Puttana Kangal ಚಿತ್ರದ ನಿರ್ದೇಶಕರು ಯಾರು ಅಂತ ನೋಡಿಕೊಂದು ಚಿತ್ರ ಮಂದಿರಕ್ಕೆ ಜನ ಹೋಗುವ ಹೊಸ trend ಕನ್ನಡದಲ್ಲಿ ಹುಟ್ಟು ಹಾಕಿದವರು ಎಂದರೆ ಅದು undoubtedly ಪುಟ್ಟಣ್ಣಕಣಗಾಲ್ ! ಅವರು ಅವತ್ತಿನ ಅವರ ಕಾಲಮಾನದ ಗತಿಗಿಂತ ವೇಗವಾಗಿದ್ದವರು!
Certainly He was ahead of time !!! ಪುಟ್ಟಣ್ಣನವರ ಹೊಸ ಸಿನಿಮಾಗಳು ಇಲ್ಲಿ release ಆದ್ರೆ ಅದನ್ನ ನೋಡಕ್ಕೋಸ್ಕರ ತಮಿಳು ನಾಡು – ಆಂದ್ರದಿಂದ ಜನ ಬಂದ್ ನೋಡ್ತಿದ್ರಂತೆ!!
ಬಹುಶಃ ಪುಟ್ಟಣ್ಣ ತಮ್ಮ ಚಿತ್ರಗಳ ಮೂಲಕ Karnataka tourism promote ಮಾಡಿದಷ್ಟು ಯಾರೂ ಮಾಡಿಲ್ಲ ಅಲ್ವಾ ! ಕನ್ನಡತನ, ಸಾಹಿತ್ಯ-ಸಂಸ್ಕೃತಿಯ ರಾಯಭಾರಿಯಾಗಿದ್ದರು ಪುಟ್ಟಣ್ಣ.
Puttana Kangal ಚಿತ್ರ ರಸಿಕರ ಅಭಿರುಚಿಯನ್ನು ತಮ್ಮ ಮನೋಜ್ಞವಾದ ಚಿತ್ರಗಳ ಮೂಲಕ ನಮ್ಮ ಅಭಿರುಚಿಯನ್ನೇ ಪರಿಷ್ಕರಿಸಿದ ಪುಟ್ಟಣ ಕಣಗಾಲ್ ಅವರಿಗೊಂದು ಗೀತ ನಮನ ಬರುವ ಫೆಬ್ರುವರಿ 9ರ ಭಾನುವಾರ ಸಂಜೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ….. ಸಾಹಿತ್ಯ ಹಾಗು ಸಂಗೀತದ ಸುವರ್ಣಯುಗದ ಮಧುರ ಗೀತೆಗಳನ್ನು
ನಮ್ಮ ನಡುವಿನ ಖ್ಯಾತ ಕಲಾವಿದರು ಹಾಡಲಿದ್ದಾರೆ .
ಶಿವಮೊಗ್ಗದ ಪ್ರತಿಷ್ಠಿತ ಸಂಸ್ಥೆ “ಅಭಿರುಚಿ” ಹಮ್ಮಿಕೊಂಡಿರುವ ಮನಸ್ಸು ಹಗುರಾಗುವ ಈ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ನಗರಿ ಶಿವಮೊಗ್ಗೆಯ ಎಲ್ಲಾ ಸಹೃದಯರಿಗೆ ಆತ್ಮೀಯ ಸ್ವಾಗತ . ಬೆಳ್ಳಿಮೋಡದಂಚಿನ_ಬಂಗಾರದಹಾಡು
~ ವಿನಯ್ ಶಿವಮೊಗ್ಗ