Saturday, March 1, 2025
Saturday, March 1, 2025

Shubhamangal Kalyan Mandira ಸಮಾಜ ಸೇವಕ ವಿನಾಯಕ್ ಬಾಯರಿ ನಿಧನ

Date:

Shubhamangal Kalyan Mandira ಶಿವಮೊಗ್ಗದ ವಿನಾಯಕ್ ಬಾಯರಿ(47) ರವರು ಇಂದು ಅಗಲಿದ್ದಾರೆ. ಆಪ ರಾಮಭಟ್ಟರ ಶಿಷ್ಯರಾಗಿದ್ದ ಇವರು ದೇವಸ್ಥಾನ ಸಮಾಜಮುಖಿ ಕಾರ್ಯಗಳಲ್ಲಿ ಹೇಗೆ ತೊಡಗಿಸಿ ಕೊಳ್ಳಬೇಕೆಂದು ತೋರಿಸಿ ಕೊಟ್ಟಿದ್ದರು.
ಶ್ರೀಯುತರು ಶುಭಮಂಗಳ ಕಲ್ಯಾಣಮಂದಿರದ ಪಕ್ಕದಲ್ಲಿರುವ ಶನೀಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದರು.
ವೈದಿಕವೃತ್ತಿಯನ್ನು ಬಹಳಷ್ಟು ಶ್ರದ್ಧೆಯಿಂದ ನೆರವೇರಿಸುತ್ತಾ ಹಲವಾರು ಶಿಷ್ಯವೃಂದವನ್ನು ರಚಿಸಿಕೊಂಡಿದ್ದರು. ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಯಜ್ಙ-ಯಾಗವನ್ನು ನೆರವೇರಿಸಿದ್ದರು. ವೇದಬ್ರಹ್ಮ ಎಂದು ಹೆಸರಾಂಕಿತರಾಗಿದ್ದರು. ಜನಮಾನಸದಲ್ಲಿ ಉಳಿಯುವಂತಹ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಚಿರಂಜೀವಿಗಳಾಗಿದ್ದಾರೆ.
ಸಹಾಸ ಕ್ರೀಡೆಗಳ ಬಗ್ಗೆ ಒಲವಿದ್ದ ಇವರು ಬೈಕ್ ಕ್ಲಬ್ ಸದಸ್ಯರಾಗಿ ಹಲವಾರು ರಾಷ್ಟ್ರೀಯ ಅಂತರಾಷ್ಟ್ರೀಯ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ನೇಪಾಳಕ್ಕೆ ಬೈಕ್ ನಲ್ಲಿ ಪ್ರವಾಸಕೈಗೊಂಡಿದ್ದರು. ಸೈಕಲ್ ಕ್ಲಬ್ ಸದಸ್ಯರಾಗಿ ಹಲವಾರು ಜಾತಗಳಲ್ಲಿ ಭಾಗವಹಿಸಿದ್ದರು.
Shubhamangal Kalyan Mandira ಇಂದು ಸಂಜೆ ರೋಟರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಅರ್ಚಕವೃಂದ, ಬೈಕ್ ಕ್ಲಬ್, ಯೂತ್ ಹಾಸ್ಟೆಲ್ಸ್, ಸೈಕಲ್ ಕ್ಲಬ್ ಸದಸ್ಯರು, ಭಜನಾ ಮಂಡಳಿ ಸದಸ್ಯರು ಆ.ನಾ.ವಿಜಯೇಂದ್ರ, ಎನ್.ಗೋಪಿನಾಥ್, ವಿನಯ್, ಆದಿತ್ಯಪ್ರಸಾದ್, ಜಿ.ವಿಜಯಕುಮಾರ್, ವಾಗೇಶ್ ಇವರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.
ಹಾಗೂ ಹಲವಾರು ಭಕ್ತಾದಿಗಳನ್ನು, ಸ್ನೇಹಿತರನ್ನು, ಬಂಧು ಬಾದವರನ್ನು ಬಿಟ್ಟು ಅಗಲಿದ ಇವರಿಗೆ ಹೆಂಡತಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Forest Department ರಸ್ತೆ ಅಗಲೀಕರಣ ಬಗ್ಗೆ ಮರಗಳ ಕಡಿತಲೆ, ಆಯನೂರು ಅರಣ್ಯ ಉಪವಿಭಾಗದಲ್ಲಿ ಸಾರ್ವಜನಿಕರ ಅಹವಾಲಿಗೆ ಅವಕಾಶ

Forest Department ಅರಣ್ಯ ಇಲಾಖೆ ಆಯನೂರು ಉಪವಿಭಾಗದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ...

Annabhagya Yojana ಫೆಬ್ರವರಿ 2025 ರಿಂದ ಜಾರಿಗೆ ಬರುವಂತೆ ಮಾರ್ಚ್2025 ರ ಮಾಹೆಯ ಪಡಿತರದಲ್ಲಿ 5 ಕೆಜಿ ಅಕ್ಕಿ ಸೇರಿಸಿ ವಿತರಣೆ- ಗುರುದತ್ತ ಹೆಗಡೆ

Annabhagya Yojana ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಮತ್ತು...

Dr. Gururaj Karajagi ಮಕ್ಕಳಲ್ಲಿನ ಸುಪ್ತ ಸೃಜನಾತ್ಮಕ ಲೇಖನಗಳನ್ನ ‘ಬುಗುರಿ’ ಹೊರತಂದಿದೆ – ಡಾ.ಗುರುರಾಜ ಕರಜಗಿ

Dr. Gururaj Karajagi ಮಕ್ಕಳು ರಜಾ ದಿನಗಳಲ್ಲಿ ಬರೆದ ಅನುಭವ ಸಂಗತಿಗಳನ್ನು...

Karnataka Sanga Shivamogga ಕರ್ನಾಟಕ‌ ಸಂಘದ ಪುಸ್ತಕ ಬಹುಮಾನ-2024 ಯೋಜನೆ. ಮಾಹಿತಿ

Karnataka Sanga Shivamogga ಪ್ರತಿ ವರ್ಷದಂತೆ ಶಿವಮೊಗ್ಗ ಕರ್ನಾಟಕ ಸಂಘವು 2024ನೇ...