Chhatrapati Shivaji ಛತ್ರಪತಿ ಶಿವಾಜಿ ಮಹಾರಾಜರ ತತ್ವ ಆದರ್ಶ ಗುಣಗಳು ಅಜರಾಮರ ಎಂದು ನ್ಯಾಮತಿ ತಹಸೀಲ್ದಾರರಾದ ಎಚ್ ಬಿ ಗೋವಿಂದಪ್ಪನವರು ಅಭಿಮತ ವ್ಯಕ್ತಪಡಿಸಿದರು ಅವರು ತಾಸಿಲ್ದಾರ್ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಭಾವಸಾರ್ ಕ್ಷತ್ರಿಯ ಸಮಾಜ ನಾಮದೇವ ಸಿಂಪಿ ಸಮಾಜ ಮರಾಠ ಸಮಾಜ ಹಾಗೂ ಹಲವಾರು ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂದೂ ಸಾಮ್ರಾಜ್ಯವನ್ನು ನಿರ್ಮಾಣ ಮಾಡುವುದರಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದುಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಹಿಡಿ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ಬಂದರು ಶಿವಾಜಿ ಮಹಾರಾಜರ ಶೌರ್ಯ ಸಾಹಸ ರಾಷ್ಟ್ರಭಕ್ತಿ ಆಡಳಿತಗಾರರಿಗೆ ಎಂದೆಂದೂ ಪ್ರೇರಣಾದಿಯ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಆಗ್ರ ಫಂಕ್ತೆಯಲ್ಲಿ ನಿಲ್ಲುವಂಥದ್ದು ಎಂದು ನುಡಿದರು. ಇದೇ ಸಂದರ್ಭದಲ್ಲಿ ಭಾವಸಾರ್ ಕ್ಷತ್ರಿಯ ಸಮಾಜದ ಶಾಮ್ ಸುಂದರವರು ಮಾತನಾಡುತ್ತಾ ಎಲ್ಲಾ ಮಾರಾಟ ಒಳಪಂಗಡಿಗಳು ಸಮಾಜದಲ್ಲಿ ಒಗ್ಗೂಡಿ ಒಳ್ಳೆಯ ಕೆಲಸಗಳನ್ನು ಮಾಡುವುದರ ಮುಖಾಂತರ ನಮ್ಮ ಅಸ್ತಿತ್ವವನ್ನು ನಿರ್ಮಾಣ ಮಾಡಬೇಕಾಗಿದೆ ಇದೇ ಸಂದರ್ಭದಲ್ಲಿ ಹನುಮಂತರಾವ್ ಅವರು ಮಾತನಾಡುತ್ತಾ ಇಂದು ಸಾಧಕ ಹಾಗೂ ಕರ್ನಾಟಕದ ಉದ್ದಕ್ಕೂ ಮರಾಠಿಗರಿಗೂ ಹಾಗೂ ಹಿಂದೂ ಸಮಾಜಕ್ಕೂ ಹೋರಾಡಿದ ವೀರ ಯುಗಪುರುಷ ಶಿವಾಜಿ ಮಹಾರಾಜರ ನಮ್ಮ ಯುವ ಪೀಳಿಗೆಗೆ ದಾರಿ ದೀಪವಾಗಿದೆ ಎಂದು ನೋಡಿದರು. Chhatrapati Shivaji ಇದೇ ಸಂದರ್ಭದಲ್ಲಿ ಶಿಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಮಾತನಾಡುತ್ತ ಶಿವಾಜಿ ಮಹಾರಾಜರ ತತ್ವ ಆದರ್ಶ ಗುಣಗಳು ಹಾಗೂ ಅವರ ನಡೆದ ಬಂದ ದಾರಿ ಕೇವಲ ಜಯಂತಿ ಗೆ ಸೀಮಿತವಾಗದೆ ಅವರ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ಇಂತಹ ಜಯಂತಿಗಳು ಸಾರ್ಥಕವಾಗುತ್ತವೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಮಾರಂಭದಲ್ಲಿ ನಾಮದೇವಿ ಸಿಂಪಿ ಸಮಾಜದ ನಾನೊಬ್ಬ ರಾವ್. ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ರಾಜಾರಾಮ್ ಎಮ್ ಪಿ. ಮಹೇಂದ್ರ ಕಾರ್. ನಾಗರಾಜ್. ಹಾಗೂ ತಹಸಿಲ್ದಾರ್ ಕಚೇರಿಯ. ಶಿರಸ್ತೆದಾರ್ ಶ್ರೀಮತಿ ಕೆಂಚಮ್ಮ ಎಂ ಹೆಚ್. ಶ್ರೀಮತಿ ಸೌಮ್ಯ ಸಿ. ಉಪ ತಹಸೀಲ್ದಾರರಾದ ನಂದಪ್ಪ ಎಸಿ. ಧನುಷ್ ಹೆಚ್ ವಿ. ಡಿಎಂ ವಿಜಯೇಂದ್ರ. ಹಾಗೂ ಪ್ರಮುಖರು ಉಪಸ್ಥಿತರಿದ್ದರು