Monday, March 10, 2025
Monday, March 10, 2025

Kateel Ashok Pai Memorial College ಎಲ್ಲರ ಗಮನ ಸೆಳೆದ ಏಕ ವ್ಯಕ್ತಿ ಪ್ರದರ್ಶನ ” ಶೀತಲ್ ಪಾಟಿ”

Date:

Kateel Ashok Pai Memorial College ಶಿವಮೊಗ್ಗದ ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ – 2025 ರ ಪ್ರಯುಕ್ತ ಆಯೋಜಿಸುತ್ತಿರುವ ಸಪ್ತಾಹ ಕಾರ್ಯಕ್ರಮಗಳನ್ನು ದಿನಾಂಕ 05- 03-2025 ರಂದು ಅರ್ಥಪೂರ್ಣವಾಗಿ ಉದ್ಘಾಟಿಸಲಾಯಿತು.
ಮಾನಸ ಟ್ರಸ್ಟ್ನ ಶೈಕ್ಷಣಿಕ ನಿರ್ದೇಶಕರಾದ ಡಾ ಪ್ರೀತಿ ಶಾನ್‌ಭಾಗ್ ಹಾಗೂ ಪಶ್ಚಿಮ ಬಂಗಾಳದ ಕೋಲ್ಕತ್ತಾದ ನಾಟಕ ಕಲಾವಿದೆ ಸಂಜೀತಾ ಮುಖರ್ಜಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಜೀವನದ ಆಯಾಮಗಳನ್ನು ತಿಳಿಸುವ ಖ್ಯಾತ ಕಥೆಗಾರ ವಿಭೂತಿ ಭೂಷಿಣ್‌ ಅವರ ಕಥೆಯನ್ನಾಧರಿಸಿದ ‘ಶೀತಲ್ ಪಾಟಿ’ ಎಂಬ ಏಕವ್ಯಕ್ತಿ ನಾಟಕವನ್ನು ಸಂಜೀತಾ ಮುಖರ್ಜಿಯವರು ವೇದಿಕೆಯ ಮೇಲೆ ಪ್ರಸ್ತುತ ಪಡಿಸಿದರು.

ಈ ನಾಟಕದಲ್ಲಿ ‘ಹಾಜು’ ಎಂಬ, ಬಾಲ್ಯವಿವಾಹಿತ ಹೆಣ್ಣುಮಗಳು, ಕುಡುಕ ಗಂಡನ ದೌರ್ಜನ್ಯದಿಂದ ಮನೆಯಿಂದ
ಹೊರಹಾಕಲ್ಪಟ್ಟು, ಬರಗಾಲದ ಆ ಸಂದರ್ಭದಲ್ಲಿ ಗ್ರಾಮಸ್ಥರಲ್ಲಿ ಕೆಲವರು ಅವಳನ್ನು ಪೊರೆಯಿಂದ, ಕೆಲವರು ಹೀಯಾಳಿಸುವ, ಸನ್ನಿವೇಶಗಳನ್ನು ಸಂಜೀತಾ ಯಶಸ್ವಿಯಾಗಿ ಅಭಿನಯ, ಹಾಡು, ಪಪೆಟ್ ಶೋ ಮೂಲಕ ತೋರಿಸಿದರು. ಹಾಡಿನ ಪ್ರತಿಭೆಯ ಹೆಣ್ಣು ಮಗಳು ಅದನ್ನೇ, ತಾನು ಭಿಕೆ ್ಷ ಬೇಡುವ ಆಹಾರಕ್ಕೆ ‘ವೃತ್ತಿ’ಯಂತೆ ಬಳಸಿಕೊಳ್ಳುತ್ತಾಳೆ. ಒಡವೆ, ವಸ್ತುಗಳಿಗಾಗಿ ಹಂಬಲಿಸದ ಆಕೆ ತನ್ನ ಹಾಗೂ ತನ್ನ ಮಗನ ಹಸಿವು, ನೀಗಿಸಲು ಮನೆ ಮನೆಗೆ ತೆರಳಿ ಹಾಡು ಹೇಳಿ ಅನ್ನ ಪಡೆಯುತ್ತಾಳೆ. ಆದರೆ, ಅದೇ
ಊರಿನ ಒಬ್ಬ ದುಷ್ಕರ್ಮಿ ಕಳ್ಳತನದ ಆರೋಪ ಹೋರಿಸಿ ಅವಳನ್ನು ಬಡಿಯುತ್ತಾನೆ. Kateel Ashok Pai Memorial College ಈ ನೋವಿನಿಂದ ಕುಗ್ಗಿದ ಹಾಜು ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಆದರೆ ಅವಳನ್ನು ಸದಾ ಪ್ರೀತಿಯಿಂದ ಪ್ರೋತ್ಸಾಹಿಸುತ್ತಿದ ಊರ ಹಿರಿಯನ ಮಾತು ಹಾಗೂ ತಾನು ಸಾಕಬೇಕಾದ ಮಗನ ಮೇಲಿನ ಮಮತೆಯಿಂದ ತನ್ನ ನಿರ್ಧಾರ ಬದಲಿಸಿ ನಗರಕ್ಕೆ ಪ್ರಯಾಣ ಬೆಳೆಸುತ್ತಾಳೆ. ಅಲ್ಲಿ ಪ್ರಸಿದ್ಧ ನರ್ತಕಿ ಹಾಗೂ ಗಾಯಕಿಯಾಗಿ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾಳೆ.ಹೆಣ್ಣು ಮಗಳೊಬ್ಬಳ ನೋವು, ಅವಳ ಮೇಲಿನ ದೌರ್ಜನ್ಯ, ಅವಳ ಅಂತಃಶಕ್ತಿ, ಆಗಾಗ ಅವಳೇ ಸ್ವತಃ ಬೆಳೆಸಿಕೊಳ್ಳುವ ಧನಾತ್ಮಕ ಮನೋಭಾವ ಗ್ರಾಮದ ಜನರಲ್ಲಿ ಕಂಡು ಬರುವ ಮಿಶ್ರ ಪ್ರತಿಕ್ರಿಯೆಗಳು, ಹಿರಿಯನೊಬ್ಬನ ಪ್ರೀತಿ ಆದರದ ಬೆಂಬಲ ಎಲ್ಲವೂ ಮೂಡಿಬರುವ ಈ ಏಕವ್ಯಕ್ತಿ ನಾಟಕ ವಿದ್ಯಾರ್ಥಿಗಳಿಗೆ ಮುಂದೆ ಸಂಜೀತಾ ಮುಖರ್ಜಿ ಅತ್ಯಂತ ಮನೋಜ್ಞವಾಗಿ ತೋರಿಸಿಕೊಟ್ಟರು.
ಸಂಜೀತಾರವರು ಈ ಕಥೆಯು ಮಹಿಳೆಯೊಬ್ಬಳು ತನ್ನ ಅಂತಃಶಕ್ತಿ ಹಾಗೂ ದೊರೆಯುವ ಸಾಮಾಜಿಕ
ಬೆಂಬಲವನ್ನು ಬಳಸಿ, ಅದೇ ಸಮಾಜದ ಅನುಚಿತ ಅಂಶಗಳನ್ನು ಮೆಟ್ಟಿ ನಿಲ್ಲುವ ಹಾಗೂ
ಬದುಕುಕಟ್ಟಿಕೊಳ್ಳುವ ಪರಿಯನ್ನು ತೋರಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದರು. ವಿಶ್ವ ಮಹಿಳಾ ದಿನಾಚರಣೆಗಾಗಿ
ಮನಃಶಾಸ್ತ್ರ ವಿದ್ಯಾರ್ಥಿಗಳು ‘ತಾಯಿಯ ಕುರಿತು ಅನಿಸಿಕೆ’ ಬರೆಯುವ ಪೋಸ್ಟರ್‌ಗಳನ್ನು ಕಾಲೇಜಿನಲ್ಲಿ ಹಾಕಿದರು. ದಿನಾಂಕ: ೦೫.೦೩.೨೦೨೫ ರಿಂದ, ೧೨.೦೩.೨೦೨೫ ರವರೆಗೆ ವಿದ್ಯಾರ್ಥಿನಿಯರಿಗಾಗಿ ವಿವಿಧ ಸ್ಪರ್ಧೆಗಳು, ರಸಪ್ರಶ್ನೆ ಕಾರ್ಯಕ್ರಮ,
ವೆಬಿನಾರ್‌ಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ದಿನಾಂಕ: ೦೮.೦೩.೨೦೨೫ ರಂದು ಸುಬ್ಬಯ್ಯ ಮೆಡಿಕಲ್ ಕಾಲೇಜು
ಸಹಯೋಗದಲ್ಲಿ ಮಾನಸ ಟ್ರಸ್ಟ್ ವತಿಯಿಂದ ಕೋನಗವಳ್ಳಿ ಗ್ರಾಮ ಪಂಚಾಯಿತಿಯ ಸೇವಾಲಾಲ್
ನಗರದಲ್ಲಿ ಮಹಿಳಾ ಆರೋಗ್ಯ ತಪಾಸಣೆ, ಮಹಿಳೆಯರ ಹಿಮೊಗ್ಲೋಬಿನ್ ತಪಾಸಣೆ, ಅರಿವು ಜಾಥಾ ಹಾಗೂ ಎಂಟು ಜನ ಆಶಾಕಾರ್ಯಕರ್ತರಿಗೆ ಸನ್ಮಾನವನ್ನು ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲರಾದ ಡಾ ಸಂಧ್ಯಾ ಕಾವೇರಿ ಕೆ ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಜೆಸಿಐ ನಲ್ಲಿ ತೊಡಗಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆ- ಸೂರ್ಯ ನಾರಾಯಣ ವರ್ಮ

JCI Shivamogga ಸಮಾಜಮುಖಿ ಚಟುವಟಿಕೆಗಳ ಜತೆಯಲ್ಲಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ...

Karnataka Lokayukta ಮಾರ್ಚ್ 18 ರಿಂದ 21 ವರೆಗೆ ರಾಜ್ಯ ಉಪಲೋಕಾಯುಕ್ತ ನ್ಯಾ.ಕೆ.ಫಣೀಂದ್ರ ಅವರ ಜಿಲ್ಲಾ ಕಾರ್ಯಕ್ರಮಗಳ ಮಾಹಿತಿ

Karnataka Lokayukta ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18...

CM Siddharamaih ಕುರ್ಚಿ ಉಳಿಸಿಕೊಳ್ಳುವ ಯತ್ನದಲ್ಲಿ ಸಿದ್ಧರಾಮಯ್ಯನವರ ಬಜೆಟ್…!

CM Siddharamaih ಕರ್ನಾಟಕದ ಅಭಿವೃದ್ಧಿಗೆ ಪೂರಕವೇ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ...

Guarantee Scheme ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ.‌ ಊಹಾಪೋಹಗಳಿಗೆ ಬೆಲೆಕೊಡಬೇಡಿ- ಸಿ.ಎಸ್.ಚಂದ್ರಭೂಪಾಲ್

Guarantee Scheme ಕರ್ನಾಟಕ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ,...