Sunday, February 23, 2025
Sunday, February 23, 2025

Rotary Club Shivamogga ಮಾತೆಯ ಋಣ ತೀರಿಸಲಾಗದ್ದು- ಡಾ.ಕೆ.ಆರ್.ಪವಿತ್ರಾ

Date:

Rotary Club Shivamogga ನಾನು ಮನೋವೈಧ್ಯೆಯಾಗುವುದಕ್ಕೂ ಮೊದಲು ನಾನೊಬ್ಬ ಕಲಾವಿದೆ. ವಿವಿಧ ವಿಷಯಾಧಾರಿತವಾದ ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿರುವ ನಾನು ಇಂದು “ಮಾತೃಭೂಮಿ” ಎಂಬ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದೇನೆ. ಆದಿ ಶಂಕರಾಚಾರ್ಯರು ನುಡಿದ “ಕೆಟ್ಟ ಮಕ್ಕಳಿರಬಹುದು ಕೆಟ್ಟ ತಾಯಿ ಇರುವುದಿಲ್ಲ” ಎಂಬ ತತ್ವಾಧಾರಿತವಾದ ದೇಶ ನಮ್ಮದು. ಕುಟುಂಬ ಸಮಾಜದ ಘಟಕ. ಈ ಘಟಕದ ವ್ಯಕ್ತಿಗಳಲ್ಲಿ ಸಂಸ್ಕೃತಿ, ನಡೆ, ನುಡಿಗಳನ್ನು ಅರೆದು ಕುಡಿಸಿ, ವ್ಯಕ್ತಿಗಳು ಕುಟುಂಬದ, ಸಮಾಜದ, ದೇಶದ ಸಮರ್ಥ ವ್ಯಕ್ತಿಗಳನ್ನಾಗಿಸುವವಳು ಮಾತೆಯೇ ಹಾಗಾಗಿ ಮಾತೃ ವಂದನಾ ಈ ದಿನದ ನೃತ್ಯದ ತಿರುಳು ಎಂದರು. ಭಾರತ ದೇಶದ ಹಲವು ಕವಿ ಪುಂಗವರು, ಸಾಹಿತಿಗಳು, ದಾರ್ಶನಿಕರು, ಚಿಂತಕರು, ಸಮಸ್ತ ಕಲಾ ಪ್ರಕಾರದವರು ಎಲ್ಲರೂ ಕೂಡ ಮಾತೆಯ ಬಗ್ಗೆ ತಮ್ಮದೇ ಆದ ಸೃಷ್ಠಿತತ್ವ ದೃಷ್ಠಿತತ್ವ ಮತ್ತು ಸಮರ್ಪಣಾ ತತ್ವದ ನೆಲೆಯಲ್ಲಿ ಹಲವು ವಿಚಾರಗಳನ್ನು ಹರಿಸಿದ್ದಾರೆ ಮಾತೆಯ ಋಣ ತೀರಿಸಲಾಗದ್ದು ಎಂದು ರೋಟರಿ ಕ್ಲಬ್ ಶಿವಮೊಗ್ಗದಲ್ಲಿ ಸೇವಾ ಮಾಸಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಮನೋರೋಗ ತಜ್ಙೆ ಹಾಗೂ ಖ್ಯಾತ ನೃತ್ಯಗಾರ್ತಿಯಾದ ಡಾ: ಪವಿತ್ರಾರವರು ‘ಮಾತೃ ಭೂಮಿ’ ಪರಿಕಲ್ಪನೆಯಲ್ಲಿ ವಿಶೇಷ ಉಪನ್ಯಾಸ ಭರಿತ ನೃತ್ಯ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು.

ಮಾತೃ ಭೂಮಿಯೆಂದರೆ ಭಾರತ ಮಾತೆ, ಭಾರತ ಮಾತೆಯ ಪುತ್ರಿ ಕನ್ನಡಮ್ಮ, ಕನ್ನಡಮ್ಮನ ಮಕ್ಕಳು ನಾವೆಲ್ಲರು ಎಂಬ ದಿಸೆಯಲ್ಲಿ ಪು.ತಿ.ನಾ, ಬೇಂದ್ರೆ, ಕುವೆಂಪು, ರೂಪಾ ಹಾಸನ್, ಠಾಗೋರ್ ಮುಂತಾದವರ ಆಯ್ದ ಗೀತೆಗಳಲ್ಲಿ ಇದ್ದಂತಹ ಮಾತೃತ್ವದ ಸೆಲೆಯ ವಿಷಯಗಳೊಂದಿಗೆ ನೃತ್ಯವನ್ನು ಪ್ರಸ್ತುತಪಡಿಸಿ ಆ ಮೂಲಕ ನಮ್ಮ ಜವಾಬ್ದಾರಿ ಮತ್ತು ರಾಷ್ಟçದ ಹಿತ ಕಾಯುವ ಬಗ್ಗೆ ಮನೋಜ್ಙವಾಗಿ ತಿಳಿಸಿದರು.

Rotary Club Shivamogga ವೃತ್ತಿ ಮಾಸಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಶಿವಮೊಗ್ಗದಿಂದ ಡಾ: ಕೃಷ್ಣ ಭಟ್ ಫಿಜಿಶಿಯನ್ ಭದ್ರಾವತಿ, ಶ್ರೀ ಸನಿಲ್ ಕುಮಾರ್ ಭೂಮರೆಡ್ಡಿ ಹೆಚ್ಚುವರಿ ಪೋಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಹಾಗೂ ಶ್ರೀಮತಿ. ಸಂಧ್ಯಾ ಕಾವೇರಿ ಪ್ರಾಂಶುಪಾಲರು ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಶಿವಮೊಗ್ಗ ಇವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ: ಸೂರ್ಯನಾರಾಯಣ ಉಡುಪರು ವಹಿಸಿದ್ದು, ಕಾರ್ಯದರ್ಶಿ ರೊ: ಉಷಾ ಎನ್.ಜಿ. ಕಾರ್ಯಕ್ರಮ ನಿರೂಪಿಸಿದರು.

ಶ್ರೀಮತಿ. ಶ್ರೀರಂಜಿನಿ ದತ್ತಾತ್ರಿ, ಡಾ: ಪಿ. ನಾರಾಯಣ್ ರೊ: ಅನುರಾಧಾ ಶೀರ್ನಾಳಿ, ರೊ: ರಮಾಗೋಪಾಲ್, ರೊ: ಶೈಲಿನ್ ರೊ: ಉಷಾ ಪ್ರಭುರವರು ಡಾ: ಪವಿತ್ರಾರವನ್ನು ಗೌರವಿಸಿದರು.

ರೊ: ಸುಮಲತಾ ಭೂಪಾಳಂ ಪ್ರಾರ್ಥಿಸಿ, ರೊ: ಗೋಪಾಲಕೃಷ್ಣ ಗುಪ್ತ ಸ್ವಾಗತಿಸಿ, ರೊ: ಭಾರ್ಗವಿ ಭಟ್, ರೊ: ವೈ.ವಿ. ಜೋಯ್ಸ್, ರೊ ಕಿಶೋರ್ ಶೀರ್ನಾಳಿ, ರೊ: ಎನ್.ವಿ. ಭಟ್ ರವರು ಸನ್ಮಾನಿತರ ಪರಿಚಯ ಮಾಡಿಕೊಟ್ಟರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club Shivamogga ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ರೊ. ರೂಪ ಪುಣ್ಯಕೋಟಿ

Rotary Club Shivamogga ಇಂದು ಆರೋಗ್ಯವೆ ಭಾಗ್ಯ. ಪ್ರತಿನಿತ್ಯದ ಜಂಜಾಟದಿಂದ,...

Kateel Ashok Pai Memorial College ಆರೋಗ್ಯದ ಮೂರು ಸೂತ್ರಗಳನ್ನು ಪಾಲಿಸಿ-ಡಾ ಧನಂಜಯ ಸರ್ಜಿ

Kateel Ashok Pai Memorial College ಮಂಡಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ...

Madhu Bangarappa ನಗರದ ಆಸ್ತಿ ಮಾಲೀಕರ ಸ್ವತ್ತಿನ ದಾಖಲೆಗಳನ್ನು ಸೃಜಿಸಲು ನಕ್ಷಾ ಯೋಜನೆ ಸಹಕಾರಿ : ಸಚಿವ ಎಸ್. ಮಧು ಬಂಗಾರಪ್ಪ

Madhu Bangarappa ನಗರ ಮತ್ತು ಪಟ್ಟಣ ಪ್ರದೇಶದಲ್ಲಿನ ಸಾರ್ವಜನಿಕರ ಅಸ್ತಿಗಳ ಭೂ...