Saturday, December 6, 2025
Saturday, December 6, 2025

K.S. Eshwarappa ಕಾಂಗ್ರೆಸ್ ಸರ್ಕಾರದ ನಡವಳಿಕೆ ಯಾರಿಗೂ ನೆಮ್ಮದಿ ತರುತ್ತಿಲ್ಲ :ಕೆ.ಎಸ್​.ಈಶ್ವರಪ್ಪ

Date:

K.S. Eshwarappa ಮಾಸೂರಿನ ಯುವತಿ ಸ್ವಾತಿ ಹತ್ಯೆ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರದ ನಡವಳಿಕೆ ಯಾರಿಗೂ ನೆಮ್ಮದಿ ತರುತ್ತಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸ್ವಾತಿಯನ್ನು ಲವ್​ ಜಿಹಾದ್​ ಮೂಲಕ ಬಲೆಗೆ ಬೀಳಿಸಿಕೊಂಡು ಕಾರಿನಲ್ಲಿ ಕರೆದುಕೊಂಡು ಹೋಗಿ ಕುತ್ತಿಗೆ ಬಿಗಿದು ಸಾಯಿಸಿ ನದಿಗೆ ಬಿಸಾಕಿ ಹೋಗುವ ರಾಕ್ಷಿಸಿ ಕೃತ್ಯದ ಬಗ್ಗೆ ಸಿಎಂ ಆದಿಯಾಗಿ ಯಾರೊಬ್ಬರೂ ಖಂಡನೆ ಮಾಡಿಲ್ಲ. ಸಿಎಂ ಹಾಗೂ ಡಿಸಿಎಂ ಮಾತೆತ್ತಿದರೆ ನೀವು ಮುಸಲ್ಮಾನ್​ ವಿರೋಧಿ ಎನ್ನುತ್ತಾರೆ. ಸ್ವಾತಿ ನಿಮ್ಮ ಮಗಳೇ ಆಗಿದ್ದರೆ ನೀವು ಸುಮ್ಮನಿರುತ್ತಿದ್ದರೆ ಎಂದು ಪ್ರಶ್ನಿಸಿದ ಈಶ್ವರಪ್ಪ ಸ್ವಾತಿಯ ಮೃತ ದೇಹ ನದಿಯಿಂದ ಮೇಲಕ್ಕೆ ಬರುತ್ತಿದ್ದಂತೆಯೇ ಪೊಲೀಸರು ಆತುರದಿಂದ ಶವ ಸಂಸ್ಕಾರ ಮಾಡಿದ್ದಾರೆ ಎಂದರು.
K.S. Eshwarappa ಸ್ವಾತಿ ಹತ್ಯೆ ಪ್ರಕರಣ ಇಡೀ ರಾಜ್ಯದ ಜನ ತಲೆ ತಗ್ಗಿಸುವ ಕೆಲಸ. ಒಂದು ವೇಳೆ ಮುಸ್ಲಿಮ್​ ಯುವತಿಯನ್ನು ಯಾರಾದರೊಬ್ಬ ಹಿಂದೂ ಯುವಕ ಸಾಯಿಸಿ ಬಿಸಾಕಿದ್ದರೆ ನೀವು ಬೆಂಕಿ ಹಚ್ಚುತ್ತಿದ್ದರಲ್ಲವೆ. ರಾಜ್ಯದಲ್ಲಿ ಹಿಂದೂ ಹೆಣ್ಣು ಮಕ್ಕಳು ಎಂದರೆ ಬೆಲೆಯೆ ಇಲ್ಲದಂತಾಗಿದೆ. ಹಾಗಾಗಿ ಹಿಂದೂ ಹೆಣ್ಣು ಮಕ್ಕಳು ರಾಕ್ಷಸಿ ಮುಸಲ್ಮಾನ ಗೂಂಡಾಗಳ ಬಗ್ಗೆ ಎಚ್ಚರದಿಂದರಬೇಕು. ಹಾಗೆಯೇ ಹೆಣ್ಣು ಮಕ್ಕಳು ಈ ರೀತಿ ದುರ್ಬಳಕೆ ಮಾಡಿಕೊಳ್ಳುವವರನ್ನು ಗುಂಡಿಟ್ಟು ಕೊಲ್ಲುವ ಕಾಯ್ದೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...