Madhu Bangarappa ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷಾತಾ ಇಲಾಖೆ ಸಚಿವರಾದ ಸನ್ಮಾನ್ಯ ಮಧು ಬಂಗಾರಪ್ಪನವರು ಕೇರಳದ ಕಣ್ಣೂರು ಜಿಲ್ಲೆಯ ತಳ್ಳಿಚೇರಿಯಲ್ಲಿ ಹಮ್ಮಿಕೊಂಡಿದ್ದ “ನಾರಾಯಣ ಗುರುಗಳ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ನಾರಾಯಣ ಗುರುಗಳು ಜೀವಂತವಾಗಿದ್ದಾಗ ಪ್ರತಿಷ್ಠಾಪಿಸಲಾದ ಏಕೈಕ ದೇವಾಲಯಕ್ಕೆ ಭೇಟಿನೀಡಿ ಆಶೀರ್ವಾದ ಪಡೆದರು.
ಬಳಿಕ ಕೇರಳ ವಿಧಾನಸಭೆಯ ಸ್ಪೀಕರ್ ಶ್ರೀ ಎ.ಎನ್ ಶಂಶೀರ್ ಅವರೊಂದಿಗೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
Madhu Bangarappa ಈ ವೇಳೆ ಮಹೋತ್ಸವ ಕಮಿಟಿ ಅಧ್ಯಕ್ಷರಾದ ಶ್ರೀ ಗೋಕುಲನ್ ಗೋಪಾಲನ್, ಸಂಸದರಾದ ಶ್ರೀ ಶಫಿ ಪರಂಬಿಲ್, ಮಾಜಿ ಶಾಸಕರಾದ ಶ್ರೀ ಎಂ.ವಿ ಜಯರಾಜನ್, ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಹರೀಶ್ ಕುಮಾರ್, ಶ್ರೀ ಟಿ.ಕೆ ರಾಜನ್, ಶ್ರೀ ರವೀಂದ್ರ ಪೊಯ್ಲೂರು, ಶ್ರೀ ಕೆ.ಸತ್ಯನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.