Shivamogga Rangayana ಶಿವಮೊಗ್ಗ ರಂಗಾಯಣದ ಆಯೋಜನೆಯಲ್ಲಿ ಮಾ.24 ರ ಸಂಜೆ 6.30ಕ್ಕೆ ಹೆಲಿಪ್ಯಾಡ್ ಹತ್ತಿರದ ಅಶೋಕನಗರ ಸುವರ್ಣ ಸಂಸ್ಕೃತಿ ಭವನದಲ್ಲಿ ಧಾರವಾಡ ರಂಗಾಯಣ ಪ್ರಸ್ತುತಿಯ, ಜಡಭರತ ರಚನೆಯ, ಶ್ರೀ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ “ಸತ್ತವರ ನೆರಳು” ನಾಟಕವು ಪ್ರದರ್ಶನಗೊಳ್ಳಲಿದೆ.
Shivamogga Rangayana ಟಿಕೆಟ್ ದರವು ಒಬ್ಬರಿಗೆ ರೂ.30 ನಿಗದಿ ಮಾಡಲಾಗಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ರಂಗಾಯಣದ ಆಡಳಿತಾಧಿಕಾರಿಗಳಾದ ಡಾ. ಶೈಲಜಾ ಎ.ಸಿ ಕೋರಿದ್ದಾರೆ.