Wednesday, March 12, 2025
Wednesday, March 12, 2025

Kuvempu University ವಿಕಸಿತ ಭಾರತ ಯುವ ಸಂಸತ್ ನಲ್ಲಿ ಭಾಗವಹಿಸಲು ಮಾರ್ಚ್ 9 ರೊಳಗೆ ನೋಂದಣಿಗೆ ಅವಕಾಶ- ಡಾ.ಶುಭಾ ಮರವಂತೆ

Date:

Kuvempu University ಎನ್ ಎಸ್ ಎಸ್ ಹಾಗೂ ನೆಹರೂ ಯುವ ಕೇಂದ್ರದ ಸಹಭಾಗಿತ್ವದಲ್ಲಿ ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಆಶಯದಂತೆ 2047 ರ ವೇಳೆಗೆ 1 ಲಕ್ಷ ಜಾಗೃತ ಯುವ ನಾಯಕರನ್ನು ಗುರುತಿಸುವ ಉದ್ದೇಶಕ್ಕಾಗಿ ಯುವ ಸಂಸತ್ (ಯೂತ್ ಪಾರ್ಲಿಮೆಂಟ್) ಯುವ ಧ್ವನಿಯನ್ನು ದಾಖಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಮತ್ತು ಉಪನ್ಯಾಸಕರಾದ ಡಾ. ಶುಭ ಮರವಂತೆ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ರಾಜಕೀಯ ವ್ಯವಸ್ಥೆ ಜಿಡ್ಡುಗಟ್ಟಿ ಹೋಗಿದೆ ಅದನ್ನು ಸರಿಮಾಡಲು ರಾಜಕೀಯದಲ್ಲಿ ಯುವಕರು ಭಾಗವಹಿಸಬೇಕು. ಭವಿಷ್ಯದ ಭಾರತ ಯುವಕರ ಕೈಯಲ್ಲಿ ಹೇಗಿರಲಿದೆ, ಹಾಗೆಯೇ ದೇಶದ ಬಗ್ಗೆ ಯುವಕರ ಚಿಂತನೆ ಯಾವ ರೀತಿ ಇರಲಿದೆ ಎಂಬುದನ್ನು ತಿಳಿದುಕೊಳ್ಳಲು ನರೇಂದ್ರ ಮೋದಿಯವರ ಆಶಯದಂತೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಭಾಗವಹಿಸಲು ಇಚ್ಚಿಸುವವರು 1 ನಿಮಿಷದ ವಿಡಿಯೋ ಮಾಡಿ ಮೈ ಭಾರತ್ ಪೋರ್ಟಲ್ ನಲ್ಲಿ ಅಪೆÇ್ಲೀಡ್ ಮಾಡಬೇಕು ಎಂದು ಹೇಳಿದರು.

Kuvempu University ಈ ಕಾರ್ಯಕ್ರಮಕ್ಕೆ 18 ರಿಂದ 25 ವರ್ಷದ ಯುವಕ ಯುವತಿಯರು ಮೈ ಭಾರತ್ ಪೋರ್ಟಲ್ ನಲ್ಲಿ ಒಂದು ನಿಮಿಷದ ನಿಮ್ಮ ಆಡಿಯೋ ವಿಡಿಯೋವನ್ನು ಅಪ್ಲೋಡ್ ಮಾಡಬೇಕು. ವಿಡಿಯೋವು ಗರಿಷ್ಠ 25 ಎಂಬಿ ಯ ಒಳಗಿರಬೇಕು. ಭಾಷಣವು ಬಹುಭಾಷಾ ಆಗಿರಬಹುದು ಕನ್ನಡ, ಹಿಂದಿ, ಇಂಗ್ಲಿಷ್ ಯಾವುದೇ ಮಾತೃ ಭಾμÉಯಲ್ಲಿಯಾದರೂ ವಿಡಿಯೋ ಮಾಡಬಹುದು ಎಂದರು.

ವೀಡಿಯೋ ಅಪ್ಲೋಡ್ ಮಾಡಲು ಕೊನೆಯ ದಿನಾಂಕ ಮಾ.09 ಆಗಿದ್ದು, ವಿಡಿಯೋದ ಆರಂಭದಲ್ಲಿ ನಿಮ್ಮ ಹೆಸರು ಜಿಲ್ಲೆಯ ಹೆಸರು ರಾಜ್ಯದ ಹೆಸರು ನೊಡಲ್ ಸೆಂಟರ್ ಹೆಸರು ಇರಬೇಕು. ಇದರಲ್ಲಿ ಅತ್ಯುತ್ತಮ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಮಾ.14, 15 ರಂದು ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲಾ, ನೊಡಲ್ ಸೆಂಟರ್ ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸ್ಪರ್ಧೆ ನಡೆಸಲಾಗುವುದು. ಅಂದು ಬೆಳಿಗ್ಗೆ 9.30 ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಜರಿರಬೇಕು ಎಂದರು.

ನಂತರ ಇಲ್ಲಿ ಆಯ್ಕೆಯಾದ 10 ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು. ಇಲ್ಲಿಂದ 3 ಜನರನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗುವುದು, ಅಂತಿಮ ಹಂತದಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ರೂ 2ಲಕ್ಷ, ದ್ವಿತೀಯ 1.5 ಲಕ್ಷ, ತೃತೀಯ 1 ಲಕ್ಷ ನೀಡಲಾಗುವುದು, ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಭಾರತದ ಸಂಸತ್ ಭವನದಲ್ಲಿ ಮಾತನಾಡುವ ಅವಕಾಶ ಪಡೆಯುತ್ತಾರೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ಕೇಶವ್, ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಅವಿನಾಶ್, ಕನ್ನಡ ಉಪನ್ಯಾಸಕರಾದ ಡಾ. ಪ್ರಕಾಶ್, ನೆಹರು ಯುವ ಕೇಂದ್ರದ ಉಲ್ಲಾಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

State Film Awards 2020 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ

State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ...

Klive Special ಹೆತ್ತವಳಿಗೊಂದು ಕವನ-ನಮನ

Klive Special ದೇವರ ಸ್ವರೂಪ ಗರ್ಭದಲ್ಲಿ ಹೊತ್ತುನವಮಾಸಕ್ಕೆ ಹೆತ್ತುಮೌಲ್ಯಗಳನ್ನೇ ಬಿತ್ತುಸಲಹಿದೆ ನೀಡಿ ಕೈತುತ್ತು ಅಮ್ಮ...

Guarantee Scheme ಸತ್ಯ & ಶುದ್ಧ ಮಾರ್ಗದಿಂದ ರಾಷ್ಟ್ರ ಕಟ್ಟಲು ಸಾಧ್ಯ- ಸಿ.ಎಸ್.ಚಂದ್ರಭೂಪಾಲ್

Guarantee Scheme ಅಂತರಂಗ ಮತ್ತು ಬಹಿರಂಗ ಶುದ್ದಿಯಿಂದ ಹಾಗೂ ಸತ್ಯದ ಮಾರ್ಗದಲ್ಲಿ...