JCI Shivamogga ಜೆಸಿಐ ಸಮೃದ್ಧಿ ಘಟಕದ ಅಧ್ಯಕ್ಷರಾದ ಜೆಸಿ ನರಸಿಂಹ ಮೂರ್ತಿ ಮತ್ತು ಎಲ್ಲಾ ಪದಾಧಿಕಾರಿಗಳಿಂದ ಅದ್ದೂರಿಯಾಗಿ ಯುಗಾದಿ ಸಂಭ್ರಮ ಹಾಗೂ ಜೆಸಿಐ ಸೀನಿಯರ್ ವಿನಿತ್.ಆರ್ ಜೆಡ್ ವಿಪಿ ರವರಿಂದ ಜೆಸಿಐ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಎಲ್ ಡಿ ಎಂ ಟಿ ವಿಶೇಷ ತರಬೇತಿ ನೀಡಲಾಯಿತು.
ಈ ವೇಳೆ ಮಾತನಾಡಿದ ಜೆಸಿಐ ಸಮೃದ್ಧಿ ಘಟಕದ ಅಧ್ಯಕ್ಷರಾದ ಜೆಸಿ ನರಸಿಂಹ ಮೂರ್ತಿ, ಯುಗಾದಿ ಹಬ್ಬದ ದಿನ ಬೇವು ಬೆಲ್ಲ ಸೇವಿಸಿ ಇತರರಿಗೆ ಹಂಚುವ ವಿಶೇಷ ಸಂಪ್ರದಾಯವಿದೆ. ಬೇವು ಬೆಲ್ಲವು ಜೀವನದಲ್ಲಿ ಎದುರಾಗುವ ಸುಖ ದುಃಖವನ್ನು, ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು ಎಂಬ ಅರ್ಥದಲ್ಲಿ ಸಿಹಿ ಕಹಿ ಎರಡನ್ನು ಈ ಹಬ್ಬದಲ್ಲಿ ಸೇವಿಸಲಾಗುತ್ತದೆ ಎಂದರು.
ಜೀವನದಲ್ಲಿ ಕಷ್ಟ ಬಂದಾಗ ಕುಗ್ಗದೇ, ಸುಖ ಬಂದಾಗ ಹಿಗ್ಗದೇ ಎಲ್ಲದನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂಬುದನ್ನು ಯುಗಾದಿ ಹಬ್ಬದ ಆಚರಣೆ ಮೂಲಕ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.
ಈ ದಿನದ ವಿಶೇಷ ಕಾರ್ಯಕ್ರಮದಲ್ಲಿ ಎಲ್ಲರೂ ಅವರವರ ಮನೆಯಿಂದ ವಿಶೇಷವಾದ ಅನೇಕ ಬಗೆಯ ಸಿಹಿ ಅಡುಗೆಗಳನ್ನು ಮಾಡಿಕೊಂಡು ತಂದಿದ್ದರು.
ಕಾರ್ಯಕ್ರಮದಲ್ಲಿ ಜೆಸಿಐ ಸೀನಿಯರ್ ಗೌರೀಶ್ ಭಾರ್ಗವ ಜೆಡ್ ಪಿ ಇವರು ಆಗಮಿಸಿದ್ದರು. ಕಾರ್ಯದರ್ಶಿ ಜೆಸಿ ಗಾಯತ್ರಿ ಯಲ್ಲಪ್ಪ ಗೌಡ, ಜೆಸಿ ನರಸಮ್ಮ, ಜೆಸಿ ಅನಿತಾ ಸೀರಿಯಲ್, ಜೆಸಿ ಸುಮಾ ಕಳಸಾಪುರ, ಜೆಸಿ ಶಶಿಕಲಾ, ಜೆಸಿ ಪಾರ್ವತಿ, ಜೆಸಿ ಅನ್ನಪೂರ್ಣ, ಜೆಸಿ ಪುಷ್ಪಲತಾ, ಜೆಸಿ ಸುಮಾ, ಜೆಸಿ ಕವಿತಾ, ಜೆಸಿ ಪ್ರೇಮ್ ಗೌಡ, ಜೆಸಿ ಗಗನ್, ಜೆಸಿ ಲಲಿತ ಪ್ರಕಾಶ್, ಜೆಸಿ ಲೋಲ, ಜೆಸಿ ಪುಷ್ಪ, ಜೆಸಿ ಮಾಲಾ, ಜೆಸಿ ಮಂಜುಳಾ ಮತ್ತು ಸ್ನೇಹಿತೆಯರು ಹಾಗೂ ಕುಟುಂಬದವರು ಹಾಜರಿದ್ದರು.