Saturday, December 6, 2025
Saturday, December 6, 2025

ಅನಧೀಕೃತ ಜೇನುತುಪ್ಪ & ವಿನೆಗರ್ ತಯಾರಿಕಾ ಘಟಕದ ಮೇಲೆ ದಿಢೀರ್ ದಾಳಿ

Date:

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲ್ಲತ್ತಿಯ ಕೆಮಿಕಲ್ ಫ್ಯಾಕ್ಟರಿಗೆ ಅಧಿಕಾರಿಗಳು ದಾಳಿ ನಡೆಸಿದರು.

ಸಾಗರದ ಹುಲ್ಲತ್ತಿ ಗ್ರಾಮದಲ್ಲಿ ಇರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಅನಧಿಕೃತವಾಗಿ ಜೇನುತುಪ್ಪ ಹಾಗೂ ವಿನೆಗರ್ ತಯಾರು ಮಾಡಲಾಗುತ್ತಿತ್ತು.

ಅಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಹಾಗೂ ಸಾಗರ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು..

ಯಾವುದೇ ಕೆಮಿಕಲ್ ಫ್ಯಾಕ್ಟರಿಗಳಲ್ಲಿ ಆಹಾರ ಪದಾರ್ಥಗಳು ತಯಾರು ಮಾಡಬಾರದು ಎಂಬ ಕಾನೂನು ಇದ್ದರೂ ಸಹ ಆಹಾರ ವಸ್ತುಗಳ ತಯಾರಿಕೆ ಆರೋಪ ಕೇಳಿಬಂದಿದೆ .

ಹುಲ್ಲತಿ ಗ್ರಾಮದ ಶ್ರೀಧರ ಹೆಗಡೆ ಎಂಬ ವ್ಯಕ್ತಿ ಶ್ವೇತಾ ಕೆಮಿಕಲ್ ಇಂಡಸ್ಟ್ರೀಸ್ ಹಾಗೂ ಶ್ರೇಯಸ್ ಹೋಂ ಇಂಡಸ್ಟ್ರೀಸ್ ಎಂಬ ಹೆಸರಿನಲ್ಲಿ ಈ ಕೆಮಿಕಲ್ ಫ್ಯಾಕ್ಟರಿ ಇದೆ.

ಕಳೆದ 28 ವರ್ಷಗಳಿಂದ ಈ ಘಟಕದಲ್ಲಿ ಕೆಮಿಕಲ್ ವಸ್ತು ತಯಾರಿಕೆ ಮಾಡಲಾಗುತ್ತಿತ್ತು.

ಈಗ ಜೇನುತುಪ್ಪ ಹಾಗೂ ಗೋಬಿ ಮಂಚೋರಿ, ಫ್ರೈಡ್ ರೈಸ್ ಗೆ ಉಪಯೋಗಿಸುವ ವೆನಿಗರ್ ತಯಾರಿಕೆ

ಫ್ಯಾಕ್ಟರಿಯಲ್ಲಿ ಯಾವುದೇ ಅನುಮತಿ ಇಲ್ಲದೆ ಜೇನುತುಪ್ಪ ಹಾಗೂ ಗೋಬಿ ಮಂಚೋರಿ, ಫ್ರೈಡ್ ರೈಸ್ ಗೆ ಉಪಯೋಗಿಸುವ ವೆನಿಗರ್ ತಯಾರಿಕೆ ನಡೆಯುತ್ತಿರುವ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ

ಅಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಮತ್ತು ಸಾಗರ ತಹಸಿಲ್ದಾರ್ ಕಚೇರಿಯ ಅಧಿಕಾರಿಗಳು ದಿಢೀರ್ ದಾಳಿ
ನಡೆಸಿ
ಫ್ಯಾಕ್ಟರಿಯಲ್ಲಿ ಇದ್ದ ಜೇನುತುಪ್ಪ ಹಾಗೂ ವಿನೆಗರ್ ಸೇರಿದಂತೆ ವಿವಿಧ ಪದಾರ್ಥಗಳ ಸ್ಯಾಂಪಲ್ಪಡೆದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...