Karnataka Sanga Shivamogga ದಿನಾಂಕ 21ನೇ ಮಾರ್ಚ್ 2025ರ ಶುಕ್ರವಾರ ಸಂಜೆ 5:30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಉಪಾಧ್ಯಕ್ಷರಾದ ಡಾ. ನಾಗಮಣಿ ಎಸ್. ಇವರ ಅಧ್ಯಕ್ಷತೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮ ‘ಸ್ತೀ ಎಂದರೆ ಅಷ್ಟೇ ಸಾಕೆ?!…’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶ್ರೀಮತಿ ಸಹನಾ ಕಾಂತಬೈಲು, ಸಾಹಿತಿಗಳು, ಚೆಂಬು ಗ್ರಾಮ, ಮಡಿಕೇರಿ, ಇವರು ‘ಗೃಹಿಣಿ ಮತ್ತು ಸಾಹಿತ್ಯ’ ವಿಷಯದ ಕುರಿತು ಮತ್ತು ಶ್ರೀಮತಿ ವಾಸಂತಿ ಶೆಣೈ ಆಕಾಶವಾಣಿ ಹಾಗೂ ದೂರದರ್ಶನ ಸಂಗೀತ ಕಲಾವಿದರು, ಉಡುಪಿ, ಇವರು ‘ಗೃಹಿಣಿ ಮತ್ತು ಸಂಗೀತ’ ವಿಷಯದ ಕುರಿತು ಮಾತನಾಡಲಿದ್ದಾರೆ.
ದಿನಾಂಕ ೨೨ನೇ ಮಾರ್ಚ್ 2025ರ ಶನಿವಾರ ಸಂಜೆ 5:30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರೀ ಇವರ ಅಧ್ಯಕ್ಷತೆಯಲ್ಲಿ ತಿಂಗಳ ಅತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
Karnataka Sanga Shivamogga ಭದ್ರಾವತಿಯ ಪ್ರೊ. ಎಸ್.ಎಸ್. ವಿಜಯಾ (ವಿಜಯದೇವಿ), ಎಮೆರಿಟಸ್ ಪ್ರಾಧ್ಯಾಪಕರು, ಸಾಹಿತಿಗಳು ಇವರು ‘ಅಲ್ಲಮನಂತರಂಗ’ ವಿಷಯದ ಕುರಿತು ಮಾತನಾಡಲಿದ್ದಾರೆ.
ಆಸಕ್ತರು ಈ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸಲಾಗಿದೆ.