Sahyadri Lalitha Kala Academy ಇಂದಿನ ದಿನಗಳಲ್ಲಿ ಲಲಿತ ಕಲೆಗಳಿಗೆ ಮತ್ತು ಸಾಹಿತ್ಯಕ್ಕೆ ತನ್ನದೇ ಆದ ಮಹತ್ವವಿದೆ. ಇದು ಕೇವಲ ಕಳೆಯಲು ಇರುವ ಹವ್ಯಾಸವಲ್ಲ. ಬದಲಾಗಿ ವ್ಯಕ್ತಿಗಳಲ್ಲಿ ಇರುವ ಪ್ರತಿಭೆಯನ್ನು ಹೊರ ಹಾಕಲು ಇರುವ ವೇದಿಕೆಯಾಗಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲ ಕವಿಗಳೂ ಪ್ರತಿಭಾವಂತರಾಗಿದ್ದು ಹೆಸರು ಗಳಿಸಿದ್ದಾರೆ.
ಸಹ್ಯಾದ್ರಿ ಲಲಿತಕಲಾ ಅಕಾಡೆಮಿಯ ಮೊದಲ ಕಾರ್ಯಕ್ರಮಕ್ಕೆ ಆಗಮಿಸಿದ ತಮ್ಮೆಲ್ಲರಿಗೂ ಉತ್ತಮ ಭವಿಷ್ಯ ಖಂಡಿತಾ ಇದೆ ಎಂದು ರಂಗೋಲಿ ಕಲಾವಿದೆ ರಮ್ಯಾ ತಿಳಿಸಿದ್ದಾರೆ.
ಅವರು ಕೀರ್ತಿನಗರದ ವನಿತಾ ವಿದ್ಯಾಲಯದಲ್ಲಿ ಸಹ್ಯಾದ್ರಿ ಲಲಿತಕಲಾ ಅಕಾಡೆಮಿಯ ವತಿಯಿಂದ ನಡೆದ ಯುಗಾದಿ ಕವಿಗೋಷ್ಠಿ ಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕವಿಗಳೂ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರೂ ಆದ ಪ್ರೊ.ಸತ್ಯನಾರಾಯಣ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅವರು ಸಹ್ಯಾದ್ರಿ ಲಲಿತಕಲಾ ಅಕಾಡೆಮಿಯ ವತಿಯಿಂದ ನಡೆದ ಕವಿಗೋಷ್ಠಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
Sahyadri Lalitha Kala Academy ಅಧ್ಯಕ್ಷತೆ ವಹಿಸಿದ್ದ ತಾರಾ ಪ್ರಸಾದ್ ಮಾತನಾಡಿ ಹೊಸ ಕಾರ್ಯಕಾರಿ ಸಮಿತಿ ರಚನೆಯಾದ ಮೇಲೆ ನಡೆದ ಮೊದಲ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಮುಂದೆಯೂ ಸಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತಾವೆಲ್ಲರೂ ಭಾಗವಹಿಸಿ ಹಾಗೂ ಸದಸ್ಯರಾಗಿ ಎಂದು ಕರೆನೀಡಿದರು.
ಕವಿಗೋಷ್ಠಿಯಲ್ಲಿ ಒಟ್ಟು 20 ಕವಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಲಲಿತಮ್ಮ ಮತ್ತು ಶ್ರೀವಳ್ಳಿಯವರು ಪಾಲ್ಗೊಂಡಿದ್ದರು.
ಪ್ರಾರಂಭದಲ್ಲಿ ಲಲಿತಮ್ಮ ಅವರಿಂದ ಪ್ರಾರ್ಥನೆ, ಎಂ.ಎನ್.ಸುಂದರ ರಾಜ್ ರಿಂದ ಸ್ವಾಗತ ನಡೆಯಿತು.
ಹರಿಪ್ರಸಾದ್ ಕಾರ್ಯಕ್ರಮನಡೆಸಿ ಕೊಟ್ಟರು.
ಕವಿತಾ ವಾಚನದಲ್ಲಿ ಬಹುಮಾನ ಗಳಿಸಿದವರು.ಮೊದಲ ಬಹುಮಾನ. ಶ್ರೀಮತಿ ಪುಟ್ಟಮ್ಮ
ಎರಡನೇ ಬಹುಮಾನ ಪ್ರೊ. ಸತ್ಯನಾರಾಯಣ
ಮೂರನೇ ಬಹುಮಾನ ಜೆ.ಎನ್. ಬಸವರಾಜ್
ಸಮಾಧಾನಕರ ಬಹುಮಾನ ಗಾಯತ್ರಿ ರಮೇಶ್, ಸತೀಶ್ ಹು.ಮ.ಹರಿಪ್ರಸಾದ್ ಇದ್ದರು