Forest Department ಅರಣ್ಯ ಇಲಾಖೆ ಆಯನೂರು ಉಪವಿಭಾಗದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಅಡಚಣೆಯಾಗಿರುವ ಮರಗಳನ್ನು ಗುರುತಿಸಿದ್ದು, ಅವುಗಳನ್ನು ಕಡಿಯಲು ಮಾ. 04 ರಂದು ಬೆಳಗ್ಗೆ 11.00ಕ್ಕೆ ಆಯನೂರು ಅರಣ್ಯ ವಲಯ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸಭೆಯನ್ನು ಕರೆಯಲಾಗಿದೆ.
ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಸಭೆಗೆ ಹಾಜರಾಗಿ ಸಲ್ಲಿಸುವುದು ಅಥವಾ ಅರಣ್ಯೇತರ ಪ್ರದೇಶದ ವ್ಯಾಪ್ತಿಯ ಕಡಿತಲೆಗೆ ಸಂಬಂಧಿಸಿದಂತೆ ಉಪ ಅರಣ್ಯ ಸಂರಕ್ಷಣಾದಿಕಾರಿಗಳು, ಶಿವಮೊಗ್ಗ ವಿಭಾಗ ಇಮೇಲ್ dcf.shivamogga@gmail.com, ಇವರಿಗೆ ಹಾಗೂ ಖಾಸಗಿ/ಹಿಡುವಳಿ ಪ್ರದೇಶದಲ್ಲಿ ಬರುವ ಮರಗಳ ಕಡಿತಲೆಗೆ ಸಂಬಂಧಿಸಿದಂತೆ ಆಯನೂರು ಉಪವಿಭಾಗ ಕಚೇರಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಇಮೇಲ್ – acfayanur@gmail.com ಲಿಖಿತ ರೂಪದಲ್ಲಿ ಮಾ. 04 ರೊಳಗಾಗಿ ಸಲ್ಲಿಸುವಂತೆ ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
Forest Department ರಸ್ತೆ ಅಗಲೀಕರಣ ಬಗ್ಗೆ ಮರಗಳ ಕಡಿತಲೆ, ಆಯನೂರು ಅರಣ್ಯ ಉಪವಿಭಾಗದಲ್ಲಿ ಸಾರ್ವಜನಿಕರ ಅಹವಾಲಿಗೆ ಅವಕಾಶ
Date: