೊಸವರ್ಷದ ಆರಂಭದ ಮೊದಲನೆಯ ದಿನ. ಹೊಸ ವರ್ಷವನ್ನು ಹೊಸ ಸಂವತ್ಸರವೆಂದು ಕರೆಯುತ್ತೇವೆ.
ಮತ್ತು ಹೊಸ ಸಂವತ್ಸರದ ಪ್ರಾರಂಭದ ದಿನ ,ಹೊಸ ಸಂಕಲ್ಪಗಳನ್ನು ಮಾಡಿ ಮುನ್ನಡಿಯಿಡುವ ದಿನವೂ ಹೌದು.ಹಿಂದಿನ ವರ್ಷದ ಸಾಧನೆಯನ್ನು ಅವಲೋಕಿಸಿಈ ಸಂವತ್ಸರದಲ್ಲಿ ನಮ್ಮ ಪಾಲಿಗೆ ಬೇಕಾದ ನೀತಿ-ನಿಯಮಗಳನ್ನು ಹಾಕಿಕೊಳ್ಳುವ ಶುಭಗಳಿಗೆ.ವೇದಮಂತ್ರದಲ್ಲಿವರ್ಷವನ್ನುರಥಕ್ಕೂ ,ಆಯನಗಳನ್ನು(ಉತ್ತರಾಯಣ,ದಕ್ಷಿಣಾಯನ)ಅದರಚಕ್ರಗಳಿಗೂಹೋಲಿಕೆಮಾಡಿದ್ದಾರೆ.ಆದ್ದರಿಂದವರ್ಷವನ್ನುಯುಗಎಂದೂ,ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.
Ugadi Festival ಯುಗಾದಿಯು ಚಾಂದ್ರಮಾನ ಪದ್ಧತಿಯ ಹೊಸ
ವರ್ಷದ ಪ್ರಾರಂಭದ ದಿನ.ಯುಗಾದಿ ಹಬ್ಬಕ್ಕೆ ಮತ್ತು ದೀಪಾವಳಿ ಹಬ್ಬಕ್ಕೆ ಒಂದು ನಾಣ್ಣುಡಿ ಇದೆ..”ಉಂಡದ್ದೇ ಉಗಾದಿ,ಮಿಂದದ್ದೇ ದೀಪಾವಳಿ”ಎಂದು.ಯುಗಾದಿಯಲ್ಲಿ ಊಟದ ವೈವಿಧ್ಯತೆಯೇ ಒಂದು ಸೊಗಸು.
ಗಣೇಶಚತುರ್ಥಿಯಲ್ಲಿಚಂದ್ರದರ್ಶನವನ್ನೇನಾದರೂ ಮಾಡಿದರೆ ಮಿಥ್ಯಾಪವಾದ ಬರುತ್ತದೆ ಎಂಬುದುಪುರಾಣದಕಥೆಗಳಿಂದ ಪ್ರತಿಪಾದ್ಯವಾಗಿದೆ.ಇದು ಗಣಪತಿಯು ಚಂದ್ರನಿಗೆ ಕೊಟ್ಟ ಶಾಪದ ಪರಿಣಾಮದಿಂದ ಆಗಿದೆ.ಯುಗಾದಿ ಹಬ್ಬದ ಬಿದಿಗೆ ಯಂದು ಚಂದ್ರದರ್ಶನ ಮಾಡುವ ಪರಿಪಾಠವುಂಟು.ಚಂದ್ರದರ್ಶನವನ್ನು ಮಾಡಿ ಎಲ್ಲರಿಗೂ ಒಳ್ಳೆಯದನ್ನು ಮಾಡುವಂತೆ ಚಂದ್ರನನ್ನು ಪ್ರಾರ್ಥಿಸುವ ಸಂಪ್ರದಾಯವುಂಟು.
ಕ್ರೋಧಿನಾಮಸಂವತ್ಸರವು ಮುಗಿದು ಹೊಸದಾದ “ವಿಶ್ವಾವಸು”ನಾಮಸಂವತ್ಸರಬರುತ್ತಿದೆ.ಸಂವತ್ಸರದಹೆಸರಿನಲ್ಲಿಇರುವಂತೆಯೇಎಲ್ಲರಮನದಲ್ಲಿಯೂ ವಿಶ್ವಾಸವನ್ನುಹೆಚ್ಚುಮಾಡುತ್ತದೆಎಂಬನಂಬಿಕೆಯಿದೆ
ಯುಗಾದಿ ಹಬ್ಬವನ್ನು ಬೇವುಬೆಲ್ಲದಹಬ್ಬವೆಂತಲೂ ಕರೆಯುತ್ತೇವೆ.ಬೇವು ಬೆಲ್ಲ ಜೀವನದಲ್ಲಿ ಬರುವ ಕಷ್ಟಸುಖಗಳಸಂಕೇತವಾಗಿದೆ.ಯುಗಾದಿಎಂದಾ
ಕ್ಷಣಬಾಲ್ಯದಲ್ಲಿ ನಾವುಸೇವಿಸುತ್ತಿದ್ದಬೇವು-ಬೆಲ್ಲದ ನೆನಪಾಗುತ್ತದೆ.ಆಗನಮ್ಮಹಿರಿಯರು ದೇವರಪೂಜೆ ಮಾಡಿದ ಮೇಲೆ ಬೇವುಬೆಲ್ಲದ ಮಿಶ್ರಣವನ್ನು ಕೊಡುತ್ತಿದ್ದರು. ಬೆಲ್ಲದಸಿಹಿಬೇಕೆನಿಸುತ್ತಿತ್ತು.ಬೇವಿನ ಕಹಿ ನಿಜವಾಗಿಯೂ ಬೇಡವೆನಿಸುತ್ತಿತ್ತು.ಬಾಲ್ಯದಲ್ಲಿ ಬೇವುಬೆಲ್ಲದಸಂಕೇತಏನೆಂಬುದುಗೊತ್ತಿರಲಿಲ್ಲ.ಬೇವು ಬೆಲ್ಲವನ್ನು ಸ್ವೀಕರಿಸುವಸಂಕೇತವೆಂದರೆಜೀವನ
ದಲ್ಲಿ ಬರುವ ಕಷ್ಟಸುಖಗಳನ್ನು ಸಮರಸವಾಗಿ ಕಾಣಬೇಕುಎಂದುಸೂಚಿಸುತ್ತದೆ.ಬದುಕುಬೇವು
ಬೆಲ್ಲದಂತೆಸುಖವೂಇರುತ್ತದೆ,ದು:ಖವೂಇರುತ್ತದೆ.ಸುಖ ಬಂದಾಗ ಹಿಗ್ಗದೆ,ದು:ಖ ಬಂದಾಗ ಕುಗ್ಗದೆ ಬಾಳನ್ನು ನಡೆಸಬೇಕುಎಂಬ ಸಂದೇಶವನ್ನು ಬೇವುಬೆಲ್ಲ ಕೊಡುತ್ತದೆ..ಈ ಭಗವಂತನು ಎಲ್ಲೆಡೆ ಸುಖ,ಶಾಂತಿನೆಮ್ಮದಿಗಳನ್ನುನೆಲೆಸುವಂತೆಮಾಡಲಿ.ನಮ್ಮೊಳಗಿನದುಷ್ಟಶಕ್ತಿಗಳನ್ನುನಿಯಂತ್ರಿಸಿ,ನಾಶಮಾಡಿಜ್ಞಾನದಬೆಳಕನ್ನುಎಲ್ಲರಿಗೂಕರುಣಿಸುವಂತೆಪ್ರಾರ್ಥಿಸೋಣ.
ಕ್ರೋಧಿನಾಮಸಂವತ್ಸರಕೆಶುಭವಿದಾಯಹೇಳೋಣಮತ್ತು ನೂತನ ಸಂವತ್ಸರ ವಿಶ್ವಾವಸು ನಾಮ
ಸಂವತ್ಸರವನ್ನುಸಂತಸದಿಂದಸ್ವಾಗತಿಸೋಣ.
ನೂತನ ಸಂವತ್ಸರ ಎಲ್ಲರಿಗೂ ಸನ್ಮಂಗಳವನ್ನು ತರಲಿ ಎಂದು ಪ್ರಾರ್ಥಿಸೋಣ.
ಎನ್.ಜಯಭೀಮ್ ಜೊಯ್ಸ್