Tuesday, February 3, 2026
Tuesday, February 3, 2026

ಚೈತ್ರದ ಮೊದಲ ಚಿತ್ತಾರ…

Date:

– ಶೋಭಾ ಸತೀಶ್

ಚೈತ್ರ ಮಾಸದ ಮೊದಲ ದಿನವು
ಅದುವೇ ನವ ಸಂವತ್ಸರದ ಆಗಮನವು
ಎಲ್ಲೆಡೆ ಬಣ್ಣ ಬಣ್ಣದ ಚಿತ್ತಾರವು
ಬಂದಿದೆ ನೋಡಿ ಯುಗಾದಿ ಸಂಭ್ರಮವು

ಹಬ್ಬದ ಸಾಂಪ್ರದಾಯಕ ಆಚರಣೆಯು
ಹಿರಿಯರಿಂದ ಬಂದಂತಹ ಬಳುವಳಿಯು
ಎಲ್ಲರಲ್ಲಿಯೂ ಮೂಡುವ ಚೈತನ್ಯತೆಯು
ಹಸಿರಾಗಿ ಕಂಗೊಳಿಸುವ ಪ್ರಕೃತಿ ಮಾತೆಯು

ಹೊಸ ವರುಷವೂ ಬರಲಿದೆ
ಹೊಂಗನಸುಗಳ ತರಲಿದೆ
ಮದಮತ್ಸರಗಳ ತೊಲಗಿಸಲಿದೆ
ಸಿಹಿ ಕಹಿಗಳ ಸಮ್ಮಿಲನ ಗೊಳಿಸಲಿದೆ

ಮಾವು ಬೇವುಗಳ ತೋರಣ ಕಟ್ಟಿ
ಬೇವು ಬೆಲ್ಲಗಳ ಮಿಶ್ರಣ ಕುಟ್ಟಿ
ಸಿಹಿ ಊರಣದ ಹೋಳಿಗೆ ತಟ್ಟಿ
ನಮಸ್ಕರಿಸು ಹಿರಿಯರ ಪಾದಮಟ್ಟಿ

ಜೀವ ಭಾವಗಳ ರಿಂಗಣವಾಗಿ
ಸಂಸ್ಕೃತಿಯ ಸಂಕೇತವಾಗಿ
ಕಲೆ ಇತಿಹಾಸದ ಪ್ರತೀಕವಾಗಿ
ಸಂತಸ ಮೂಡಿಸಿದೆ ನವ ಯುಗವಾಗಿ

ಶೋಭಾ ಸತೀಶ್ ಶಿವಮೊಗ್ಗ
ಸ.ಹಿ.ಪ್ರಾ ಶಾಲೆ ಚಿಲಕಾದ್ರಿಹಳ್ಳಿ
ಶಿವಮೊಗ್ಗ
ದೂ. ಸಂಖ್ಯೆ 8762603511

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...