Monday, December 15, 2025
Monday, December 15, 2025

JCI Shivamogga ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು-ಜೇಸಿ ನರಸಿಂಹ‌ಮೂರ್ತಿ

Date:

JCI Shivamogga ಜೆಸಿಐ ಸಮೃದ್ಧಿ ಘಟಕದ ಅಧ್ಯಕ್ಷರಾದ ಜೆಸಿ ನರಸಿಂಹ ಮೂರ್ತಿ ಮತ್ತು ಎಲ್ಲಾ ಪದಾಧಿಕಾರಿಗಳಿಂದ ಅದ್ದೂರಿಯಾಗಿ ಯುಗಾದಿ ಸಂಭ್ರಮ ಹಾಗೂ ಜೆಸಿಐ ಸೀನಿಯರ್ ವಿನಿತ್.ಆರ್ ಜೆಡ್ ವಿಪಿ ರವರಿಂದ ಜೆಸಿಐ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಎಲ್ ಡಿ ಎಂ ಟಿ ವಿಶೇಷ ತರಬೇತಿ ನೀಡಲಾಯಿತು.

ಈ ವೇಳೆ ಮಾತನಾಡಿದ ಜೆಸಿಐ ಸಮೃದ್ಧಿ ಘಟಕದ ಅಧ್ಯಕ್ಷರಾದ ಜೆಸಿ ನರಸಿಂಹ ಮೂರ್ತಿ, ಯುಗಾದಿ ಹಬ್ಬದ ದಿನ ಬೇವು ಬೆಲ್ಲ ಸೇವಿಸಿ ಇತರರಿಗೆ ಹಂಚುವ ವಿಶೇಷ ಸಂಪ್ರದಾಯವಿದೆ. ಬೇವು ಬೆಲ್ಲವು ಜೀವನದಲ್ಲಿ ಎದುರಾಗುವ ಸುಖ ದುಃಖವನ್ನು, ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು ಎಂಬ ಅರ್ಥದಲ್ಲಿ ಸಿಹಿ ಕಹಿ ಎರಡನ್ನು ಈ ಹಬ್ಬದಲ್ಲಿ ಸೇವಿಸಲಾಗುತ್ತದೆ ಎಂದರು.

ಜೀವನದಲ್ಲಿ ಕಷ್ಟ ಬಂದಾಗ ಕುಗ್ಗದೇ, ಸುಖ ಬಂದಾಗ ಹಿಗ್ಗದೇ ಎಲ್ಲದನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂಬುದನ್ನು ಯುಗಾದಿ ಹಬ್ಬದ ಆಚರಣೆ ಮೂಲಕ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ಈ ದಿನದ ವಿಶೇಷ ಕಾರ್ಯಕ್ರಮದಲ್ಲಿ ಎಲ್ಲರೂ ಅವರವರ ಮನೆಯಿಂದ ವಿಶೇಷವಾದ ಅನೇಕ ಬಗೆಯ ಸಿಹಿ ಅಡುಗೆಗಳನ್ನು ಮಾಡಿಕೊಂಡು ತಂದಿದ್ದರು.

ಕಾರ್ಯಕ್ರಮದಲ್ಲಿ ಜೆಸಿಐ ಸೀನಿಯರ್ ಗೌರೀಶ್ ಭಾರ್ಗವ ಜೆಡ್ ಪಿ ಇವರು ಆಗಮಿಸಿದ್ದರು. ಕಾರ್ಯದರ್ಶಿ ಜೆಸಿ ಗಾಯತ್ರಿ ಯಲ್ಲಪ್ಪ ಗೌಡ, ಜೆಸಿ ನರಸಮ್ಮ, ಜೆಸಿ ಅನಿತಾ ಸೀರಿಯಲ್, ಜೆಸಿ ಸುಮಾ ಕಳಸಾಪುರ, ಜೆಸಿ ಶಶಿಕಲಾ, ಜೆಸಿ ಪಾರ್ವತಿ, ಜೆಸಿ ಅನ್ನಪೂರ್ಣ, ಜೆಸಿ ಪುಷ್ಪಲತಾ, ಜೆಸಿ ಸುಮಾ, ಜೆಸಿ ಕವಿತಾ, ಜೆಸಿ ಪ್ರೇಮ್ ಗೌಡ, ಜೆಸಿ ಗಗನ್, ಜೆಸಿ ಲಲಿತ ಪ್ರಕಾಶ್, ಜೆಸಿ ಲೋಲ, ಜೆಸಿ ಪುಷ್ಪ, ಜೆಸಿ ಮಾಲಾ, ಜೆಸಿ ಮಂಜುಳಾ ಮತ್ತು ಸ್ನೇಹಿತೆಯರು ಹಾಗೂ ಕುಟುಂಬದವರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...