Prayag Raj ಸನಾತನ ಹಿಂದೂ ಧರ್ಮದ ಶ್ರೀಮಂತ ಸಾಂಸ್ಕೃತಿಕ ವೈಭವದ “ಮಹಾ ಕುಂಭಮೇಳ” ಎಂಬ ವಿಶ್ವದರ್ಶನದಲ್ಲಿ ನನ್ನ ಲೋಕಸಭಾ ಕ್ಷೇತ್ರದ ಮಹಾಜನತೆ ಅತ್ಯಂತ ಅತ್ಮ ಸಧ್ಬಾವನ ಹಾಗೂ ಧನ್ಯತಾ ಭಾವದಿಂದ ಭಾಗಿಯಾಗಲಿ ಎಂಬ ಮಹಾದಾಸೆಯಿಂದ ಹೊರಡಿಸಿದ “ಶಿವಮೊಗ್ಗ-ಪ್ರಯಾಗ್ ರಾಜ್-ಬನಾರಸ್” ವಿಶೇಷ ರೈಲಿಗೆ ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಚಾಲನೆ ಕೊಟ್ಟು ಯಾತ್ರಾರ್ತಿಗಳನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರು, ಆರ್.ಎಸ್.ಎಸ್ ಪ್ರಮುಖರಾದ ಶ್ರೀ ಗಿರೀಶ್ ಕಾರಂತ್ ಅವರು ಸೇರಿದಂತೆ ಪಕ್ಷದ ಜಿಲ್ಲಾ ಹಾಗೂ ನಗರ ಪ್ರಮುಖರು, ರೈಲ್ವೇ ಅಧಿಕಾರಿಗಳು ಉಪಸ್ಥಿತರಿದ್ದರು.