Puttaraj Gawai ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ೧೧೧ನೇ ಜನ್ಮದಿನ ಸಮಾರಂಭವನ್ನು ಮಾ. 09ರ ಭಾನುವಾರ ಬೆಳಿಗ್ಗೆ 11:30ಕ್ಕೆ ಸಾಗರ ರಸ್ತೆ ಅಂಧ ಮಕ್ಕಳ ಸಂಗೀತ ವಿದ್ಯಾಲಯ ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಸ್ಕೃತ ಪಾಠ ಶಾಲೆಯಲ್ಲಿ ಏರ್ಪಡಿಸಲಾಗಿದೆ.
ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಪುಣ್ಯಾಶ್ರಮದ ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಚಾರ್ಟೆಡ್ ಅಕೌಂಟೆಂಟ್ ನರೇಂದ್ರ ಕೆ.ವಿ., ಭದ್ರಾವತಿ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ಧಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ವಾಗೇಶ್ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಾಗರದ ಖ್ಯಾತ ಹಿಂದೂಸ್ಥಾನಿ ಗಾಯಕಿ ವಿದೂಶಿ ಶ್ರೀಮತಿ ವಸುಧಾ ಶರ್ಮ ಅವರಿಗೆ ಶ್ರೀ ಗುರು ಗಾನಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಶೇಷ ಗಾಯಕರಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ರಾಮಣ್ಣ ಭಜಂತ್ರಿ ಶಹನಾಯಿ ಆಕರ್ಷಿಸಲಿದೆ. ಹೊನ್ನಾಳಿ ರುಕ್ಮಿಣಿ ಭಜನಾ ಮಂಡಳಿಯಿಂದ ಭಜನಾ ಸೇವೆ, ಚೈತನ್ಯ ಜಯಕೀರ್ತಿ ಶ್ರೀರಕ್ಷೆ, ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.
ಪುಟ್ಟರಾಜ ಮಂದಿರದ ಅಲಂಕಾರ ಹಾಗೂ ದಾಸೋಹದ ಸೇವೆಯನ್ನು ಉದ್ಯಮಿಗಳಾದ ಸಿದ್ಧಲಿಂಗಪ್ಪ ಐನಾಪುರ ಮತ್ತು ಕುಟುಂಬ, ರಮೇಶ್, ರಮ್ಯ, ಲಕ್ಷ್ಮಿದೇವಿ ದಿ. ಹೊನ್ನಪ್ಪ ಕುಟುಂಬ ಮತ್ತು ಆಶಾ ಚನ್ನಬಸಪ್ಪ ವಹಿಸಲಿದ್ದಾರೆ. ಮಾಹಿತಿಗೆ ಮೊ. 888 4955667ರಲ್ಲಿ ಸಂಪರ್ಕಿಸಲು ಕೋರಲಾಗಿದೆ.
Puttaraj Gawai ಮಾರ್ಚ್ 9 ರಂದು ಗಾಯಕಿ ವಸುಧಾ ಶರ್ಮ ಅವರಿಗೆ “ಗಾನ ಭೂಷಣ ” ಪ್ರಶಸ್ತಿ ನೀಡಿಕೆ
Date: