Wednesday, December 17, 2025
Wednesday, December 17, 2025

BSNL ರಸ್ತೆ ಸುರಕ್ಷತೆ & ಭವಿಷ್ಯದಲ್ಲಿ ನೆಟ್ ವರ್ಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕುರಿತು ಜಿಲ್ಲಾ ಮಟ್ಟದ ಸಭೆ

Date:

BSNL ಶಿವಮೊಗ್ಗದ ನಿರೀಕ್ಷಣಾ ಮಂದಿರದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ಭಾರತೀಯ ಸಂಚಾರ ನಿಗಮ ನಿಯಮಿತ (BSNL) ಇದರ ಸಲಹಾ ಸಮಿತಿ ಸಭೆ ಹಾಗು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಲಾಯಿತು.

ಈ ಮಹತ್ವದ ಸಭೆಯಲ್ಲಿ..

  1. ಕೇಂದ್ರ ಸರ್ಕಾರದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಟ್ಟು ಅನುಮೋದನೆಗೊಂಡ ನೂತನ ಮೊಬೈಲ್ ಟವರ್ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು.
  2. ಅನುಮೋದನೆಗೊಂಡ ಮೊಬೈಲ್ ಟವರ್ ಗಳಲ್ಲಿ ಈಗಾಗಲೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ಧವಿರುವ ಟವರ್ ಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು.
  3. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಹಾಗೂ ತಾಂತ್ರಿಕ ಕಾರಣದಿಂದ ಅನುಮತಿಗೆ ತೊಡಕಾಗಿರುವ ಒಟ್ಟು ಮೊಬೈಲ್ ಟವರ್ ಗಳ ವರದಿ ಪಡೆದುಕೊಳ್ಳಲಾಯಿತು.
  4. ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನ ಸಾಮಾನ್ಯರ Network ಸಮಸ್ಯೆಗೆ ಇತಿಶ್ರೀ ಹಾಡಲು ಅರಣ್ಯ ವ್ಯಾಪ್ತಿಯಲ್ಲಿ ಟವರ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಆಗಿರುವ ತೊಡಕುಗಳ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಲಾಯಿತು.
  5. ಈಗಾಗಲೇ ನಿರ್ಮಾಣವಾಗಿ 4G ಮತ್ತು 5G Network ಗಳಿಗೆ ಉನ್ನತಿಕರಣಗೊಳ್ಳಬೇಕಿರುವ ಟವರ್ ಗಳ ಮಾಹಿತಿ ಕೇಳಲಾಯಿತು.
  6. ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸದಾಗಿ ಅವಶ್ಯಕತೆ ಇರುವ ಮೊಬೈಲ್ ಟವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೂತನ ಸದಸ್ಯರೊಂದಿಗೆ ಚರ್ಚೆ ನಡೆಸಿ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಲಾಯಿತು.
  7. ಮೊಬೈಲ್ ಟವರ್ ನಿರ್ಮಾಣದ ನಂತರ ವಿದ್ಯುತ್ ಇಲಾಖೆಯಿಂದ ಟವರ್ ಗಳಿಗೆ ವಿದ್ಯುತ್ ನೀಡಲು ಆಗುತ್ತಿರುವ ವಿಳಂಬ ಕುರಿತು ಚರ್ಚೆ ನಡೆಸಲಾಯಿತು.
  8. ಮೊಬೈಲ್ ಟವರ್ ಗಳ ತ್ವರಿತ ದುರಸ್ತಿ ಮತ್ತು ಸೂಕ್ತ ನಿರ್ವಹಣೆ ಕುರಿತು ಅಗತ್ಯ ಸಲಹೆ ಸೂಚನೆ ನೀಡಲಾಯಿತು.
  9. ⁠ನಗರದ ಸಾಗರದ ಬಿಹೆಚ್ ರಸ್ತೆ ಗಾಡಿ ಕೊಪ್ಪದ ಬಳಿ ಶರವತಿ ಬ್ರಿಡ್ಜ್ ಹತ್ತಿರ ಹಾಗು ದ್ವಾರಕ ಕಲ್ಯಾಣ ಮಂಟಪದ ಹತ್ತಿರ ಕೂಡ ಬ್ಲಾಕ್ ಸ್ಪಾಟ್ಸ್ ಮಾಡಬೇಕು, ಇತ್ತೀಚಿನ ದಿನಗಳಲ್ಲಿ ಹಲವು ಅಪಘಾತಗಳು ಆಗುತ್ತಿರುವುದರಿಂದ ಬ್ಲಾಕ್ ಸ್ಪಾಟ್ಸ್ ಮಾಡಬೇಕೆಂದು ಚರ್ಚೆ ಮಾಡಲಾಯಿತು.

BSNL ಕ್ಷೇತ್ರದ ಜನಸಾಮಾನ್ಯರ ಅನುಕೂಲಕ್ಕೆ ಮತ್ತು ಭವಿಷ್ಯದಲ್ಲಿ ನೆಟ್ವರ್ಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಲು ಸೇರಿದಂತೆ ಹಾಗು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಮತ್ತು ಇನ್ನು ಅನೇಕ ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಹಾಗೂ ಸದಸ್ಯರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...