Akhila Bharatiya Sharana Sahitya Parishad ಶಿವಮೊಗ್ಗ ನಗರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಶಿವಮೊಗ್ಗ ತಾಲೂಕು ಘಟಕ 108 ನೇ ವಚನ ಮಂಟಪ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಕ್ತಿ ಕಲಾವೃಂದಾವತಿಯಿಂದ ( ರಿ ) ವಚನಗಳ ಬರಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಿಂದ 19 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಕ್ತಿ ಕಲಾ ವೃಂದಾವತಿಯಿಂದ ( ರಿ ) ವಚನಗಳ ಬರಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯಿಂದ 18 ವಿದ್ಯಾರ್ಥಿಗಳು
ಭಾಗವಹಿಸಿದ್ದು, ಇದರಲ್ಲಿ ಪ್ರಥಮ ಸ್ಥಾನ ಹತ್ತನೇ ತರಗತಿ ವಿದ್ಯಾರ್ಥಿ ಟಿಂಗಲ್ ಬೋರ
ದ್ವಿತೀಯಾ ಸ್ಥಾನ ಏಳನೇ ತರಗತಿ ವಿದ್ಯಾರ್ಥಿ ತೇಜಲ್ ಉದಾವತ್ ತೃತೀಯ ಸ್ಥಾನ ಹತ್ತನೇ ತರಗತಿ ವಿದ್ಯಾರ್ಥಿ ಶ್ರೀದೇವಿ ಪಡೆದುಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 11 ಮತ್ತು 12 ನೇ 12ನೇ ಶತಮಾನ ಅತ್ಯಮೂಲ್ಯವಾದದ್ದು. ವಚನ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದೆ. ಜೇಡರ ದಾಸಿಮಯ್ಯ , ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣ, ಅಕ್ಕಮಹಾದೇವಿ, ಮಡಿವಾಳ ಮಾಚಿದೇವ, ಮುಂತಾದವರ ವಚನಗಳು ನಮ್ಮ ಜೀವನಗಳಿಗೆ ಆದರ್ಶವಾಗಿವೆ, ಎಂದು ವಚನಕಾರರ ಮಹತ್ವ ಅರಿವು, ಜ್ಞಾನ, ಆಚಾರ – ವಿಚಾರಗಳು, ನಡೆ-ನುಡಿ ಹಾಗೂ ಭಕ್ತರ ಪ್ರಾಮಾಣಿಕ ನಡೆನುಡಿಗಳನ್ನು ತಿಳಿಯಬಹುದು ಎಂದು ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಪೂಜಾ ನಾಗರಾಜ್ ಪರಿಸರ ಮಕ್ಕಳಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳಾದ ಶ್ರೀದೇವಿಭಕ್ತಿ ಕಲಾ ವೃಂದದ ಕಾರ್ಯದರ್ಶಿಯಾದ ಶ್ರೀಯುತ ಕೇಶವಮೂರ್ತಿಯವರು ಶಾಲೆಯ ಮುಖ್ಯೋಪಾಧ್ಯಾಯರು ವಿನಯ್ ಹಾಗೂ ಕನ್ನಡ ಭಾಷ ಶಿಕ್ಷಕರಾದ ಅರುಣ್ ಕುಮಾರ್ ಹೆಚ್. ಎಮ್. ಭಾಗವಹಿಸಿದ್ದರು.